ರಾಜಧಾನಿ ತುಬುಲಿಸಿ ರಸ್ತೆಯಲ್ಲಿ ಕಂಡು ಬಂದ ನೀರಾನೆ 
ದೇಶ

ಜಾರ್ಜಿಯಾದ ರಸ್ತೆಯಲ್ಲಿ ಕಾಡುಮೃಗಗಳು

ಸಿಂಹ, ಹುಲಿ, ಘೇಂಡಾಮೃಗ ಮತ್ತಿತರ ಪ್ರಾಣಿಗಳು ರಸ್ತೆಯಲ್ಲಿ ರಾಜಾರೋಷವಾಗಿ ಓಡಾಡುತ್ತಿವೆ... ಜನ ಮಾತ್ರ ಜೀವ ಬೆದರಿಕೆಯಿಂದ ಮನೆಯೊಳಗೆ...

ತುಬುಲಿಸಿ: ಸಿಂಹ, ಹುಲಿ, ಘೇಂಡಾಮೃಗ ಮತ್ತಿತರ ಪ್ರಾಣಿಗಳು ರಸ್ತೆಯಲ್ಲಿ ರಾಜಾರೋಷವಾಗಿ ಓಡಾಡುತ್ತಿವೆ... ಜನ ಮಾತ್ರ ಜೀವ ಬೆದರಿಕೆಯಿಂದ ಮನೆಯೊಳಗೆ ಅಡಗಿ ಕೂತಿದ್ದಾರೆ! ಇದು ಜಾರ್ಜಿಯಾದ ರಾಜಧಾನಿ ತುಬುಲಿಸಿಯಲ್ಲಿ ಭಾನುವಾರ ಕಂಡ ದೃಶ್ಯ. ಕಳೆದ ಕೆಲ ದಿನಗಳಿಂದ ಸುರಿಯುತ್ತಿರುವ ಭಾರಿ ಮಳೆಯಿಂದಾಗಿ ತುಬುಲಿಸಿಯಲ್ಲಿ ಭಾರಿ ಪ್ರವಾಹ ಕಾಣಿಸಿಕೊಂಡಿದೆ. ಇದರಿಂದ ನಗರದಲ್ಲಿರುವ ಪ್ರಾಣಿ ಸಂಗ್ರಹಾಲಯ ಸಂಪೂರ್ಣವಾಗಿ ಜಲಾವೃತವಾಗಿದ್ದು, ಅಲ್ಲಿದ್ದ ಪ್ರಾಣಿಗಳೆಲ್ಲ ತಪ್ಪಿಸಿಕೊಂಡಿವೆ.ಈ ರೀತಿ ತಪ್ಪಿಸಿಕೊಂಡವುಗಳಲ್ಲಿ ಹುಲಿ, ಸಿಂಹ, ಘೇಂಡಾಮೃಗ, ಆನೆ, ಹಾವಿನಂಥ ಅಪಾಯಕಾರಿ ಪ್ರಾಣಿಗಳೂ ಇವೆ. ಈ ಹಿನ್ನೆಲೆಯಲ್ಲಿ ಸರ್ಕಾರ ಮುನ್ನೆಚ್ಚರಿಕೆ ಕ್ರಮವಾಗಿ ಸಾರ್ವಜನಿಕರಿಗೆ ಮನೆಯಿಂದ ಹೊರ ಬರದಂತೆ ಸೂಚಿಸಿದೆ. ಈ ನಡುವೆ, ಪೊಲೀಸರು ಮತ್ತು ಸೇನೆಗೆ ಅಪಾಯಕಾರಿ ಪ್ರಾಣಿಗಳನ್ನು ಮತ್ತೆ ಹಿಡಿಯಲು ಅಥವಾ ಗುಂಡಿಟ್ಟುಕೊಲ್ಲಲೂ ಆದೇಶಿಸಿದೆ.
ಪ್ರವಾಹದ ಅಬ್ಬರಕ್ಕೆ ಸಿಲುಕಿ ಪ್ರಾಣಿ ಸಂಗ್ರಹಾಲಯ ಸಂಪೂರ್ಣವಾಗಿ ನಾಶವಾಗಿದೆ. ಅಲ್ಲೀಗ ಯಾವುದೇ ಪ್ರಾಣಿಗಳಿಲ್ಲ. ಹಾಗಾಗಿ ಮುಕ್ತವಾಗಿ ಸಂಚರಿಸುತ್ತಿರುವ ಪ್ರಾಣಿಗಳ ಮತ್ತೆ ಹಿಡಿಯುವುದು ಸರ್ಕಾರಕ್ಕೆ ಸವಾಲಾಗಿ ಪರಿಣಮಿಸಿದೆ. ಪ್ರಾಣಿಗಳು ಝೂನಿಂದ ತಪ್ಪಿಸಿಕೊಳ್ಳುವ ವೇಳೆ ಇಬ್ಬರು ಸಿಬ್ಬಂದಿಯನ್ನು ಕೊಂದು ಹಾಕಿದೆ ಎಂದು ಹೇಳಲಾಗಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಜಮ್ಮುವಿನಾದ್ಯಂತ ಭಾರಿ ಮಳೆ: ಅಪಾರ ಪ್ರಮಾಣದ ಹಾನಿ, 10 ಮಂದಿ ಸಾವು: ಕೊಚ್ಚಿ ಹೋದ ರಸ್ತೆ, ಸೇತುವೆಗಳು!

ಫೈಟರ್ ಜೆಟ್‌ ಇಂಜಿನ್ ಖರೀದಿ: ಅಮೆರಿಕಾದ GE ಸಂಸ್ಥೆಯೊಂದಿಗೆ $1 ಬಿಲಿಯನ್ ಮೊತ್ತದ ಒಪ್ಪಂದಕ್ಕೆ ಭಾರತ ಸಿದ್ಧತೆ!

ಡಿಕೆಶಿ ಕ್ಷಮೆ ಕೇಳಬಾರದಿತ್ತು; ಮುಲಾಜಿಲ್ಲದೆ ಕಾಂಗ್ರೆಸ್ ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ಬಿಸಾಕಬೇಕಿತ್ತು- ಆರ್. ಅಶೋಕ್

ಸುಂಕ ಸಮರ: Trump 4 ಬಾರಿ ಕರೆ ಮಾಡಿದರೂ ಉತ್ತರಿಸದ PM Modi; ಅಮೆರಿಕ ನಿಯೋಗಕ್ಕೂ No Entry!

SCROLL FOR NEXT