ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ 
ದೇಶ

ಅಧಿಸೂಚನೆ ಹೊರಡಿಸಿದ ಕಾರ್ಯದರ್ಶಿ ಕಚೇರಿಗೆ ಬೀಗ

ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಮತ್ತು ಲೆಫ್ಟಿನೆಂಟ್ ಗವರ್ನರ್ ನಜೀಬ್ ಜಂಗ್ ನಡುವಣ ಸಮರ ತಾರಕಕ್ಕೇರಿದೆ. ಆದರೆ ಬಲಿಪಶು ಆಗಿರುವುದು ಮಾತ್ರ ಒಬ್ಬ ಹಿರಿಯ ಸರ್ಕಾರಿ ಅಧಿಕಾರಿ!...

ನವದೆಹಲಿ: ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಮತ್ತು ಲೆಫ್ಟಿನೆಂಟ್ ಗವರ್ನರ್ ನಜೀಬ್ ಜಂಗ್ ನಡುವಣ ಸಮರ ತಾರಕಕ್ಕೇರಿದೆ. ಆದರೆ ಬಲಿಪಶು ಆಗಿರುವುದು ಮಾತ್ರ ