ಸಿಆರ್ ಪಿಎಫ್ ಪಡೆ 
ದೇಶ

ಮೂರು ದಿನಕ್ಕೊಬ್ಬ ಯೋಧನ ಆತ್ಮಹತ್ಯೆ

ಪ್ರತಿ ಮೂರು ದಿಕ್ಕೊಮ್ಮೆ ಒಬ್ಬ ಯೋಧ ಭಾರತೀಯ ಅರೆಸೇನಾ ಪಡೆಯಲ್ಲಿ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾನೆ ಎಂಬ ಆತಂಕಕಾರಿ ಸುದ್ದಿ ಹೊರಬಿದ್ದಿದೆ...

ನವದೆಹಲಿ: ಪ್ರತಿ ಮೂರು ದಿಕ್ಕೊಮ್ಮೆ ಒಬ್ಬ ಯೋಧ ಭಾರತೀಯ ಅರೆಸೇನಾ ಪಡೆಯಲ್ಲಿ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾನೆ ಎಂಬ ಆತಂಕಕಾರಿ ಸುದ್ದಿ ಹೊರಬಿದ್ದಿದೆ.

ಈಶಾನ್ಯ ಭಾಗದಲ್ಲೇ 2012 ರಿಂದ 2014 ರವೆಗೆ 370 ಯೋಧರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.ಇದರಿಂದ ಸಿಆರ್ ಪಿಎಫ್ ಪಡೆದು ಬಲ ಕುಸಿಯುತ್ತಿದೆ ಎನ್ನುವ ಆಘಾತಕಾರಿ ಮಾಹಿತಿಯೊಂದು ಹೊರಬಿದ್ದಿದೆ. ಇದಲ್ಲದೆ 2014ರಲ್ಲಿ ಪ್ರತಿ ದಿನಕ್ಕೆ 20 ಯೋಧರಂತೆ 6 ಸಾವಿರ ಮಂದಿ ಸಿಆರ್ ಪಿಎಫ್ ಅನ್ನು ತೊರೆದಿದ್ದಾರೆ. 2013 ರಲ್ಲಿ 4, 186 ಮಂದಿ ದೇಶದ ಅತಿದೊಡ್ಡ ಅರೆಸೇನಾ ಪಡೆಯಾದ ಸಿಆರ್ ಪಿಎಫ್ ತೊರೆದಿದ್ದಾರೆ. ಭಾರತದ ಅರೆಸೇನಾ ಪಡೆ ಯೋಧರು ಶತ್ರುಗಳ ಗುಂಡಿನ ದಾಳಿಗೆ ಬಲಿಯಾಗುತ್ತಿಲ್ಲ, ಆದರೆ ಕಳೆಪೆ ಸೌಲಭ್ಯಗಳು, ಒತ್ತಡಗಳೇ ಅವರನ್ನು ಕೊಲ್ಲುತ್ತಿವೆ.

ಈಶಾನ್ಯದ ಕಾಡುಗಳಲ್ಲಿ ನಕ್ಸಲರ ವಿರುದ್ಧ ಹೋರಾಟಕ್ಕಿಂತ ಯೋಧರನ್ನು ಅವರ ದುಸ್ಥಿತಿಯೇ ಸಾವಿನ ಬಾಯಿಗೆ ತಳ್ಳುತ್ತಿದೆ. ಹೃದಯಾಘಾತ, ಮಲೇರಿಯಾ, ಮತ್ತು ಎಚ್ ಐವಿ ಕಾಯಿಲೆಗಳಿಗೆ 1, 131 ಯೋಧರು ಕಳೆದ 5 ವರ್ಷಗಳಲ್ಲಿ ಮೃತಪಟ್ಟಿದ್ದಾರೆ. ನಕ್ಸಲರಿಗೆ ಬಲಿಯಾಗಿರುವುದು 323 ಸೈನಿಕರು ಮಾತ್ರ.ಕಾಡುವಾಸ, ನಕ್ಸಲರೊಂದಿಗೆ ಕಾಳಗ, ಈಶಾನ್ಯದ ಹಿಮಪರ್ವತಗಳ ಕೊರೆಯುವ ಚಳಿ ನಡೆಸುತ್ತಿರುವ ಅವರಿಗೆ ಶೌಚಾಲಯ ಸೇರಿದಂತೆ ಯಾವುದೇ ಅಗತ್ಯ ಮೂಲ ಸೌಲಭ್ಯಗಳಿಲ್ಲ. ಇದರಿಂದ ಸೈನ್ಯದಿಂದ ಯೋಧರು ವಿಮುಖರಾಗುತ್ತಿದ್ದಾರೆ ಎನ್ನಲಾಗಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಭಾರತದ ಮೇಲೆ ಶೇ.50 ರಷ್ಟು ಸುಂಕಾಸ್ತ್ರ ಜಾರಿ: ಕೊನೆಗೆ ಒಟ್ಟಿಗೆ ಸೇರ್ತಿವಿ! US ಖಜಾನೆ ಮುಖ್ಯಸ್ಥ ಹಿಂಗ್ಯಾಕಂದ್ರು?

ಸಶಸ್ತ್ರ ಪಡೆಗಳು ಮುಂದಿನ ಭದ್ರತಾ ಸವಾಲುಗಳಿಗೆ ಸಿದ್ಧರಾಗಿರಬೇಕು: ರಾಜನಾಥ್ ಸಿಂಗ್

ಹಿಂದೂ ನಂಬಿಕೆ ಒಡೆಯುತ್ತಿರುವ ಬಾನು ಮುಷ್ತಾಕ್: ಶಿವನ ಬೆಟ್ಟವನ್ನೇ 'ಯೇಸು ಬೆಟ್ಟ' ಮಾಡಲು ಹೊರಟವರಿಂದ ಧರ್ಮದ ಪಾಠ ಬೇಡ- ಪ್ರತಾಪ್ ಸಿಂಹ

2030 Commonwealth Games: ಭಾರತದ ಬಿಡ್‌ಗೆ ಕೇಂದ್ರ ಸಂಪುಟ ಅನುಮೋದನೆ! ಅಹಮದಾಬಾದ್ ನಲ್ಲಿ ಆಯೋಜಿಸುವ ಪ್ರಸ್ತಾಪ!

'ಡೆವಿಲ್‌' ಸಿನಿಮಾದ '‘ಇದ್ರೆ ನೆಮ್ಮದಿಯಾಗ್ ಇರ್ಬೇಕ್' ಹಾಡಿಗೆ ಭರ್ಜರಿ ಸ್ಟೆಪ್ ಹಾಕಿದ ವಿನೋದ್ ರಾಜ್! Video

SCROLL FOR NEXT