ಶೈಲೇಶ್ ಯಾದವ್ ಅವರ ಮನೆ (ಸಂಗ್ರಹ ಚಿತ್ರ) 
ದೇಶ

ಶೈಲೇಶ್ ಯಾದವ್‍ರದ್ದು ಕೊಲೆ?

ಮಧ್ಯಪ್ರದೇಶ ಅರಣ್ಯ ಸಿಬ್ಬಂದಿ ನೇಮಕಾತಿ ಪರೀಕ್ಷಾ ಮಂಡಳಿ(ವ್ಯಾಪಮ್) ಹಗರಣ ಪ್ರಮುಖ ಆರೋಪಿ ಗವರ್ನರ್ ರಾಮ್ ನರೇಶ್ ಯಾದವ್...

ಭೋಪಾಲ್: ಮಧ್ಯಪ್ರದೇಶ ಅರಣ್ಯ ಸಿಬ್ಬಂದಿ ನೇಮಕಾತಿ ಪರೀಕ್ಷಾ ಮಂಡಳಿ(ವ್ಯಾಪಮ್) ಹಗರಣ ಪ್ರಮುಖ ಆರೋಪಿ ಗವರ್ನರ್ ರಾಮ್ ನರೇಶ್ ಯಾದವ್ ಅವರ ಪುತ್ರನ ಸಾವು ಹೊಸ ತಿರುವು ಪಡೆದುಕೊಳ್ಳುತ್ತಿದೆ.

ಅವರ ಕುಟುಂಬ ಸದಸ್ಯರು ಇದು ಸಹಜ ಸಾವು ಎಂದು ಹೇಳಿಕೆ ನೀಡಿದ್ದರೂ, ಶೈಲೇಶ್ ಅವರಿಗೆ ವಿಷ ಪ್ರಾಶನ ಮಾಡಲಾಗಿದೆ ಎಂಬ ಅನುಮಾನಗಳು ಬಲವಾಗಿದೆ. ಇದು ಸಹಜ ಸಾವಾಗಿದ್ದರಿಂದ ನಾವು ಈ ಪ್ರಕರಣದ ತನಿಖೆ ನಡೆಸಲು ಒತ್ತಾಯಿಸಲ್ಲ ಎಂದು ಮೃತ ಶೈಲೇಶ್ ಅಣ್ಣ ಕಮಲೇಶ್ ಯಾದವ್ ಹೇಳಿರುವುದು ಅನುಮಾನಗಳಿಗೆ ಎಡೆಮಾಡಿದೆ. ಮೇಲ್ನೋಟಕ್ಕೆ ಹಾರ್ಟ್ ಅಟ್ಯಾಕ್ ಎಂದಿರುವ ಪೊಲೀಸರು ಅಂತಿಮ ವರದಿಯನ್ನು ನಿರೀಕ್ಷಿಸುತ್ತಿದ್ದಾರೆ. ಉಸಿರಾಟದ ಸಮಸ್ಯೆಯಿಂದ ಭೋಪಾಲ್‍ನ ಆಸ್ಪತ್ರೆಗೆ ದಾಖಲಾಗಿದ್ದ ಗವರ್ನರ್ ರಾಮ್ ನರೇಶ್ ಯಾದವ್ ಅವರನ್ನು ಏರ್ ಆ್ಯಂಬುಲೆನ್ಸ್‍ನಲ್ಲಿ ಲಖನೌ ಕರೆತರಲಾಗಿದೆ.

ವ್ಯಾಪಮ್ ಹಗರಣದ ಆರೋಪ ಎದುರಿಸುತ್ತಿರುವ ಶೈಲೇಶ್ ಯಾದವ್ ಬುಧವಾರ ತಮ್ಮ ತಂದೆಯ ಅಧಿಕೃತ ನಿವಾಸದಲ್ಲಿ ನಿಗೂಢವಾಗಿ ಸಾವನ್ನಪ್ಪಿದ್ದರು. 3ನೇ ದರ್ಜೆ ಶಿಕ್ಷಕರ ನೇಮಕಾತಿ ವೇಳೆ ದುಡ್ಡು ತೆಗೆದುಕೊಂಡು 10 ಅಭ್ಯರ್ಥಿಗಳನ್ನು ಆಯ್ಕೆ ಮಾಡಿರುವ ಆರೋಪವೂ ಶೈಲೇಶ್ ಮೇಲಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಭಾರತದ ಮೇಲೆ ಶೇ.50 ರಷ್ಟು ಸುಂಕಾಸ್ತ್ರ ಜಾರಿ: ಕೊನೆಗೆ ಒಟ್ಟಿಗೆ ಸೇರ್ತಿವಿ! US ಖಜಾನೆ ಮುಖ್ಯಸ್ಥ ಹಿಂಗ್ಯಾಕಂದ್ರು?

ಸಶಸ್ತ್ರ ಪಡೆಗಳು ಮುಂದಿನ ಭದ್ರತಾ ಸವಾಲುಗಳಿಗೆ ಸಿದ್ಧರಾಗಿರಬೇಕು: ರಾಜನಾಥ್ ಸಿಂಗ್

ಹಿಂದೂ ನಂಬಿಕೆ ಒಡೆಯುತ್ತಿರುವ ಬಾನು ಮುಷ್ತಾಕ್: ಶಿವನ ಬೆಟ್ಟವನ್ನೇ 'ಯೇಸು ಬೆಟ್ಟ' ಮಾಡಲು ಹೊರಟವರಿಂದ ಧರ್ಮದ ಪಾಠ ಬೇಡ- ಪ್ರತಾಪ್ ಸಿಂಹ

2030 Commonwealth Games: ಭಾರತದ ಬಿಡ್‌ಗೆ ಕೇಂದ್ರ ಸಂಪುಟ ಅನುಮೋದನೆ! ಅಹಮದಾಬಾದ್ ನಲ್ಲಿ ಆಯೋಜಿಸುವ ಪ್ರಸ್ತಾಪ!

'ಡೆವಿಲ್‌' ಸಿನಿಮಾದ '‘ಇದ್ರೆ ನೆಮ್ಮದಿಯಾಗ್ ಇರ್ಬೇಕ್' ಹಾಡಿಗೆ ಭರ್ಜರಿ ಸ್ಟೆಪ್ ಹಾಕಿದ ವಿನೋದ್ ರಾಜ್! Video

SCROLL FOR NEXT