ಬಾನ್ ಕೀ ಮೂನ್ 
ದೇಶ

ಯೋಗದ ಮಹತ್ವ ಸಾರಿದ ವಿಶ್ವಸಂಸ್ಥೆ ಕಾರ್ಯದರ್ಶಿ ಬಾನ್ ಕೀ ಮೂನ್

ಜೂನ್ 21 ರಂದು ಜಗತ್ತಿನಾದ್ಯಂತ ಯೋಗ ದಿನಾಚರಣೆಯನ್ನು ಆಚರಿಸಲಾಗುತ್ತಿದ್ದು, ಭಾರತದ ಪುರಾತನ ಯೋಗ ಪದ್ಧತಿ ಕುರಿತಂತೆ ವಿಶ್ವಸಂಸ್ಥೆ ಮಹಾ...

ನವದೆಹಲಿ: ಜೂನ್ 21 ರಂದು ಜಗತ್ತಿನಾದ್ಯಂತ ಯೋಗ ದಿನಾಚರಣೆಯನ್ನು ಆಚರಿಸಲಾಗುತ್ತಿದ್ದು, ಭಾರತದ ಪುರಾತನ ಯೋಗ ಪದ್ಧತಿ ಕುರಿತಂತೆ ವಿಶ್ವಸಂಸ್ಥೆ ಮಹಾ ಕಾರ್ಯದರ್ಶಿ ಬಾನ್ ಕೀ ಮೂನ್ ಅವರು ಯೋಗ ಎಂಬುದು ಮನಸ್ಸಿಗೆ ಶಾಂತಿ, ನೆಮ್ಮದಿ ನೀಡುತ್ತದೆ ಎಂದಿದ್ದಾರೆ.

ಯೋಗ ಮಾಡುವ ಮೂಲಕ ದೈಹಿಕ ಆರೋಗ್ಯ ಹಾಗೂ ಮನಸ್ಥಿತಿ ಸುಧಾರಿಸುತ್ತದೆ ಹೀಗಾಗಿ ಇದರಲ್ಲಿ ಧರ್ಮ ರಾಜಕೀಯ ಬೇಡ ಯೋಗ ಕುರಿತು ತಾರತಮ್ಯ ಸರಿಯಲ್ಲ ಎಂದಿರುವ ಬಾನ್ ಕೀ ಮೂನ್ ಹೇಳಿದ್ದಾರೆ. ಅಲ್ಲದೆ ಭಾರತಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಕೆಲವೊಂದು ಯೋಗಾಸನ ಮಾಡಿದ್ದು ಅದರಿಂದ ನನಗೆ ತೃಪ್ತಿ ಸಿಕ್ಕಿದ್ದು, ಯೋಗವನ್ನು ಯಾರು ಬೇಕಾದರೂ ಮಾಡಬಹುದು ಇದಕ್ಕೆ ಯಾವುದೇ ಧರ್ಮದ ಕಟ್ಟುಪಾಡುಗಳಿಲ್ಲ ಎಂದು ತಿಳಿಸಿದ್ದಾರೆ.

ಯೋಗ ಎಂಬುದು ಯಾವುದೇ ತಾರತಮ್ಯ ಸೃಷ್ಟಿಸುವುದಿಲ್ಲ, ವಯಸ್ಸು, ಸಾಮರ್ಥ್ಯದ ಭೇದವಿಲ್ಲದಂತೆ ಎಲ್ಲರೂ ಯೋಗ ತರಬೇತಿ ಪಡೆಯಬಹುದಾಗಿದ್ದು  ನನ್ನ ಮೊದಲ ಆಸನದಲ್ಲೇ ಯೋಗದ ಮಹತ್ವವನ್ನ ಅರಿತಿದ್ದೇನೆ ಎಂದಿರುವ ಮೂನ್  ಮೊದಲ ಬಾರಿ ಯೋಗ ಕಲಿಯುತ್ತಿರುವವರಿಗೆ ವೃಕ್ಷಾಸನ ಉತ್ತಮವಾದದ್ದು ಎಂಬ ಕಿವಿಮಾತನ್ನು ಹೇಳಿದ್ದಾರೆ.  

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ನ್ಯಾಯಾಂಗದಲ್ಲಿ ಭ್ರಷ್ಟಾಚಾರದ ಪಾಠ: ಕೇಂದ್ರ ಕ್ಷಮೆಯಾಚಿಸುತ್ತಿದ್ದಂತೆ NCERT ಪಠ್ಯ ಪುಸ್ತಕ ಬ್ಯಾನ್, ಪ್ರತಿಗಳನ್ನು ವಶಕ್ಕೆ ಪಡೆಯಲು ಸುಪ್ರೀಂ ಸೂಚನೆ

ಬಿಕಿನಿ ಧರಿಸಿರುವ ಮಹಿಳೆಯರ ಜೊತೆಗೆ ಸ್ಟೀಫನ್ ಹಾಕಿಂಗ್! Epstein ಫೈಲ್ಸ್ ನಲ್ಲಿ ಪೋಟೋ ಬಿಡುಗಡೆ

ಅಜಿತ್ ಪವಾರ್ ವಿಮಾನ ಪತನ ವಿಧ್ವಂಸಕ ಕೃತ್ಯವೋ ಅಥವಾ ನಿರ್ಲಕ್ಷ್ಯವೋ? ಸಿಐಡಿ ಹೇಳಿದ್ದೇನು?

'The Kerala Story 2: Goes Beyond' ಬಿಡುಗಡೆಗೆ ಕೇರಳ ಹೈಕೋರ್ಟ್ ತಡೆ

ಅಪ್ರಾಪ್ತ ಬಾಲಕಿಯೊಂದಿಗೆ ಅನುಚಿತ ವರ್ತನೆ: ಪೋಕ್ಸೋ ಕೇಸ್ ದಾಖಲಾಗುತ್ತಿದಂತೆ ಮಲ್ಲಿಕಾರ್ಜುನ ಮುತ್ಯಾ video ರಿಲೀಸ್!

SCROLL FOR NEXT