ಸಿಆರ್ ಪಿಎಫ್ ಪಡೆ 
ದೇಶ

ಮೂರು ದಿನಕ್ಕೊಬ್ಬ ಯೋಧನ ಆತ್ಮಹತ್ಯೆ

ಪ್ರತಿ ಮೂರು ದಿಕ್ಕೊಮ್ಮೆ ಒಬ್ಬ ಯೋಧ ಭಾರತೀಯ ಅರೆಸೇನಾ ಪಡೆಯಲ್ಲಿ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾನೆ ಎಂಬ ಆತಂಕಕಾರಿ ಸುದ್ದಿ ಹೊರಬಿದ್ದಿದೆ...

ನವದೆಹಲಿ: ಪ್ರತಿ ಮೂರು ದಿಕ್ಕೊಮ್ಮೆ ಒಬ್ಬ ಯೋಧ ಭಾರತೀಯ ಅರೆಸೇನಾ ಪಡೆಯಲ್ಲಿ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾನೆ ಎಂಬ ಆತಂಕಕಾರಿ ಸುದ್ದಿ ಹೊರಬಿದ್ದಿದೆ.

ಈಶಾನ್ಯ ಭಾಗದಲ್ಲೇ 2012 ರಿಂದ 2014 ರವೆಗೆ 370 ಯೋಧರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.ಇದರಿಂದ ಸಿಆರ್ ಪಿಎಫ್ ಪಡೆದು ಬಲ ಕುಸಿಯುತ್ತಿದೆ ಎನ್ನುವ ಆಘಾತಕಾರಿ ಮಾಹಿತಿಯೊಂದು ಹೊರಬಿದ್ದಿದೆ. ಇದಲ್ಲದೆ 2014ರಲ್ಲಿ ಪ್ರತಿ ದಿನಕ್ಕೆ 20 ಯೋಧರಂತೆ 6 ಸಾವಿರ ಮಂದಿ ಸಿಆರ್ ಪಿಎಫ್ ಅನ್ನು ತೊರೆದಿದ್ದಾರೆ. 2013 ರಲ್ಲಿ 4, 186 ಮಂದಿ ದೇಶದ ಅತಿದೊಡ್ಡ ಅರೆಸೇನಾ ಪಡೆಯಾದ ಸಿಆರ್ ಪಿಎಫ್ ತೊರೆದಿದ್ದಾರೆ. ಭಾರತದ ಅರೆಸೇನಾ ಪಡೆ ಯೋಧರು ಶತ್ರುಗಳ ಗುಂಡಿನ ದಾಳಿಗೆ ಬಲಿಯಾಗುತ್ತಿಲ್ಲ, ಆದರೆ ಕಳೆಪೆ ಸೌಲಭ್ಯಗಳು, ಒತ್ತಡಗಳೇ ಅವರನ್ನು ಕೊಲ್ಲುತ್ತಿವೆ.

ಈಶಾನ್ಯದ ಕಾಡುಗಳಲ್ಲಿ ನಕ್ಸಲರ ವಿರುದ್ಧ ಹೋರಾಟಕ್ಕಿಂತ ಯೋಧರನ್ನು ಅವರ ದುಸ್ಥಿತಿಯೇ ಸಾವಿನ ಬಾಯಿಗೆ ತಳ್ಳುತ್ತಿದೆ. ಹೃದಯಾಘಾತ, ಮಲೇರಿಯಾ, ಮತ್ತು ಎಚ್ ಐವಿ ಕಾಯಿಲೆಗಳಿಗೆ 1, 131 ಯೋಧರು ಕಳೆದ 5 ವರ್ಷಗಳಲ್ಲಿ ಮೃತಪಟ್ಟಿದ್ದಾರೆ. ನಕ್ಸಲರಿಗೆ ಬಲಿಯಾಗಿರುವುದು 323 ಸೈನಿಕರು ಮಾತ್ರ.ಕಾಡುವಾಸ, ನಕ್ಸಲರೊಂದಿಗೆ ಕಾಳಗ, ಈಶಾನ್ಯದ ಹಿಮಪರ್ವತಗಳ ಕೊರೆಯುವ ಚಳಿ ನಡೆಸುತ್ತಿರುವ ಅವರಿಗೆ ಶೌಚಾಲಯ ಸೇರಿದಂತೆ ಯಾವುದೇ ಅಗತ್ಯ ಮೂಲ ಸೌಲಭ್ಯಗಳಿಲ್ಲ. ಇದರಿಂದ ಸೈನ್ಯದಿಂದ ಯೋಧರು ವಿಮುಖರಾಗುತ್ತಿದ್ದಾರೆ ಎನ್ನಲಾಗಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಬಿಜೆಪಿ ಸಂಸದೀಯ ಮಂಡಳಿಯಲ್ಲಿ ಮಹತ್ತರ ಬದಲಾವಣೆ ಸಾಧ್ಯತೆ; ನಾಲ್ವರು ಮುಖ್ಯಮಂತ್ರಿಗಳಿಗೆ ಸ್ಥಾನ?

ಇರಾನ್‌ ತೈಲ ವಹಿವಾಟಿಗೆ ಅಮೆರಿಕಾ ಬ್ರೇಕ್: ಭಾರತದ 4 ಕಂಪನಿಗಳು ಕಪ್ಪುಪಟ್ಟಿಗೆ, 3 ಪ್ರಜೆಗಳ ಮೇಲೂ ನಿರ್ಬಂಧ..!

"ಮದುವೆ ಅಂದ್ರೆ ಗುಲಾಮಗಿರಿಯಲ್ಲ, ಮನೆಗೆಲಸ ಮಾಡು-ಅತ್ತೆ-ಮಾವನ ನೋಡ್ಕೋ ಅನ್ನೋಕೆ ಗಂಡನಿಗೆ ಹಕ್ಕಿಲ್ಲ": ಹೈಕೋರ್ಟ್ ಮಹತ್ವದ ತೀರ್ಪು..!

ಬಿಡದಿ ಟೌನ್‌ಶಿಪ್‌ ಯೋಜನೆ: ರೈತರ ಭೂಮಿ ಕಸಿಯಲ್ಲ, denotification ಮಾಡಲ್ಲ- ಸಿಎಂ ಡಿಕೆ. ಶಿವಕುಮಾರ್ ಸ್ಪಷ್ಟನೆ

Operation Sindoor; Kirana Hills ಪರಮಾಣು ನೆಲೆಗೆ ಅಪ್ಪಳಿಸಿದ ಭಾರತದ ಡ್ರೋನ್? ಬೆಚ್ಚಿಬಿದ್ದ ಪಾಕಿಸ್ತಾನ..! Indian Army ಹೇಳಿದ್ದೇನು?