ದೇಶ

ರೈತರ ಕುರಿತು ಮೋದಿ ಮನ್ ಕಿ ಬಾತ್ ಇಂದು

ನವದೆಹಲಿ: ದೇಶದಲ್ಲಿ ರೈತರ ಸಮಸ್ಯೆ ಹಾಗೂ ಅವರ ಸ್ಥಿತಿಗತಿ ಕುರಿತಂತೆ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಇಂದು ಮನ್ ಕಿ ಬಾತ್ ರೇಡಿಯೋ ಕಾರ್ಯಕ್ರಮದಲ್ಲಿ ಮಾತನಾಡಲಿದ್ದಾರೆ ಎಂದು ಮೂಲಗಳಿಂದ ತಿಳಿದುಬಂದಿದೆ.

ಮಾರ್ಚ್ 22 ರಲ್ಲಿನ ರೇಡಿಯೋ ಮನ್ ಕಿ ಬಾತ್ ಕಾರ್ಯಕ್ರಮದಲ್ಲಿ ಕೃಷಿಯೇತರ ಕ್ಷೇತ್ರದಲ್ಲಿ ಕಾರ್ಯ ನಿರ್ವಹಿಸುತ್ತಿರುವ ನನ್ನ ಸೋದರ ಹಾಗೂ ಸೋದರಿಯರೊಂದಿಗೆ ಮಾತನಾಡಬೇಕು. ಅವರ ಸಮಸ್ಯೆ ಹಾಗೂ ಸಲಹೆಗಳನ್ನು ಕೇಳಬೇಕೆಂದು ಮೋದಿಯವರು ತಮ್ಮ ಟ್ವಿಟರ್ ಖಾತೆಯಲ್ಲಿ ಹೇಳಿಕೊಂಡಿದ್ದರು.

ರೈತರ ಭೂ ಮಸೂದೆ ಕಾಯ್ದೆ ವಿವಾದಾತ್ಮಕ ಮಸೂದೆ ಹಾಗೂ ಅಕಾಲಿಕ ಮಳೆ, ಹಿಮಪಾತದಿಂದಾಗಿ ರೈತರಿಗೆ ಅಪಾರ ನಷ್ಟವಾಗಿರುವುದರಿಂದ ರೈತರಿಗೆ ಮೋದಿ ಅವರ ಈ ಬಾರಿಯ ಮನ್ ಕಿ ಬಾತ್ ಕಾರ್ಯಕ್ರಮ ಅತ್ಯಂತ ಮಹತ್ವದಾಗಿದೆ ಎನ್ನಬಹುದು.

SCROLL FOR NEXT