ಎಂ.ಕೆ ಮೀನಾ 
ದೇಶ

ಎಸಿಬಿ ಮುಖ್ಯಸ್ಥ ಎಂ.ಕೆ ಮೀನಾ ಅಧಿಕಾರ ಮೊಟಕುಗೊಳಿಸಿದ ಎಎಪಿ

ಲೆಫ್ಟಿನೆಂಟ್ ಗವರ್ನರ್ ನಜೀಬ್ ಜಂಗ್ ದೆಹಲಿ ಭ್ರಷ್ಟಾಚಾರ ವಿರೋಧಿ ಶಾಖೆ ನೇಮಕ ಮಾಡಿದ್ದ ಎಂ.ಕೆ ಮೀನಾ ಅವರ ಅಧಿಕಾರವನ್ನು ಅಪ್ ಸರ್ಕಾರ ಮೊಟಕುಗೊಳಿಸಿದೆ.

ನವದೆಹಲಿ: ಲೆಫ್ಟಿನೆಂಟ್ ಗವರ್ನರ್ ನಜೀಬ್ ಜಂಗ್ ದೆಹಲಿ  ಭ್ರಷ್ಟಾಚಾರ ವಿರೋಧಿ ಶಾಖೆಗೆ ನೇಮಕ ಮಾಡಿದ್ದ ಎಂ.ಕೆ ಮೀನಾ ಅವರ ಅಧಿಕಾರವನ್ನು ಅಪ್ ಸರ್ಕಾರ ಮೊಟಕುಗೊಳಿಸಿದೆ. ದೆಹಲಿ ಹೈಕೋರ್ಟ್ ನಿಂದ ಅಂತಿಮ ತೀರ್ಪು ಬರುವವರೆಗೂ ತರಬೇತಿ ಕೆಲಸ ಹಾಗೂ ಪ್ರಕರಣಗಳ ಮೇಲ್ವಿಚಾರಣೆ ನೋಡಿಕೊಳ್ಳುವಂತೆ ದೆಹಲಿ ಸರ್ಕಾರ ಮೀನಾ ಅವರಿಗೆ ಸೂತಿಸಿದೆ.

ಎಬಿಸಿ ಮುಖ್ಯಸ್ಥರಾಗಿ ನೇಮಕಗೊಂಡಿರುವ ಎಂ.ಕೆ ಮೀನಾ ಅವರನ್ನು ವಾಪಸ್ ಕರೆಸಿಕೊಳ್ಳಬೇಕೆಂದು ಆಪ್ ಸರ್ಕಾರ ದೆಹಲಿ ಹೈಕೋರ್ಟ್ ಮೆಟ್ಟಿಲೇರಿದೆ. ಪ್ರಕರಣದ ತೀರ್ಪು ಇನ್ನು ಹೊರ ಬರಬೇಕಿರುವುದರಿಂದ ಅಲ್ಲಿಯವರೆಗೂ ಎಲ್ಲಾ ಮುಖ್ಯ ಕೆಲಸಗಳ ಮೇಲ್ವಿಚಾರಣೆಯನ್ನು ಹೆಚ್ಚುವರಿ ಆಯುಕ್ತ ಎಸ್.ಎಸ್ ಯಾದವ್ ನೋಡಿಕೊಳ್ಳಲು ಆಪ್ ಸರ್ಕಾರ ತಿಳಿಸಿದೆ.

ಎಂಕೆ ಮೀನಾ ಎಸಿಬಿಯ ಜಂಟಿ ಪೊಲೀಸ್ ಆಯುಕ್ತರಾಗಿ ನೇಮಕಗೊಂಡಿದ್ದಾರೆ. ಜಂಟಿ ಪೊಲೀಸ್ ಆಯುಕ್ತರಿಗೆ ಯಾವುದೇ ಒಂದು ನಿಖರವಾದ ಹುದ್ದೆ ಇರುವುದಿಲ್ಲ ಎಂದು ಆಪ್  ಸರ್ಕಾರ ಹೇಳಿದೆ, ಇನ್ನು ಜಾಗೃತ ದಳವೇ ಪ್ರಮುಖವಾಗಿದ್ದು, ಜಾಗೃತ ದಳ ನಿರ್ದೇಶಕರ ಅಡಿಯಲ್ಲಿ ಎಬಿಸಿ ಕೆಲಸ ಮಾಡಬೇಕು ಎಂದು ಆಪ್ ಸರ್ಕಾರ ಸಮರ್ಥಿಸಿಕೊಂಡಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಅಮೆರಿಕ ನಿಯೋಜಿತ ರಾಯಭಾರಿ ಸೆರ್ಗಿಯೊ ಗೋರ್- ಮೋದಿ, ಜೈಶಂಕರ್ ಭೇಟಿ; Tariff ಒತ್ತಡದ ನಡುವೆ ಭಾರತ-ಅಮೆರಿಕ ಸಂಬಂಧ ಸುಧಾರಣೆಯ ಸೂಚನೆ?

ಅಫ್ಘಾನಿಸ್ತಾನ ನಮ್ಮೊಂದಿಗೆ ಗಡಿ ಹಂಚಿಕೊಂಡಿರುವ ನೆರೆ ರಾಷ್ಟ್ರ- S Jaishankar; ಭಾರತದೊಂದಿಗೆ POK ವಿಲೀನದ ಸುಳಿವು; ಚೀನಾಗೂ ಶಾಕ್!

ಅಬ್ಬಬ್ಬಾ ರೋಮಾಂಚನ: ಅದ್ಭುತ ಸೃಷ್ಟಿಸಿದ ರಿಷಬ್ ಶೆಟ್ಟಿಗೆ ರಾಷ್ಟ್ರಪ್ರಶಸ್ತಿ ಕೊಡಲೇಬೇಕು - ತಮಿಳು ನಿರ್ದೇಶಕ ಅಟ್ಲೀ

Pakistan: ಇಸ್ರೇಲ್ ವಿರೋಧಿ ಪ್ರತಿಭಟನಾ ಜಾಥಾ, ಪೋಲೀಸರ ಗುಂಡೇಟಿಗೆ 11 ಮಂದಿ ಬಲಿ! Video

ಉತ್ತರ ಪ್ರದೇಶಕ್ಕೆ ಭೇಟಿ ನೀಡಿದ ತಾಲಿಬಾನ್ ಸಚಿವನಿಗೆ ಅದ್ಧೂರಿ ಸ್ವಾಗತ, ಸರ್ಕಾರದ ಭದ್ರತೆ; ಯೋಗಿಗೆ ನಾಚಿಕೆಯಾಗಬೇಕು- SP ಸಂಸದ ಶಫೀಕರ್

SCROLL FOR NEXT