ಬಿಜೆಪಿ ಸಂಸದ ಸಾಕ್ಷಿ ಮಹಾರಾಜ್ 
ದೇಶ

ಮೋದಿ ದೇವಧೂತ, ರಾಹುಲ್ ಹುಚ್ಚ: ಮತ್ತೆ ವಿವಾದದಲ್ಲಿ ಸಾಕ್ಷಿ ಮಹಾರಾಜ್

ಬಿಜೆಪಿ ಅಧಿಕಾರಕ್ಕೆ ಬಂದಾಗಿನಿಂದಲೂ ಒಂದಲ್ಲ ಒಂದು ರೀತಿಯಲ್ಲಿ ವಿವಾದ ಹುಟ್ಟುಹಾಕುತ್ತಲೇ ಇರುವ ಬಿಜೆಪಿ ಸಂಸದ ಸಾಕ್ಷಿ ಮಹಾರಾಜ್ ರಾಹುಲ್ ಗಾಂಧಿ ಅವರನ್ನು 'ಹುಚ್ಚ' ಎನ್ನುವ ಮೂಲಕ ಇದೀಗ ಮತ್ತೆ ಸುದ್ದಿಗೆ ಬಂದಿದ್ದಾರೆ...

ಇಟಾ(ಉತ್ತರ ಪ್ರದೇಶ): ಬಿಜೆಪಿ ಅಧಿಕಾರಕ್ಕೆ ಬಂದಾಗಿನಿಂದಲೂ ಒಂದಲ್ಲ ಒಂದು ರೀತಿಯಲ್ಲಿ ವಿವಾದ ಹುಟ್ಟುಹಾಕುತ್ತಲೇ ಇರುವ ಬಿಜೆಪಿ ಸಂಸದ ಸಾಕ್ಷಿ ಮಹಾರಾಜ್ ರಾಹುಲ್ ಗಾಂಧಿ ಅವರನ್ನು 'ಹುಚ್ಚ' ಎನ್ನುವ ಮೂಲಕ ಇದೀಗ ಮತ್ತೆ ಸುದ್ದಿಗೆ ಬಂದಿದ್ದಾರೆ.

ಅಕಾಲಿಕ ಮಳೆ ಉಂಟುಮಾಡಿದ ಬೆಳೆ ನಾಶದಿಂದ ನೊಂದಿರುವ ರೈತರ ಸಮಸ್ಯೆ ಅರಿಯುವ ಸಲುವಾಗಿ ಪ್ರವಾಸ ಕೈಕೊಂಡಿರುವ ರಾಹುಲ್ ಗಾಂಧಿ ಕುರಿತಂತೆ ಮಾತನಾಡಿರುವ ಸಾಕ್ಷಿ ಮಹಾರಾಜ್, ರಾಹುಲ್ ಗೆ ತಲೆ ಸರಿಯಿಲ್ಲ. ಆತನೊಬ್ಬ ಹುಚ್ಚ, ಮೆಕ್ಕೆ ಜೋಳಕ್ಕೂ ಗೋಧಿಗೂ ವ್ಯತ್ಯಾಸ ತಿಳಿಯದ ವ್ಯಕ್ತಿಯೊಬ್ಬ ದೇಶದ ರೈತರ ಸಮಸ್ಯೆ ಅರಿಯಲು ಹೇಗೆ ಸಾಧ್ಯ. ರೈತರ ಸಮಸ್ಯೆ ಅರಿಯಲು ಸಾಂತ್ವನ ಹೇಳಲು ರಾಹುಲ್ ಪ್ರವಾಸ ಕೈಗೊಂಡಿರುವುದು ನಿಜವಾಗಿಯೂ ಹಾಸ್ಯಾಸ್ಪದ ಸಂಗತಿ ಎಂದು ವ್ಯಂಗ್ಯವಾಡಿದ್ದಾರೆ.

ರಾಜಕೀಯದ ರಂಗದ ಬಗ್ಗೆ ಇನ್ನೂ ಎಬಿಸಿಡಿಯನ್ನೂ ಕಲಿಯದ ರಾಹುಲ್ ರೈತರ ಸಮಸ್ಯೆ ಬಗ್ಗೆ ಹೇಗೆ ಮಾತನಾಡುತ್ತಾರೆ. ನಿಜವಾಗಿಯೂ ರಾಹುಲ್ ಗೆ ತಲೆ ಸರಿಯಿಲ್ಲ. ರಾಹುಲ್ ಒಬ್ಬ ಹುಚ್ಚ ಎಂದು ಹೇಳಿದ್ದಾರೆ.

ಇದೇ ವೇಳೆ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರನ್ನು ಕೃಷ್ಟನಿಗೆ ಹೋಲಿಕೆ ಮಾಡಿರುವ ಸಾಕ್ಷಿ ಮಹಾರಾಜ್, ಮಹಾಭಾರತದಲ್ಲಿ ದ್ರೌಪದಿಯ ವಸ್ತ್ರಾಪಹರಣ ಮಾಡುವ ವೇಳೆ ಆಪತ್ಭಾಂಧವನಂತೆ ಹೇಗೆ ಕೃಷ್ಣ ಬಂದು ವಸ್ತ್ರ ನೀಡುತ್ತಾನೆಯೋ, ಹಾಗೆ ನೇಪಾಳದ ನೆರೆ ಸಂತ್ರಸ್ಥರಿಗೆ ಮೋದಿ ಶ್ರೀಕೃಷ್ಣನಂತೆ ನೆರವಾದರು ಎಂದು ಸಾಕ್ಷಿ ಮಹಾರಾಜ್ ಪ್ರಧಾನಿ ಅವರನ್ನು ಹಾಡಿ ಹೊಗಳಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಫೈಟರ್ ಜೆಟ್‌ ಇಂಜಿನ್ ಖರೀದಿ: ಅಮೆರಿಕಾದ GE ಸಂಸ್ಥೆಯೊಂದಿಗೆ $1 ಬಿಲಿಯನ್ ಮೊತ್ತದ ಒಪ್ಪಂದಕ್ಕೆ ಭಾರತ ಸಿದ್ಧತೆ!

ಸುಂಕ ಸಮರ: Trump 4 ಬಾರಿ ಕರೆ ಮಾಡಿದರೂ ಉತ್ತರಿಸದ PM Modi; ಅಮೆರಿಕ ನಿಯೋಗಕ್ಕೂ No Entry!

'ನನ್ನ ಕುರ್ಚಿ'ಗೆ ಪ್ರಧಾನಿ ಮೋದಿ ಗೌರವ ನೀಡಬೇಕು: ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಕಿಡಿ!

ಸುಪ್ರೀಂ ಕೋರ್ಟ್‌ಗೆ ನ್ಯಾ. ಪಾಂಚೋಲಿ ಹೆಸರು ಶಿಫಾರಸು: ನ್ಯಾ. ಬಿ. ವಿ. ನಾಗರತ್ನ ತೀವ್ರ ಅಸಮಾಧಾನ!

SCROLL FOR NEXT