ಪತ್ರ 
ದೇಶ

ನನ್ನನ್ನು ರೇಪ್ ಮಾಡಿ: ನಿರ್ಭಯಾ ಅತ್ಯಾಚಾರಿ ಪರ ವಕೀಲರಿಗೆ ಬೆಂಗಳೂರು ಯುವತಿ ಸವಾಲು

ದೆಹಲಿಯ ನಿರ್ಭಯಾ ಅತ್ಯಾಚಾರ ಪ್ರಕರಣದ​ ಆರೋಪಿಗಳ ಪರ ವಕೀಲ ಎಂ.ಎಲ್ ಶರ್ಮಾರಿಗೆ ಬೆಂಗಳೂರಿನ ಯುವತಿ ಮೌಮಿತಾ ಪಾಲ್​...

ಬೆಂಗಳೂರು: ದೆಹಲಿಯ ನಿರ್ಭಯಾ ಅತ್ಯಾಚಾರ ಪ್ರಕರಣದ​ ಆರೋಪಿಗಳ ಪರ ವಕೀಲ ಎಂ.ಎಲ್ ಶರ್ಮಾರಿಗೆ ಬೆಂಗಳೂರಿನ ಯುವತಿ ಮೌಮಿತಾ ಪಾಲ್​ ಎಂಬುವರು ಪತ್ರ ಬರೆದಿದ್ದು, ತಾಕತ್ತಿದ್ದರೆ ತನ್ನನ್ನು ಬಂದು ರೇಪ್​ ಮಾಡುವಂತೆ ಸವಾಲು ಹಾಕಿದ್ದಾಳೆ. ಈ ಪತ್ರ ಇದೀಗ ಸಂಚಲನ ಮೂಡಿಸಿದೆ.

ಇತ್ತೀಚಿಗೆ ಬಂದ ಇಂಡಿಯಾಸ್ ಡಾಟರ್ ಡಾಕ್ಯುಮೆಂಟರಿಯಲ್ಲಿ ಶರ್ಮಾ ಅವರು ನಿರ್ಭಯಾ ವಿರುದ್ಧ ಮಾತಾನಾಡಿದ್ದು ಹಲವರ ಕೋಪಕ್ಕೆ ಕಾರಣವಾಗಿತ್ತು. ಅದಕ್ಕೆ ಪ್ರತಿಕ್ರಿಯಿಸಿ ಪತ್ರ ಬರೆದಿರುವ ಬೆಂಗಳೂರಿನಲ್ಲಿ ಸಾಫ್ಟ್​ವೇರ್​​ ಎಂಜಿನಿಯರ್​ ಆಗಿರುವ ಪಾಲ್, ​ ತಾಕತ್ತಿದ್ದರೆ ಬಂದು ನನ್ನನ್ನು ರೇಪ್ ಮಾಡಿ ಎಂದು ಸವಾಲು ಹಾಕಿದ್ದಾರೆ.

24 ವರ್ಷದ ಯುವತಿ ನಾನು, ಖಾಸಗಿ ಕಂಪನಿಯಲ್ಲಿ ಕೆಲಸ ಮಾಡ್ತಿದ್ದೀನಿ, ‘ನಾನು ಆಫೀಸಿನಲ್ಲೇ ಸತತ 5 ದಿನಗಳ ಕಾಲ ಉಳಿದಿದ್ದೇನೆ’, ‘ರಾತ್ರಿ ವೇಳೆ ಮನೆಯಿಂದ ಹೊರಗೆ ಕಳೆದಿದ್ದೇನೆ’, ‘ ರೇಪಿಸ್ಟ್’​​​​ಗಳು ದೇಶಾದ್ಯಂತ ಸುತ್ತಿ ಹೆಣ್ಮಕ್ಕಳನ್ನು ರೇಪ್​ ಮಾಡಬೇಕಾ..?? ಬಂದು ನನ್ನನ್ನು ರೇಪ್ ಮಾಡಿ ಎಂದು ವಕೀಲ ಶರ್ಮಾರಿಗೆ ಮೌಮಿತಾ ಪಾಲ್​ ಪ್ರಶ್ನೆಗಳ ಸುರಿಮಳೆಗೈದಿದ್ದಾರೆ.  

2012ರ ಡಿಸೆಂಬರ್‌ 16ರ ನಿರ್ಭಯಾ ಗ್ಯಾಂಗ್‌ ರೇಪ್‌ ಪ್ರಕರಣದಲ್ಲಿ ಆರೋಪಿಗಳ ಪರವಾಗಿ ನ್ಯಾಯಾಲಯದಲ್ಲಿ ವಾದಿಸಿದ್ದ ಮತ್ತು ಬಿಬಿಸಿ ಸಾಕ್ಷ್ಯ ಚಿತ್ರದಲ್ಲಿ ಆಕ್ಷೇಪಾರ್ಹವಾಗಿ ಮಹಿಳಾ ವಿರೋಧಿ ಹೇಳಿಕೆಗಳನ್ನು ನೀಡಿದ್ದ ವಕೀಲ ಎಂ.ಎಲ್ ಶರ್ಮಾರಿಗೆ ಬಾರ್‌ ಕೌನ್ಸಿಲ್‌ ಆಫ್ ಇಂಡಿಯಾ ಶೋಕಾಸ್‌ ನೊಟೀಸ್‌ ಜಾರಿ ಮಾಡಿತ್ತು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಜಮ್ಮುವಿನಲ್ಲಿ ಭೀಕರ ಮಳೆಯಿಂದ ಭಾರೀ ಅನಾಹುತ ಸೃಷ್ಟಿ: ವೈಷ್ಣೋದೇವಿ ಮಾರ್ಗದಲ್ಲಿ ಭೂಕುಸಿತ, ಕನಿಷ್ಠ 30 ಮಂದಿ ಸಾವು

ದೇಶಾದ್ಯಂತ ಗಣೇಶ ಚತುರ್ಥಿ ಸಂಭ್ರಮ: ದೇವಾಲಯಗಳಲ್ಲಿ ವಿಶೇಷ ಪೂಜೆ, ರಾಷ್ಟ್ರಪತಿ, ಪ್ರಧಾನಿ, ಮುಖ್ಯಮಂತ್ರಿಗಳಿಂದ ಶುಭಾಶಯ

ಬೂಕರ್ ಪ್ರಶಸ್ತಿ ಮಹತ್ವ ತಿಳಿದಿದ್ದರೆ ನನ್ನನ್ನು ಟೀಕಿಸುತ್ತಿರಲಿಲ್ಲ, ಸಾಹಿತ್ಯ ಸಮ್ಮೇಳನದ ವಿಡಿಯೋ ತಿರುಚಲಾಗಿದೆ: ಬಾನು ಮುಷ್ತಾಕ್

ಡಿಕೆಶಿ RSS ಗೀತೆ ಹೇಳಿದ್ದೂ ರಾಹುಲ್‌ ಗಾಂಧಿಗೆ ತಲುಪಲಿ: ಶಾಕ್ ಕೊಟ್ಟ ಸತೀಶ್‌ ಜಾರಕಿಹೊಳಿ ಹೇಳಿಕೆ

ಧರ್ಮಸ್ಥಳ ಕೇಸ್: ತನಿಖೆ ಶೀಘ್ರಗತಿ ಪೂರ್ಣಗೊಳಿಸಲು SIT ಪ್ರಯತ್ನ; ಗೃಹ ಸಚಿವ ಡಾ.ಜಿ.ಪರಮೇಶ್ವರ್

SCROLL FOR NEXT