ಯೋಗ ಮಾಡುತ್ತಿದ್ದಾಗ ಗಾಢನಿದ್ದೆಗೆ ಜಾರಿರುವ ಸುರೇಶ್ ಪ್ರಭು ಅವರನ್ನು ತರಬೇತುದಾರರು ಎಬ್ಬಿಸುತ್ತಿರುವ ಚಿತ್ರ 
ದೇಶ

ಶವಾಸನ ಮಾಡುವಾಗ ಗಾಢ ನಿದ್ದೆಗೆ ಜಾರಿದ ರೈಲ್ವೆ ಸಚಿವ ಸುರೇಶ್ ಪ್ರಭು

ಅಂತರಾಷ್ಟ್ರೀಯ ಯೋಗ ದಿನದ ಅಂಗವಾಗಿ ದೇಶದೆಲ್ಲೆಡೆ ಸಾಮಾನ್ಯ ಜನರು, ಸಂಸದರು, ಪ್ರಧಾನಮಂತ್ರಿಗಳೆಲ್ಲರೂ ಎಲ್ಲಾ ಕೆಲಸಗಳನ್ನು ಮರೆತು ಯೋಗ ಮಾಡಿ ಮನಸ್ಸು ಶುದ್ಧ ಮಾಡಿಕೊಳ್ಳುವುದರಲ್ಲಿ ತೊಡಗಿದ್ದರೆ, ಇತ್ತ ಕೇಂದ್ರ ರೈಲ್ವೆ ಸಚಿವ...

ನವದೆಹಲಿ: ಅಂತರಾಷ್ಟ್ರೀಯ ಯೋಗ ದಿನದ ಅಂಗವಾಗಿ ದೇಶದೆಲ್ಲೆಡೆ ಸಾಮಾನ್ಯ ಜನರು, ಸಂಸದರು, ಪ್ರಧಾನಮಂತ್ರಿಗಳೆಲ್ಲರೂ ಎಲ್ಲಾ ಕೆಲಸಗಳನ್ನು ಮರೆತು ಯೋಗ ಮಾಡಿ ಮನಸ್ಸು ಶುದ್ಧ ಮಾಡಿಕೊಳ್ಳುವುದರಲ್ಲಿ ತೊಡಗಿದ್ದರೆ, ಇತ್ತ ಕೇಂದ್ರ ರೈಲ್ವೆ ಸಚಿವ ಯೋಗಮಾಡುವ ನೆಪದಲ್ಲಿ ಚಿಂತೆ ಇಲ್ಲದವನಿಗೆ ಸಂತೆಯಲ್ಲೂ ನಿದ್ದೆ ಎಂಬಂತೆ ಶವಾಸನ ಮಾಡುತ್ತಿದ್ದಾಗ ಗಾಢ ನಿದ್ದೆಗೆ ಜಾರಿರುವ ಘಟನೆಯೊಂದು ತಡವಾಗಿ ಬೆಳಕಿಗೆ ಬಂದಿದೆ.

ಜೂನ್.21 ಅಂತರಾಷ್ಟ್ರೀಯ ಯೋಗ ದಿನದ ಅಂಗವಾಗಿ ಕೇಂದ್ರ ರೈಲ್ವೆ ಸಚಿವ ಸುರೇಶ್ ಪ್ರಭು ಅವರು ಕೊಚ್ಚಿಗೆ ತೆರಳಿದ್ದರು. ಕೊಚ್ಚಿಯ ಸ್ಟೇಡಿಯಂ ಒಂದರಲ್ಲಿ ಯೋಗ ದಿನವನ್ನು ಆಯೋಜಿಸಲಾಗಿತ್ತು. ಯೋಗ ದಿನದ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಸುರೇಶ್ ಪ್ರಭು ಅವರು ಕೆಲವು ಯೋಗಸಾನಗಳನ್ನು ಮಾಡಿದ್ದರು. ಈ ವೇಳೆ ಯೋಗದ ಹಲವು ಭಾಗಗಳಲ್ಲಿ ಒಂದಾದ ಶವಾಸನವನ್ನು ಮಾಡಿಸಲಾಯಿತು. ಆದರೆ, ಯೋಗದ ಎಲ್ಲಾ ಆಸನಗಳಿಗಿಂತ ಶವಾಸನವನ್ನು ಗಂಭೀರವಾಗಿ ಪರಿಗಣಿಸಿದ್ದ ಸುರೇಶ್ ಪ್ರಭು ಅವರು ಶವಾಸನವನ್ನು ಮಾಡುತ್ತಲೇ ಇದ್ದಕ್ಕಿದ್ದಂತೆ ಗಾಢನಿದ್ದೆಗೆ ಜಾರಿದ್ದಾರೆ. ಎಷ್ಟು ಹೊತ್ತಾದರೂ ಸುರೇಶ್ ಪ್ರಭು ಅವರು ಏಳದಿರುವುದನ್ನು ಕಂಡ ತರಬೇತುದಾರರೊಬ್ಬರು ನಂತರ ಅವರನ್ನು ಎಬ್ಬಿಸಿದ್ದಾರೆ.

