ಬಾಲಕಾರ್ಮಿಕ(ಸಾಂದರ್ಭಿಕ ಚಿತ್ರ) 
ದೇಶ

ಭಾರತದಲ್ಲಿದ್ದಾರೆ 24 ಲಕ್ಷ ಬಾಲಕಾರ್ಮಿಕರು: ಐಎಲ್ಒ ವರದಿ

ಬಾಲಕಾರ್ಮಿಕರ ಬಗ್ಗೆ ಇಂಟರ್ನ್ಯಾಷನಲ್ ಲೇಬರ್ ಆರ್ಗನೈಸೇಶನ್ ನ ಅಂತಾರಾಷ್ಟ್ರೀಯ ವರದಿ ಪ್ರಕಟವಾಗಿದೆ.

ನವದೆಹಲಿ: ಬಾಲಕಾರ್ಮಿಕರ ಬಗ್ಗೆ ಅಂತಾರಾಷ್ಟ್ರೀಯ ಕಾರ್ಮಿಕ ಸಂಸ್ಥೆಯ ವರದಿ ಪ್ರಕಟವಾಗಿದ್ದು  ಭಾರತದಲ್ಲಿ ಸುಮಾರು 24 ಲಕ್ಷ ಬಾಲಕಾರ್ಮಿಕರು ಅಪಾಯಕಾರಿ ಕೈಗಾರಿಕೆಗಳಲ್ಲಿ  ಕೆಲಸ ಮಾಡುತ್ತಿದ್ದಾರೆ ಎಂಬ ಮಾಹಿತಿ ಹೊರಬಿದ್ದಿದೆ.

ಪಾಕಿಸ್ತಾನದಲ್ಲಿ 13ಲಕ್ಷ  ಹಾಗೂ ಇಂಡೋನೇಷಿಯಾದಲ್ಲಿ 12 ಲಕ್ಷ ಬಾಲಕಾರ್ಮಿಕರಿದ್ದಾರೆ ಎಂದು ವರದಿ ತಿಳಿಸಿದೆ. ಇಂಟರ್ನ್ಯಾಷನಲ್ ಲೇಬರ್ ಆರ್ಗನೈಸೇಶನ್( ಐ.ಎಲ್.ಒ) ಅಧ್ಯಯನದ ಪ್ರಕಾರ,  ವಿಶ್ವದ ಮೂರನೇ ಎರಡರಷ್ಟು  ಬಾಲಕಾರ್ಮಿಕರು ಭಾರತ-ಈಜಿಪ್ಟ್ ನಲ್ಲಿದ್ದಾರೆ.  

ಜಾಗತಿಕ ಮಟ್ಟದಲ್ಲಿ ಬಾಲಕಾರ್ಮಿಕ ಪದ್ಧತಿ ಶೇ. 17.8 ರಷ್ಟಿಂದ ಶೇ.13 ಕ್ಕೆ ಇಳಿಕೆಯಾಗಿದ್ದು 5 ರಿಂದ 14 ವರ್ಷದವರೆಗಿನ ಬಾಲಕಾರ್ಮಿಕರ ಜನಸಂಖ್ಯೆ ಶೇ.9 .3 ರಿಂದ 3 .1 ಕ್ಕೆ ಇಳಿಕೆಯಾಗಿದೆ.  2004 -05 ರಲ್ಲಿ ಭಾರತದಲ್ಲಿ  90.75 ಲಕ್ಷದಷ್ಟಿದ್ದ 5 ರಿಂದ 14 ವರ್ಷದವರೆಗಿನ ಬಾಲಕಾರ್ಮಿಕರ ಜನಸಂಖ್ಯೆ 2009 - 2010 ರ ವೇಳೆಗೆ 49.84 ಲಕ್ಷಕ್ಕೆ ಇಳಿಕೆಯಾಗಿದೆ. ಬಾಲಕಾರ್ಮಿಕ ಪದ್ಧತಿ ಕಡಿಮೆಯಾಗಿದ್ದರೂ, ಪ್ರಸ್ತುತ ಕೈಗಾರಿಕೆಗಳಲ್ಲಿ  ಕಾರ್ಯನಿರ್ವಹಿಸುತ್ತಿರುವ ಬಾಲಕಾರ್ಮಿಕರ ಬಗ್ಗೆ ನಿಖರ ಅಂಕಿ ಅಂಶಗಳಿಲ್ಲ ಎಂದು ಚೈಲ್ಡ್ ರಿಲೀಫ್ ಆಂಡ್ ಯು (ಸಿ.ಆರ್.ವೈ) ನ  ವರ್ಷಾ ಪಿಳ್ಳೈ  ತಿಳಿಸಿದ್ದಾರೆ.  

