ಪ್ರಧಾನಿ ನರೇಂದ್ರ ಮೋದಿ 
ದೇಶ

ಭಗವಾನ್ ಬುದ್ಧನ ಆದರ್ಶಗಳಿಗೆ ದುಃಖವನ್ನು ದೂರ ಮಾಡಬಲ್ಲ ಶಕ್ತಿಯಿದೆ: ಮೋದಿ

ಭಗವಾನ್ ಬುದ್ಧನ ಆದರ್ಶಗಳು ಇಂದಿಗೂ ಮಾದರಿ, ಬುದ್ಧನ ಆದರ್ಶಗಳನ್ನು ನಾವು ಪಾಲಿಸಬೇಕು. ಬುದ್ಧನಂತೆ ನಾವು ಕೂಡ ಶಾಂತಿ...

ನವದೆಹಲಿ: ಭಗವಾನ್ ಬುದ್ಧನ ಆದರ್ಶಗಳು ಇಂದಿಗೂ ಮಾದರಿ, ಬುದ್ಧನ ಆದರ್ಶಗಳನ್ನು ನಾವು ಪಾಲಿಸಬೇಕು. ಬುದ್ಧನಂತೆ ನಾವು ಕೂಡ ಶಾಂತಿ ಹಾಗೂ ಸೌಹಾರ್ದತೆಗೆ ಹೆಚ್ಚು ಮಹತ್ವ ನೀಡಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಸೋಮವಾರ ಹೇಳಿದ್ದಾರೆ.

ದೆಹಲಿಯ ತಾಳಕಟೋರ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಅಂತರಾಷ್ಟ್ರೀಯ ಬುದ್ಧ ಪೂರ್ಣಿಮೆ ದಿನ ಆಚರಣೆ ಕಾರ್ಯಕ್ರಮದಲ್ಲಿ 31 ದೇಶದ ಪ್ರತಿನಿಧಿಗಳು ಭಾಗಿಯಾಗಿದ್ದಾರೆ. ಈ ವೇಳೆ ಮಾತನಾಡಿದ ಮಾತನಾಡಿದ ಮೋದಿ ಅವರು, ಬುದ್ಧನ ಆದರ್ಶಗಳು ಇಂದಿಗೂ ಮಾದರಿ, ಬುದ್ಧನ ಆದರ್ಶಗಳನ್ನು ನಾವು ಪಾಲಿಸಬೇಕು. ಬುದ್ಧನಂತೆ ನಾವು ಕೂಡ ಶಾಂತಿ ಹಾಗೂ ಸೌಹಾರ್ದತೆಗೆ ಹೆಚ್ಚು ಮಹತ್ವ ನೀಡಬೇಕು ಎಂದು ಕರೆ ನೀಡಿದ್ದಾರೆ.

ರಾಜಮನೆತನದಲ್ಲಿ ಹುಟ್ಟಿದ ಭಗವಾನ್ ಬುದ್ಧ ರಾಜವೈಭೋಗವನ್ನು ತ್ಯಜಿಸಿ ವಿರಾಗಿಯಾದ, ರಾಜವೈಭೋಗವನ್ನು ತ್ಯಜಿಸುವುದು ಸುಲಭದ ವಿಷಯವಲ್ಲ ಎಂದರು.

ಬುದ್ಧನ ಜನ್ಮಸ್ಥಳವಾದ ನೇಪಾಳ ಇಂದು ಭೂಕಂಪದಿಂದ ಪೀಡಿತವಾಗಿದೆ. ನಾವೆಲ್ಲರೂ ಭಗವಾನ್ ಬುದ್ಧನ ಪ್ರಾರ್ಥನೆ ಮಾಡಬೇಕಿದೆ. ಭೂಕಂಪ ಪೀಡಿತರ ದುಃಖದಲ್ಲಿ ನಾವೆಲ್ಲರೂ ಭಾಗಿಯಾಗಿದ್ದೇವೆ. ನೇಪಾಳದಲ್ಲಿ ಭೂಕಂಪಕ್ಕೆ ಸಿಲುಕಿ ನರಳಾಡುತ್ತಿರುವವರ ಕಣ್ಣೀರು ಒರೆಸಲಾಗುವುದು ಎಂದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಜಮ್ಮುವಿನಾದ್ಯಂತ ಭಾರಿ ಮಳೆ: ಅಪಾರ ಪ್ರಮಾಣದ ಹಾನಿ, 10 ಮಂದಿ ಸಾವು: ಕೊಚ್ಚಿ ಹೋದ ರಸ್ತೆ, ಸೇತುವೆಗಳು!

ಫೈಟರ್ ಜೆಟ್‌ ಇಂಜಿನ್ ಖರೀದಿ: ಅಮೆರಿಕಾದ GE ಸಂಸ್ಥೆಯೊಂದಿಗೆ $1 ಬಿಲಿಯನ್ ಮೊತ್ತದ ಒಪ್ಪಂದಕ್ಕೆ ಭಾರತ ಸಿದ್ಧತೆ!

ಡಿಕೆಶಿ ಕ್ಷಮೆ ಕೇಳಬಾರದಿತ್ತು; ಮುಲಾಜಿಲ್ಲದೆ ಕಾಂಗ್ರೆಸ್ ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ಬಿಸಾಕಬೇಕಿತ್ತು- ಆರ್. ಅಶೋಕ್

ಸುಂಕ ಸಮರ: Trump 4 ಬಾರಿ ಕರೆ ಮಾಡಿದರೂ ಉತ್ತರಿಸದ PM Modi; ಅಮೆರಿಕ ನಿಯೋಗಕ್ಕೂ No Entry!

SCROLL FOR NEXT