ರಾಜಭವನ 
ದೇಶ

2014 -15 ರಲ್ಲಿ ರಾಜಭವನ ನವೀಕರಣಕ್ಕೆ ಖರ್ಚಾಗಿದ್ದು 4 ಕೋಟಿ!

ರಾಜಭವನ ನವೀಕರಣಕ್ಕಾಗಿ 2014 -15 ನೇ ಸಾಲಿನಲ್ಲಿ 4 ಕೋಟಿ ರೂಪಾಯಿ ವೆಚ್ಚವಾಗಿರುವುದು ಮಾಹಿತಿ ಹಕ್ಕು ಕಾಯ್ದೆಯಡಿ ಬಹಿರಂಗವಾಗಿದೆ

ಬೆಂಗಳೂರು: ರಾಜಭವನ ನವೀಕರಣಕ್ಕಾಗಿ 2014 -15 ನೇ ಸಾಲಿನಲ್ಲಿ  4 ಕೋಟಿ ರೂಪಾಯಿ ವೆಚ್ಚವಾಗಿರುವುದು ಮಾಹಿತಿ ಹಕ್ಕು ಕಾಯ್ದೆಯಡಿ ಬಹಿರಂಗವಾಗಿದ್ದು ಸಾರ್ವಜನಿಕ ವಲಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ.  

ಒಂದೇ ವರ್ಷದಲ್ಲಿ ನವೀಕರಣ  ಕಾಮಗಾರಿಗೆ 4 ಕೋಟಿ ರೂಪಾಯಿ ವೆಚ್ಚವಾಗಿದ್ದು, ಈ ಪೈಕಿ 7 ಸಿವಿಲ್ ಕಾಮಗಾರಿಗಳಿಗೆ 3 ಕೋಟಿ ರೂಪಾಯಿ ವೆಚ್ಚವಾಗಿದ್ದರೆ 1 ಕೋಟಿ ರೂ ವೆಚ್ಚದಲ್ಲಿ 18 ವಿದ್ಯುತ್  ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗಿದೆ. ರಾಜಭವನ ಆವರಣದ ಕಟ್ಟಡಗಳ ಸುಧಾರಣೆಗಾಗಿ ರಾಜ್ಯಪಾಲರ ಕಾರ್ಯದರ್ಶಿ 2014 ರ ಜೂನ್.17 ರಂದು ಸರ್ಕಾರಕ್ಕೆ ಪತ್ರ ಬರೆದಿದ್ದರು. ಇದಕ್ಕೆ ಆಡಳಿತಾತ್ಮಕ ಅ ನುಮೋದನೆಯೂ ದೊರೆತಿತ್ತು.  

ಲೋಕೋಪಯೋಗಿ ಇಲಾಖೆ ಮಾಹಿತಿ ಹಕ್ಕು ಕಾಯ್ದೆಯಡಿ ನೀಡಿರುವ ಮಾಹಿತಿಯಂತೆ ರಾಜ್ಯಪಾಲರು ನವದೆಹಲಿಯಲ್ಲಿರುವ ರಾಷ್ಟ್ರಪತಿ ಭವನ ಹಾಗೂ ಪ್ರಧಾನ ಮಂತ್ರಿ  ಕಚೇರಿಗೆ   ಭೇಟಿ ನೀಡಿದ ಬಳಿಕ  ತಮ್ಮ ಕಚೇರಿ ಹಾಗೂ ನಿವಾಸಗಳನ್ನು ಅಭಿವೃದ್ಧಿಪಡಿಸಲು ಇಚ್ಛಿಸಿದ್ದರು. ರಾಜಭವನದ  ಘನತೆಗೆ ತಕ್ಕಂತೆ ಹಾಲಿ ಇರುವ ರಾಜ್ಯಪಾಲರ ನಿವಾಸ, ಕಚೇರಿ ಕಟ್ಟಡಗಳನ್ನು  ಮೇಲ್ದರ್ಜೆಗೇರಿಸುವ ಸಲುವಾಗಿ ರಾಜ್ಯಪಾಲರ ಕಾರ್ಯದರ್ಶಿಗಳು ಸರ್ಕಾರಕ್ಕೆ ಪತ್ರ ಬರೆದಿದ್ದರು ಎಂದು ತಿಳಿದುಬಂದಿದೆ. ನವೀಕರಣ ಕಾಮಗಾರಿಗಳನ್ನು  ಕೈಗೊಳ್ಳಲು ಕರ್ನಾಟಕ ಸಾರ್ವಜನಿಕ ಸಂಗ್ರಹಣೆಯಲ್ಲಿ ಪಾರದರ್ಶಕತೆ ಅಧಿನಿಯಮ-299 ರ ಕಲಂ 4 (ಜಿ ಅಡಿ ಟೆಂಡರ್  ನಿಂದ  ವಿನಾಯಿತಿಯನ್ನು  ಸಹ ನೀಡಲಾಗಿದೆ.

ಯಾವುದಕ್ಕೆ ಎಷ್ಟು ವೆಚ್ಚ?