ಕೃಷಿಯಲ್ಲಿ ಹೆಚ್ಚು ಇಳುವರಿ ಬೀಜಗಳ ಅಭಿವೃದ್ಧಿ ಹಾಗೂ ಐಟಿ ಕೈಗಾರಿಕೆಯ ಕ್ಷಿಪ್ರ ಬೆಳವಣಿಗೆ ಹೆಚ್ಚಿನ ಕೌಶಲ್ಯವಿರುವ ನೌಕರರ ಬೇಡಿಕೆಯನ್ನು ಹೆಚ್ಚಿಸಿರುವ ಪರಿಣಾಮ,  ಮಕ್ಕಳು ಶಾಲೆ ತೊರೆಯುವುದು ಕಡಿಮೆಯಾಗುತ್ತಿದೆ ಎಂದು ಐ.ಎಲ್.ಒ ವರದಿ ತಿಳಿಸಿದೆ. ಶಿಕ್ಷಣ ಹಕ್ಕು
ಕಾಯ್ದೆ 5 -14 ವರ್ಷದ ಮಕ್ಕಳಿಗೆ ಮಾತ್ರ ಅನ್ವಯವಾಗಲಿದ್ದು, ಆ ವಯೋಮಿತಿ ಕಳೆದ ಬಳಿಕ ಆರ್.ಟಿ.ಇ ಫಲಾನುಭವಿಗಳ ಭವಿಷ್ಯ ಏನಾಗಿದೆ ಎಂಬುದು ಯಾರಿಗೂ ತಿಳಿಯುವುದಿಲ್ಲ ಆದ್ದರಿಂದ ಬಾಲಕಾರ್ಮಿಕರ ಪದ್ಧತಿಯನ್ನು ಕೊನೆಗಾಣಿಸಲು ನಿಯಮಾವಳಿಗಲ ಬಗ್ಗೆ ಹೆಚ್ಚಿನ ಗಮನ ಹರಿಸಬೇಕು ಎಂದು ಭಾರತೀಯ ಮಕ್ಕಳ ಕಲ್ಯಾಣ ಮಂಡಳಿಯ ಜಂಟಿ ನಿರ್ದೇಶಕ ಗಿರಿರಾಜ್ ಕುಮಾರ್ ಅಭಿಪ್ರಾಯಪಟ್ಟಿದ್ದಾರೆ. ಜಾಗತಿಕ ಮಟ್ಟದಲ್ಲಿ ಒಟ್ಟಾರೆ  17 ಕೋಟಿ  ಬಾಲಕಾರ್ಮಿಕರಿದ್ದಾರೆ ಎಂದು ಐ.ಎಲ್.ಒ ವರದಿ ತಿಳಿಸಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

PSLV-C62 ಮಿಷನ್ ವಿಫಲ: ಕೊನೆಯ ಹಂತದಲ್ಲಿ ಎದುರಾದ ಸಮಸ್ಯೆ, ISROಗೆ ಹಿನ್ನಡೆ

ಇತಿಹಾಸ ಕಲಿಯಬೇಕಿದ್ದರೆ ಕಾಲೇಜಿಗೆ ಹೋಗುತ್ತಾರೆ, ನಿಮ್ಮ ಬೋಧನೆಯ ಅಗತ್ಯವಿಲ್ಲ: ಪ್ರಧಾನಿ ಮೋದಿ ವಿರುದ್ಧ ಪ್ರಿಯಾಂಕ್ ಖರ್ಗೆ ವಾಗ್ದಾಳಿ

MGNREGA Row: ಯಾವಾಗ-ಎಲ್ಲಿ ಬೇಕಾದರೂ ಚರ್ಚೆಗೆ ಸಿದ್ಧ, ಡೈಲಾಗ್‌ ವೀರ HDK ಬಂದರೆ ಒಳ್ಳೆಯದು; ಡಿ.ಕೆ.ಶಿವಕುಮಾರ್

Positive Vibes ಗಾಗಿ ಮನೆಯಲ್ಲಿ ಯಾವ ಗಿಡ ಬೆಳಸಬೇಕು: ಮುಳ್ಳಿನ ಗಿಡಗಳಲ್ಲಿದೆಯೇ ನಕರಾತ್ಮಕ ಶಕ್ತಿ; ಮಲ್ಲಿಗೆ ಮತ್ತು ತುಳಸಿಗೆ ಸೂಕ್ತ ಸ್ಥಳ ಯಾವುದು?

ಬೆಂಗಳೂರು: 6 ವರ್ಷದ ಬಾಲಕಿ ಅಪಹರಿಸಿ ಹತ್ಯೆ ; ಕೊಲೆಗೂ ಮುನ್ನ ಲೈಂಗಿಕ ದೌರ್ಜನ್ಯ - ಶವ ಪರೀಕ್ಷೆ ವೇಳೆ ಸತ್ಯ ಬಹಿರಂಗ!

SCROLL FOR NEXT