ಐಸಿಸ್ 
ದೇಶ

ಕರ್ನಾಟಕದ ಇಬ್ಬರು ಸೇರಿ ಐಸಿಸ್ ಪರ ಕಾದಾಡುತ್ತಿದ್ದ ಐವರು ಸಾವು

ಐಸಿಸ್ ಉಗ್ರ ಸಂಘಟನೆ ಸೇರಿದಕರ್ನಾಟಕ ಇಬ್ಬರು ಸೇರಿ ಐದು ಮಂದಿ ಮೃತಪಟ್ಟಿದ್ದಾರೆನ್ನುವ ಮಾಹಿತಿ ಭಾರತೀಯ ಗುಪ್ತಚರ ಸಂಸ್ಥೆಗೆ...

ನವದೆಹಲಿ: ಐಸಿಸ್ ಉಗ್ರ ಸಂಘಟನೆ ಸೇರಿದಕರ್ನಾಟಕ ಇಬ್ಬರು ಸೇರಿ ಐದು ಮಂದಿ ಮೃತಪಟ್ಟಿದ್ದಾರೆನ್ನುವ ಮಾಹಿತಿ ಭಾರತೀಯ ಗುಪ್ತಚರ ಸಂಸ್ಥೆಗೆ ಸಿಕ್ಕಿದೆ. ಬೆಂಗಳೂರಿನ ಫಯಾಜ್ ಮಸೂದ್, ಭಟ್ಕಳದ ಮಾಜಿ ಸಿಮಿಮುಖಂಡ ಅಬ್ದುಲ್ ಖಾದಿರ್ ಸುಲ್ತಾನ್ ಅರ್ಮರ್ ಸೇರಿ ಒಟ್ಟು ಐದು ಮಂದಿಮೃತಪಟ್ಟಿದ್ದಾರೆ. ಭಾರತದಿಂದ ಒಟ್ಟು 11 ಮಂದಿ ಯುವಕರು ಐಸಿಸ್ ಸೇರ್ಪಡೆಯಾಗಿದ್ದರು. ಇವರಲ್ಲಿ ಮಹಾರಾಷ್ಟ್ರದ ಕಲ್ಯಾಣದ ಆರೀಬ್ ಮಜೀದ್ ವಾಪಸಾಗಿದ್ದರೆ, ಉಳಿದ ಐವರು ಇನ್ನೂ ಐಸಿಸ್ ಪರ ಹೋರಾಟ ನಡೆಸುತ್ತಿದ್ದಾರೆ. ಹೈದರಾಬಾದ್ ನಿಂದ ಲಂಡನ್  ವಿದ್ಯಾರ್ಥಿ ಹನೀಫ್ ವಸೀಂ ಎಂಬಾತ ಕೂಡ ಐಸಿಸ್ ಪರ ಹೋರಾಟದಲ್ಲಿ ಮೃತಪಟ್ಟಿದ್ದಾನೆ ಎನ್ನುವ ಮಾಹಿತಿ ಗುಪ್ತಚರ  ಸಂಸ್ಥೆ ಬಳಿ ಇದೆ ಎಂದು ಡೈಲಿ ಮೇಲ್ ವರದಿ ಮಾಡಿದೆ.  ಐಸಿಸ್ ಸೇರಿದ 11 ಮಂದಿಯಲ್ಲಿ ಕೆಲವರು ಕೆಲ ಕಾಲಗಲ್ಫ್ ರಾಷ್ಟ್ರಗಳಲ್ಲಿದ್ದರು. ಇವರೆಲ್ಲ ದಕ್ಷಿಣ ಭಾರತಕ್ಕೆ ಸೇರಿದವರು ಎನ್ನುವುದು ಗುಪ್ತಚರದಳದ ಬಳಿ ಇರುವ ಸದ್ಯದ ಮಾಹಿತಿ.ಮೂಲಗಳ ಪ್ರಕಾರ ಐಸಿಸ್ ಪರಹೋರಾಟ ನಡೆಸುತ್ತಿರುವ ಯುವಕರಲ್ಲಿಬಹುತೇಕರು ತಾಯ್ನಾಡಿಗೆ ಮರಳುವ ಇಂಗಿತ ವ್ಯಕ್ತಪಡಿಸಿದ್ದಾರೆ. ಅದಕ್ಕಾಗಿ ಅವರುತಮ್ಮ ಕುಟುಂಬದ ಜತೆಗೆ ನಿರಂತರ ಸಂಪರ್ಕ ದಲ್ಲಿದ್ದಾರೆ. ಇವರಲ್ಲಿ ಒಬ್ಬ ಉಗ್ರರಿಂದತಪ್ಪಿಸಿಕೊಳ್ಳಲೂ ಪ್ರತ್ನಿಸಿದ್ದನಂತೆ.ಪಾಶ್ಚಿಮಾತ್ಯ ದೇಶಗಳಲ್ಲಿ ಹೆಚ್ಚಿನ ಯುವಜನರು ಐಸಿಸ್‍ನತ್ತ ಆಕರ್ಷಿತರಾಗುತ್ತಿರುವುದರಿಂದ ಭಾರತೀಯ ಗುಪ್ತಚರ ದಳವು ಎಚ್ಚರವಹಿಸಿದೆ. ಐಸಿಸ್ ಪರ ಸಹಾನುಭೂತಿ ಹೊಂದಿರುವ ವ್ಯಕ್ತಿಗಳ ಮೇಲೆ ಕಣ್ಣಿಟ್ಟಿದೆ. ಕೆಲತಿಂಗಳಿಂದ ಗುಪ್ತಚರ ದಳವು ದೇಶಾದ್ಯಂತಒಂದಷ್ಟು ಮಂದಿ ಐಸಿಸ್ ಪರ ಸಹಾನೂಭೂತಿಹೊಂದಿರುವವರ ಪಟ್ಟಿ ಮಾಡಿದೆ. ಸಿರಿಯಾದಿಂದ ಈಗಾಗಲೇ ವಾಪಸಾಗಿ ರುವಕಲ್ಯಾಣದ ಯುವಕ ಅಜೀಬ್ ಮಜೀದ್ನಿಂದ ಗುಪ್ತಚರ ಸಂಸ್ಥೆಗಳು ಈಗಾಗಲೇಸಾಕಷ್ಟು ಮಾಹಿತಿ ಕಲೆ ಹಾಕಿವೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಭೀಕರ ಮಳೆಗೆ ಜಮ್ಮು-ಕಾಶ್ಮೀರ ತತ್ತರ: ಸಾವಿನ ಸಂಖ್ಯೆ 41ಕ್ಕೆ ಏರಿಕೆ; ಕೇಂದ್ರದಿಂದ ನೆರವಿನ ಭರವಸೆ; ಮುಂದುವರೆದ ರಕ್ಷಣಾ ಕಾರ್ಯಾಚರಣೆ