ಸುರೇಶ್ ಪ್ರಭು ಅವರು ನಿದ್ರೆಗೆ ಜಾರಿರುವ ಈ ಸುದ್ದಿಯು ಹಲವು ಪ್ರಾದೇಶಿಕ ಪತ್ರಿಕೆಗಳು ಸೇರಿದಂತೆ ಮಲೆಯಾಳಂನ ಮನೋರಮಾ ಪತ್ರಿಕೆಯಲ್ಲೂ ಕೂಡ ಪ್ರಕಟಗೊಂಡಿದ್ದವು. ಈದೀಗ ಈ ಸುದ್ದಿ ಸಾಮಾಜಿಕ ತಾಣಗಳಲ್ಲಿ ಹರಿದಾಡುತ್ತಿದ್ದು, ಹಲವು ಚರ್ಚೆಗಳಿಗೆ ಗ್ರಾಸವಾಗಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಅಮೆರಿಕ ನಿಯೋಜಿತ ರಾಯಭಾರಿ ಸೆರ್ಗಿಯೊ ಗೋರ್- ಮೋದಿ, ಜೈಶಂಕರ್ ಭೇಟಿ; Tariff ಒತ್ತಡದ ನಡುವೆ ಭಾರತ-ಅಮೆರಿಕ ಸಂಬಂಧ ಸುಧಾರಣೆಯ ಸೂಚನೆ?

ಅಫ್ಘಾನಿಸ್ತಾನ ನಮ್ಮೊಂದಿಗೆ ಗಡಿ ಹಂಚಿಕೊಂಡಿರುವ ನೆರೆ ರಾಷ್ಟ್ರ- S Jaishankar; ಭಾರತದೊಂದಿಗೆ POK ವಿಲೀನದ ಸುಳಿವು; ಚೀನಾಗೂ ಶಾಕ್!

ಅಬ್ಬಬ್ಬಾ ರೋಮಾಂಚನ: ಅದ್ಭುತ ಸೃಷ್ಟಿಸಿದ ರಿಷಬ್ ಶೆಟ್ಟಿಗೆ ರಾಷ್ಟ್ರಪ್ರಶಸ್ತಿ ಕೊಡಲೇಬೇಕು - ತಮಿಳು ನಿರ್ದೇಶಕ ಅಟ್ಲೀ

Pakistan: ಇಸ್ರೇಲ್ ವಿರೋಧಿ ಪ್ರತಿಭಟನಾ ಜಾಥಾ, ಪೋಲೀಸರ ಗುಂಡೇಟಿಗೆ 11 ಮಂದಿ ಬಲಿ! Video

ಉತ್ತರ ಪ್ರದೇಶಕ್ಕೆ ಭೇಟಿ ನೀಡಿದ ತಾಲಿಬಾನ್ ಸಚಿವನಿಗೆ ಅದ್ಧೂರಿ ಸ್ವಾಗತ, ಸರ್ಕಾರದ ಭದ್ರತೆ; ಯೋಗಿಗೆ ನಾಚಿಕೆಯಾಗಬೇಕು- SP ಸಂಸದ ಶಫೀಕರ್

SCROLL FOR NEXT