ಎಂ.ಕೆ ಮೀನಾ 
ದೇಶ

ಎಸಿಬಿ ಮುಖ್ಯಸ್ಥ ಎಂ.ಕೆ ಮೀನಾ ಅಧಿಕಾರ ಮೊಟಕುಗೊಳಿಸಿದ ಎಎಪಿ

ಲೆಫ್ಟಿನೆಂಟ್ ಗವರ್ನರ್ ನಜೀಬ್ ಜಂಗ್ ದೆಹಲಿ ಭ್ರಷ್ಟಾಚಾರ ವಿರೋಧಿ ಶಾಖೆ ನೇಮಕ ಮಾಡಿದ್ದ ಎಂ.ಕೆ ಮೀನಾ ಅವರ ಅಧಿಕಾರವನ್ನು ಅಪ್ ಸರ್ಕಾರ ಮೊಟಕುಗೊಳಿಸಿದೆ.

ನವದೆಹಲಿ: ಲೆಫ್ಟಿನೆಂಟ್ ಗವರ್ನರ್ ನಜೀಬ್ ಜಂಗ್ ದೆಹಲಿ  ಭ್ರಷ್ಟಾಚಾರ ವಿರೋಧಿ ಶಾಖೆಗೆ ನೇಮಕ ಮಾಡಿದ್ದ ಎಂ.ಕೆ ಮೀನಾ ಅವರ ಅಧಿಕಾರವನ್ನು ಅಪ್ ಸರ್ಕಾರ ಮೊಟಕುಗೊಳಿಸಿದೆ. ದೆಹಲಿ ಹೈಕೋರ್ಟ್ ನಿಂದ ಅಂತಿಮ ತೀರ್ಪು ಬರುವವರೆಗೂ ತರಬೇತಿ ಕೆಲಸ ಹಾಗೂ ಪ್ರಕರಣಗಳ ಮೇಲ್ವಿಚಾರಣೆ ನೋಡಿಕೊಳ್ಳುವಂತೆ ದೆಹಲಿ ಸರ್ಕಾರ ಮೀನಾ ಅವರಿಗೆ ಸೂತಿಸಿದೆ.

ಎಬಿಸಿ ಮುಖ್ಯಸ್ಥರಾಗಿ ನೇಮಕಗೊಂಡಿರುವ ಎಂ.ಕೆ ಮೀನಾ ಅವರನ್ನು ವಾಪಸ್ ಕರೆಸಿಕೊಳ್ಳಬೇಕೆಂದು ಆಪ್ ಸರ್ಕಾರ ದೆಹಲಿ ಹೈಕೋರ್ಟ್ ಮೆಟ್ಟಿಲೇರಿದೆ. ಪ್ರಕರಣದ ತೀರ್ಪು ಇನ್ನು ಹೊರ ಬರಬೇಕಿರುವುದರಿಂದ ಅಲ್ಲಿಯವರೆಗೂ ಎಲ್ಲಾ ಮುಖ್ಯ ಕೆಲಸಗಳ ಮೇಲ್ವಿಚಾರಣೆಯನ್ನು ಹೆಚ್ಚುವರಿ ಆಯುಕ್ತ ಎಸ್.ಎಸ್ ಯಾದವ್ ನೋಡಿಕೊಳ್ಳಲು ಆಪ್ ಸರ್ಕಾರ ತಿಳಿಸಿದೆ.

ಎಂಕೆ ಮೀನಾ ಎಸಿಬಿಯ ಜಂಟಿ ಪೊಲೀಸ್ ಆಯುಕ್ತರಾಗಿ ನೇಮಕಗೊಂಡಿದ್ದಾರೆ. ಜಂಟಿ ಪೊಲೀಸ್ ಆಯುಕ್ತರಿಗೆ ಯಾವುದೇ ಒಂದು ನಿಖರವಾದ ಹುದ್ದೆ ಇರುವುದಿಲ್ಲ ಎಂದು ಆಪ್  ಸರ್ಕಾರ ಹೇಳಿದೆ, ಇನ್ನು ಜಾಗೃತ ದಳವೇ ಪ್ರಮುಖವಾಗಿದ್ದು, ಜಾಗೃತ ದಳ ನಿರ್ದೇಶಕರ ಅಡಿಯಲ್ಲಿ ಎಬಿಸಿ ಕೆಲಸ ಮಾಡಬೇಕು ಎಂದು ಆಪ್ ಸರ್ಕಾರ ಸಮರ್ಥಿಸಿಕೊಂಡಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಜಮ್ಮುವಿನಲ್ಲಿ ಭೀಕರ ಮಳೆಯಿಂದ ಭಾರೀ ಅನಾಹುತ ಸೃಷ್ಟಿ: ವೈಷ್ಣೋದೇವಿ ಮಾರ್ಗದಲ್ಲಿ ಭೂಕುಸಿತ, ಕನಿಷ್ಠ 13 ಮಂದಿ ಸಾವು

ದೇಶಾದ್ಯಂತ ಗಣೇಶ ಚತುರ್ಥಿ ಸಂಭ್ರಮ: ದೇವಾಲಯಗಳಲ್ಲಿ ವಿಶೇಷ ಪೂಜೆ, ರಾಷ್ಟ್ರಪತಿ, ಪ್ರಧಾನಿ, ಮುಖ್ಯಮಂತ್ರಿಗಳಿಂದ ಶುಭಾಶಯ

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಜಮ್ಮುವಿನಾದ್ಯಂತ ಭಾರಿ ಮಳೆ: ಅಪಾರ ಪ್ರಮಾಣದ ಹಾನಿ, 10 ಮಂದಿ ಸಾವು: ಕೊಚ್ಚಿ ಹೋದ ರಸ್ತೆ, ಸೇತುವೆಗಳು!

ಫೈಟರ್ ಜೆಟ್‌ ಇಂಜಿನ್ ಖರೀದಿ: ಅಮೆರಿಕಾದ GE ಸಂಸ್ಥೆಯೊಂದಿಗೆ $1 ಬಿಲಿಯನ್ ಮೊತ್ತದ ಒಪ್ಪಂದಕ್ಕೆ ಭಾರತ ಸಿದ್ಧತೆ!

SCROLL FOR NEXT