*ರಾಜ್ಯಪಾಲರ ಕಚೇರಿ, ಎಡಿಸಿ ಕಚೇರಿಗೆ ಮರದ  ಹಾಸು, ಗ್ಲಾಸ್ ಡೋರ್, ಪೇಂಟಿಂಗ್ ಕೆಲಸ,  ಡೋರ್ ಫಿಟ್ಟಿಂಗ್ ಗಾಗಿ 40 ಲಕ್ಷ

* ವಿಶೇಷಾಧಿಕಾರಿ, ಆಪ್ತ ಕಾರ್ಯದರ್ಶಿ ಕೊಠಡಿ,  ಮುಖ್ಯ ಮೊಗಸಾಲೆಯಲ್ಲಿ ಫಾಲ್ಸ್ ಸೀಲಿಂಗ್, ಮರದ  ಹಾಸು ಗ್ಲಾಸ್ ಡೋರ್, ಮರದ ಕೆಲಸ,  ಪೇಂಟಿಂಗ್- 30 ಲಕ್ಷ

*ಟೆಲಿಫೋನ್ ಎಕ್ಸ್ ಚೇಂಜ್,  ಕಂಪ್ಯೂಟರ್ ವಿಭಾಗ, ಔಷಧ  ಮಳಿಗೆ, ಎಡಿಎಂ ಬ್ಲಾಕ್, ವಿಶ್ವವಿದ್ಯಾಲಯ  ವಿಭಾಗದ ಮಾರ್ಪಾಡು- 25 ಲಕ್ಷ

*ಆವರಣದಲ್ಲಿ ಕಲ್ಲು ಹಾಸು  ಅಳವಡಿಕೆ, ಇತರೆ ಕೆಲಸಗಳಿಗೆ- 35 ಲಕ್ಷ

*ಅಡುಗೆ ಮನೆ, ಊಟದ ಕೊಠಡಿ ಶೌಚಾಲಯದಲ್ಲಿ ಗ್ರಾನೈಟ್, ಟೈಲ್ಸ್, ಫಾಲ್ಸ್ ರೂಫಿಂಗ್,  ಇತರೆ ಕಾಮಗಾರಿಗಳಿಗೆ- 50 ಲಕ್ಷ

*ಗ್ಲಾಸ್ ಹೌಸ್,  ಬ್ಯಾಂಕ್ವೆಟ್ ಹಾಲ್,  ವಾಹನ ಪಾರ್ಕಿಂಗ್ ಗೆ  ಮೇಲ್ಛಾವಣಿ- 50  ಲಕ್ಷ

* ರಾಜ್ಯಪಾಲರ  ಉಪಯೋಗಕ್ಕಾಗಿ ರೂ.15 ಲಕ್ಷ ವೆಚ್ಚದ ಎಲ್.ಜಿ ಅಲ್ಟ್ರಾ  ಹೆಚ್.ಡಿ 3 ಡಿ ಟಿ.ವಿ ಖರೀದಿಗೆ 15 ಲಕ್ಷ

*ಮುಖ್ಯ  ಕಟ್ಟಡ ಹಿಂಭಾಗದ ಪಾದಚಾರಿ ಮಾರ್ಗದ ಮುಂದುವರಿಕೆ, ಕ್ವಾರ್ಟಸ್ ಗಳಲ್ಲಿ ವಿವಿಧ ಕಾಮಗಾರಿಗೆ- 50 ಲಕ್ಷ

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಜಮ್ಮುವಿನಲ್ಲಿ ಭೀಕರ ಮಳೆಯಿಂದ ಭಾರೀ ಅನಾಹುತ ಸೃಷ್ಟಿ: ವೈಷ್ಣೋದೇವಿ ಮಾರ್ಗದಲ್ಲಿ ಭೂಕುಸಿತ, ಕನಿಷ್ಠ 13 ಮಂದಿ ಸಾವು

ದೇಶಾದ್ಯಂತ ಗಣೇಶ ಚತುರ್ಥಿ ಸಂಭ್ರಮ: ದೇವಾಲಯಗಳಲ್ಲಿ ವಿಶೇಷ ಪೂಜೆ, ರಾಷ್ಟ್ರಪತಿ, ಪ್ರಧಾನಿ, ಮುಖ್ಯಮಂತ್ರಿಗಳಿಂದ ಶುಭಾಶಯ

ಧರ್ಮಸ್ಥಳ ಕೇಸ್: ತನಿಖೆ ಶೀಘ್ರಗತಿ ಪೂರ್ಣಗೊಳಿಸಲು SIT ಪ್ರಯತ್ನ; ಗೃಹ ಸಚಿವ ಡಾ.ಜಿ.ಪರಮೇಶ್ವರ್

ಕೃಷ್ಣಾ ಮೇಲ್ದಂಡೆ ಯೋಜನೆ-3: ಸರ್ವಪಕ್ಷ ನಾಯಕರೊಂದಿಗೆ ಶೀಘ್ರದಲ್ಲೇ ಸಭೆ; ಡಿಕೆ.ಶಿವಕುಮಾರ್

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

SCROLL FOR NEXT