ದಯಾನಿಧಿ ಮಾರನ್ 
ದೇಶ

ಅಕ್ರಮ ದೂರವಾಣಿ ವಿನಿಮಯ: ಸಿಬಿಐನಿಂದ ಮಾರನ್ ವಿಚಾರಣೆ

ಚೆನ್ನೈನ ತಮ್ಮ ಬೋಟ್ ಹೌಸ್ ಮನೆಯಲ್ಲಿ ಅಕ್ರಮವಾಗಿ ಬಿಎಸ್ಎನ್ಎಲ್ ಸಂಸ್ಥೆಯ ಸಂಪನ್ಮೂಲಗಳನ್ನು ಉಪಯೋಗಿಸಿಕೊಂಡ ಹಗರಣಕ್ಕೆ...

ನವದೆಹಲಿ: ಚೆನ್ನೈನ ತಮ್ಮ ಬೋಟ್ ಹೌಸ್ ಮನೆಯಲ್ಲಿ ಅಕ್ರಮವಾಗಿ ಬಿಎಸ್ಎನ್ಎಲ್ ಸಂಸ್ಥೆಯ ಸಂಪನ್ಮೂಲಗಳನ್ನು ಉಪಯೋಗಿಸಿಕೊಂಡ ಹಗರಣಕ್ಕೆ ಸಂಬಂಧಿಸಿದಂತೆಮಾಜಿ ದೂರಸಂಪರ್ಕ ಖಾತೆ ಸಚಿವ ದಯಾನಿಧಿ ಮಾರನ್ ಅವರನ್ನು ಸಿಬಿಐ ಬುಧವಾರ ತೀವ್ರ ವಿಚಾರಣೆಗೆ ಒಳಪಡಿಸಿದೆ.

ಸಿಬಿಐನ ವಿಶೇಷ ಕಾರ್ಯಪಡೆ ಹಗರಣದ ತನಿಖೆ ನಡೆಸುತ್ತಿದ್ದು, ಸಿಬಿಐನ ಕೇಂದ್ರ ಕಚೇರಿಯಲ್ಲಿ ಇಂದು ಮಾರನ್ ಅವರನ್ನು ವಿಚಾರಣೆ ನಡೆಸುತ್ತಿದೆ.

ಈ ಬಗ್ಗೆ ಇಂಡಿಯನ್ ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಗೆ ಪ್ರತಿಕ್ರಿಯಿಸಿರುವ ಸಿಬಿಐನ ಹಿರಿಯ ಅಧಿಕಾರಿ, ಮಾರನ್ ಅವರು ಇಂದು ಬೆಳಗ್ಗೆ 11 ಗಂಟೆಯ ನಮ್ಮ ಕಚೇರಿಗೆ ಆಗಮಿಸಿದ್ದು, ವಿಚಾರಣೆ ನಡೆಯುತ್ತಿದೆ. ಅಗತ್ಯ ಬಿದ್ದರೆ ನಾಳೆಯೂ ವಿಚಾರಣೆ ಮುಂದೂವರೆಸಲಾಗುವುದು ಎಂದು ತಿಳಿಸಿದ್ದಾರೆ.

ಮಾರನ್ ಅವರು ತಮ್ಮ ಒಡೆತನದ ಸನ್ ಟಿವಿಯ ಕಾರ್ಯಕ್ರಮಗಳ ವೇಗದ ಪ್ರಸಾರಕ್ಕಾಗಿ ಬಿಎಸ್ಎನ್ಎಲ್ ಸಂಪನ್ಮೂಲಗಳನ್ನು ದುರುಪಯೋಗಪಡಿಸಿಕೊಂಡದ್ದನ್ನು ಹಾಗು ಸರ್ಕಾರಿ ಸ್ವಾಮ್ಯದ ಬಿಎಸ್ಎನ್ಎಲ್ ಸಂಸ್ಥೆಗ ೪೪೦ ಕೋಟಿ ನಷ್ಟ ತಂದೊಡ್ಡಿದ್ದ ಹಗರಣವನ್ನು ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಬಯಲಿಗೆಳೆದಿತ್ತು.

ಖ್ಯಾತ ತನಿಖಾ ಪತ್ರಕರ್ತ ಮತ್ತು ಅಂಕಣಕಾರ ಎಸ್ ಗುರುಮೂರ್ತಿ ಈ ಹಗರಣವನ್ನು ಮೊದಲ ಬಾರಿಗೆ ೨೦೧೧ರಲ್ಲಿ ಬಯಲಿಗೆಳೆದಿದ್ದರು. ಸನ್ ಟಿವಿ ಗೆ ಉಪಯೋಗವಾಗುವಂತೆ ಬಿಎಸ್ಎನ್ಎಲ್ ಪ್ರಧಾನ ನಿರ್ವಾಹಕ ಹೇಗೆ ದಯಾನಿಧಿ ಮಾರನ್ ಅವರಿಗೆ ಸಹಾಯ ಮಾಡಿದ್ದರು ಎಂದು ಎಕ್ಸ್ ಪ್ರೆಸ್ ನಲ್ಲಿ ಗುರುಮೂರ್ತಿ ಸರಣಿ ಲೇಖನಗಳನ್ನು ಬರೆದು, ಮಾರನ್ ಅವರ ಹಗರಣಗಳನ್ನು ಬೆತ್ತಲೆ ಮಾಡಿದ್ದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಅಮೆರಿಕ ನಿಯೋಜಿತ ರಾಯಭಾರಿ ಸೆರ್ಗಿಯೊ ಗೋರ್- ಮೋದಿ, ಜೈಶಂಕರ್ ಭೇಟಿ; Tariff ಒತ್ತಡದ ನಡುವೆ ಭಾರತ-ಅಮೆರಿಕ ಸಂಬಂಧ ಸುಧಾರಣೆಯ ಸೂಚನೆ?

ಅಫ್ಘಾನಿಸ್ತಾನ ನಮ್ಮೊಂದಿಗೆ ಗಡಿ ಹಂಚಿಕೊಂಡಿರುವ ನೆರೆ ರಾಷ್ಟ್ರ- S Jaishankar; ಭಾರತದೊಂದಿಗೆ POK ವಿಲೀನದ ಸುಳಿವು; ಚೀನಾಗೂ ಶಾಕ್!

ಅಬ್ಬಬ್ಬಾ ರೋಮಾಂಚನ: ಅದ್ಭುತ ಸೃಷ್ಟಿಸಿದ ರಿಷಬ್ ಶೆಟ್ಟಿಗೆ ರಾಷ್ಟ್ರಪ್ರಶಸ್ತಿ ಕೊಡಲೇಬೇಕು - ತಮಿಳು ನಿರ್ದೇಶಕ ಅಟ್ಲೀ

Pakistan: ಇಸ್ರೇಲ್ ವಿರೋಧಿ ಪ್ರತಿಭಟನಾ ಜಾಥಾ, ಪೋಲೀಸರ ಗುಂಡೇಟಿಗೆ 11 ಮಂದಿ ಬಲಿ! Video

ಉತ್ತರ ಪ್ರದೇಶಕ್ಕೆ ಭೇಟಿ ನೀಡಿದ ತಾಲಿಬಾನ್ ಸಚಿವನಿಗೆ ಅದ್ಧೂರಿ ಸ್ವಾಗತ, ಸರ್ಕಾರದ ಭದ್ರತೆ; ಯೋಗಿಗೆ ನಾಚಿಕೆಯಾಗಬೇಕು- SP ಸಂಸದ ಶಫೀಕರ್

SCROLL FOR NEXT