ಸಾಂದರ್ಭಿಕ ಚಿತ್ರ 
ದೇಶ

ವ್ಯಾಘ್ರ ರಕ್ಷಣೆಗೆ ಶ್ವಾನದಳ

ಭಾರತದ ಕಾಡುಮೃಗಗಳ ಬೇಟೆಗಾರರಿಗೆ ಹಾಗೂ ಕಳ್ಳ ಸಾಗಣೆದಾರರಿಗೊಂದು ಎಚ್ಚರಿಕೆಯ ಸಂದೇಶ! ಹುಲಿ ಸಿಂಹಗಳನ್ನು ಕೊಲ್ಲಲು ಕಾಡು ಹೊಕ್ಕರೆ...

ಭೋಪಾಲ್: ಭಾರತದ ಕಾಡುಮೃಗಗಳ ಬೇಟೆಗಾರರಿಗೆ ಹಾಗೂ ಕಳ್ಳ ಸಾಗಣೆದಾರರಿಗೊಂದು ಎಚ್ಚರಿಕೆಯ ಸಂದೇಶ! ಹುಲಿ ಸಿಂಹಗಳನ್ನು ಕೊಲ್ಲಲು ಕಾಡು ಹೊಕ್ಕರೆ ನಿಮ್ಮ ಜೀವ ನಾಯಿಪಾಲಾದೀತು ಜೋಕೆ! ಹೌದು. ಇದೀಗ ವನ್ಯಮೃಗಗಳ ರಕ್ಷಣೆಗೆ ಶ್ವಾನಪಡೆ ಸನ್ನದ್ಧವಾಗುತ್ತಿದೆ.

ಜೂನ್ 20ರಂದು ಮಧ್ಯಪ್ರದೇಶದ ಅರಣ್ಯ ಇಲಾಖೆಗೆ ವೈಲ್ಡ್ ಲೈಫ್ ಸ್ನಿಫರ್ ಡಾಗ್ ಗಳನ್ನು ಸೇರಿಸಲಾಗಿದ್ದು, ಇವುಗಳಿಗೆ ಭೋಪಾಲ್ ನಲ್ಲಿ ಕಠಿಣ ತರಬೇತಿ ನೀಡಿ, ಪರೇಡ್ ನಡೆಸಿ, ಅದರಲ್ಲಿ ತೇರ್ಗಡೆಯಾದ ನಂತರವೇ ಕಾರ್ಯಾಚರಣೆಗೆ ನೇಮಿಸಲಾಗಿದೆ.

ಆದರೆ ವನ್ಯಜೀವಿ ಸಂರಕ್ಷಣೆಗೆ ಶ್ವಾನದಳ ನೇಮಕ ಇದೇ ಮೊದಲೇನಲ್ಲ. ಈಗ ಅದರ ಸಂಖ್ಯೆಯನ್ನು ದುಪ್ಪಟ್ಟುಗೊಳಿಸಲಾಗಿದೆಯಷ್ಟೆ. ವಿಶ್ವ ವನ್ಯಜೀವಿ ನಿಧಿ (ಡಬ್ಲುಡಬ್ಲುಎಫ್) ಹಾಗೂ ಟ್ರಾಫಿಕ್ ಎಂಬ ಎರಡು ಸಂಸ್ಥೆಗಳು ಜಂಟಿಯಾಗಿ ವೆಚ್ಚಭರಿಸಿ ಈ ಯೋಜನೆ ರೂಪಿಸಿದ್ದು, ವನ್ಯಜೀವಿಗಳ ಹಾಗೂ ವನ್ಯಸಂಪತ್ತಿನ ಸಂರಕ್ಷಣೆಯೇ ಇದರ ಮೂಲಗುರಿಯಾದೆ. ಸದ್ಯಕ್ಕೆ ಭಾರತದಲ್ಲಿ ಹುಲಿಗಳ ಸಂಖ್ಯೆ ಹೆಚ್ಚಿರುವ ಮಧ್ಯಪ್ರದೇಶ, ಅಸ್ಸಾಂ, ಉತ್ತರಾಖಂಡ್, ಮಹಾರಾಷ್ಟ್ರ, ಕರ್ನಾಟಕ ಮತ್ತು ತಮಿಳುನಾಡು ರಾಜ್ಯಗಳಲ್ಲಿ
ಸ್ನಿಫರ್ ಸೈನ್ಯ ಕಾರ್ಯಸನ್ನದ್ಧವಾಗಲಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಫೈಟರ್ ಜೆಟ್‌ ಇಂಜಿನ್ ಖರೀದಿ: ಅಮೆರಿಕಾದ GE ಸಂಸ್ಥೆಯೊಂದಿಗೆ $1 ಬಿಲಿಯನ್ ಮೊತ್ತದ ಒಪ್ಪಂದಕ್ಕೆ ಭಾರತ ಸಿದ್ಧತೆ!

ಸುಂಕ ಸಮರ: Trump 4 ಬಾರಿ ಕರೆ ಮಾಡಿದರೂ ಉತ್ತರಿಸದ PM Modi; ಅಮೆರಿಕ ನಿಯೋಗಕ್ಕೂ No Entry!

'ನನ್ನ ಕುರ್ಚಿ'ಗೆ ಪ್ರಧಾನಿ ಮೋದಿ ಗೌರವ ನೀಡಬೇಕು: ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಕಿಡಿ!

ಸುಪ್ರೀಂ ಕೋರ್ಟ್‌ಗೆ ನ್ಯಾ. ಪಾಂಚೋಲಿ ಹೆಸರು ಶಿಫಾರಸು: ನ್ಯಾ. ಬಿ. ವಿ. ನಾಗರತ್ನ ತೀವ್ರ ಅಸಮಾಧಾನ!

SCROLL FOR NEXT