ಸಿಆರ್ ಪಿಎಫ್ ಪಡೆ 
ದೇಶ

ಮೂರು ದಿನಕ್ಕೊಬ್ಬ ಯೋಧನ ಆತ್ಮಹತ್ಯೆ

ಪ್ರತಿ ಮೂರು ದಿಕ್ಕೊಮ್ಮೆ ಒಬ್ಬ ಯೋಧ ಭಾರತೀಯ ಅರೆಸೇನಾ ಪಡೆಯಲ್ಲಿ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾನೆ ಎಂಬ ಆತಂಕಕಾರಿ ಸುದ್ದಿ ಹೊರಬಿದ್ದಿದೆ...

ನವದೆಹಲಿ: ಪ್ರತಿ ಮೂರು ದಿಕ್ಕೊಮ್ಮೆ ಒಬ್ಬ ಯೋಧ ಭಾರತೀಯ ಅರೆಸೇನಾ ಪಡೆಯಲ್ಲಿ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾನೆ ಎಂಬ ಆತಂಕಕಾರಿ ಸುದ್ದಿ ಹೊರಬಿದ್ದಿದೆ.

ಈಶಾನ್ಯ ಭಾಗದಲ್ಲೇ 2012 ರಿಂದ 2014 ರವೆಗೆ 370 ಯೋಧರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.ಇದರಿಂದ ಸಿಆರ್ ಪಿಎಫ್ ಪಡೆದು ಬಲ ಕುಸಿಯುತ್ತಿದೆ ಎನ್ನುವ ಆಘಾತಕಾರಿ ಮಾಹಿತಿಯೊಂದು ಹೊರಬಿದ್ದಿದೆ. ಇದಲ್ಲದೆ 2014ರಲ್ಲಿ ಪ್ರತಿ ದಿನಕ್ಕೆ 20 ಯೋಧರಂತೆ 6 ಸಾವಿರ ಮಂದಿ ಸಿಆರ್ ಪಿಎಫ್ ಅನ್ನು ತೊರೆದಿದ್ದಾರೆ. 2013 ರಲ್ಲಿ 4, 186 ಮಂದಿ ದೇಶದ ಅತಿದೊಡ್ಡ ಅರೆಸೇನಾ ಪಡೆಯಾದ ಸಿಆರ್ ಪಿಎಫ್ ತೊರೆದಿದ್ದಾರೆ. ಭಾರತದ ಅರೆಸೇನಾ ಪಡೆ ಯೋಧರು ಶತ್ರುಗಳ ಗುಂಡಿನ ದಾಳಿಗೆ ಬಲಿಯಾಗುತ್ತಿಲ್ಲ, ಆದರೆ ಕಳೆಪೆ ಸೌಲಭ್ಯಗಳು, ಒತ್ತಡಗಳೇ ಅವರನ್ನು ಕೊಲ್ಲುತ್ತಿವೆ.

ಈಶಾನ್ಯದ ಕಾಡುಗಳಲ್ಲಿ ನಕ್ಸಲರ ವಿರುದ್ಧ ಹೋರಾಟಕ್ಕಿಂತ ಯೋಧರನ್ನು ಅವರ ದುಸ್ಥಿತಿಯೇ ಸಾವಿನ ಬಾಯಿಗೆ ತಳ್ಳುತ್ತಿದೆ. ಹೃದಯಾಘಾತ, ಮಲೇರಿಯಾ, ಮತ್ತು ಎಚ್ ಐವಿ ಕಾಯಿಲೆಗಳಿಗೆ 1, 131 ಯೋಧರು ಕಳೆದ 5 ವರ್ಷಗಳಲ್ಲಿ ಮೃತಪಟ್ಟಿದ್ದಾರೆ. ನಕ್ಸಲರಿಗೆ ಬಲಿಯಾಗಿರುವುದು 323 ಸೈನಿಕರು ಮಾತ್ರ.ಕಾಡುವಾಸ, ನಕ್ಸಲರೊಂದಿಗೆ ಕಾಳಗ, ಈಶಾನ್ಯದ ಹಿಮಪರ್ವತಗಳ ಕೊರೆಯುವ ಚಳಿ ನಡೆಸುತ್ತಿರುವ ಅವರಿಗೆ ಶೌಚಾಲಯ ಸೇರಿದಂತೆ ಯಾವುದೇ ಅಗತ್ಯ ಮೂಲ ಸೌಲಭ್ಯಗಳಿಲ್ಲ. ಇದರಿಂದ ಸೈನ್ಯದಿಂದ ಯೋಧರು ವಿಮುಖರಾಗುತ್ತಿದ್ದಾರೆ ಎನ್ನಲಾಗಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ನಾವು ಏಕೆ ತಡೆಯಲಿ... ತಾಂತ್ರಿಕ ಸಮಸ್ಯೆ ಹೊರತು ಉದ್ದೇಶಪೂರ್ವಕವಲ್ಲ: ಮಹಿಳಾ ಪತ್ರಕರ್ತರನ್ನು ದೂರವಿಟ್ಟ ಬಗ್ಗೆ ಮುತ್ತಕಿ ಸ್ಪಷ್ಟನೆ

Afghan-Pak War: 'ಅಲ್ಲಾ ಕಾಪಾಡು' ಅಫ್ಘಾನ್ ಪ್ರತೀಕಾರದ ದಾಳಿ; ಆಗಸದೆತ್ತರಕ್ಕೆ ಚಿಮ್ಮಿದ ಪಾಕ್ ಸೈನಿಕರ ಶವಗಳು, ಗಡಿಯಿಂದ ಕಾಲ್ಕಿತ್ತ ಸೇನೆ, Video

ಯಾವುದೇ ಸಿದ್ಧಾಂತ ಅಥವಾ ಅಜೆಂಡಾವನ್ನು ಪ್ರಚಾರ ಮಾಡುತ್ತಿಲ್ಲ; 'ಕಾಂತಾರ: ಚಾಪ್ಟರ್ 1' ಕುರಿತು ರಿಷಬ್ ಶೆಟ್ಟಿ

'ಆಕೆ ಮಧ್ಯರಾತ್ರಿ 12.30ಕ್ಕೆ ಹೇಗೆ ಹೊರಬಂದಳು?': ಗ್ಯಾಂಗ್ ರೇಪ್ ಕುರಿತು ಮಮತಾ ಬ್ಯಾನರ್ಜಿ ಹೇಳಿಕೆ

ಹಾಸನಾಂಬ ದರ್ಶನಕ್ಕೆ ಭಕ್ತರ ಸಂಖ್ಯೆ ಹೆಚ್ಚಳ: ಎರಡೇ ದಿನಗಳಲ್ಲಿ ರೂ. 2.24 ಕೋಟಿ ಆದಾಯ, ಆರು ಸಿಬ್ಬಂದಿ ಅಮಾನತು!

SCROLL FOR NEXT