ಭಾರತದ ಮೇಲೆ ಅಮೆರಿಕಾ ಸುಂಕಾಸ್ತ್ರ: ದೇಶ ರಕ್ಷಿಸುವಲ್ಲಿ ಪ್ರಧಾನಿ ಮೋದಿ ವಿಫಲ; AICC ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ವಾಗ್ದಾಳಿ

ಜಮ್ಮು-ಕಾಶ್ಮೀರದ ಬಂಡಿಪೋರಾದಲ್ಲಿ ಗುಂಡಿನ ಚಕಮಕಿ: ಇಬ್ಬರು ಉಗ್ರರ ಹತ್ಯೆ

RSS Song Controversy: ಡಿಕೆಶಿ ಆರ್‌ಎಸ್‌ಎಸ್‌ ಗೀತೆ ಹಾಡಿದ್ದು ತಪ್ಪು, ಕ್ಷಮೆ ಕೇಳಿದ್ದರಿಂದ ಎಲ್ಲವೂ ಮುಗಿದಿದೆ; ಮಲ್ಲಿಕಾರ್ಜುನ ಖರ್ಗೆ

ವಾಲ್ಮೀಕಿ ನಿಗಮ ಹಗರಣ: ಜಾರಿ ನಿರ್ದೇಶನಾಲಯದಿಂದ 5 ಕೋಟಿ ಮೌಲ್ಯದ ಆಸ್ತಿ ಮುಟ್ಟುಗೋಲು !

SCROLL FOR NEXT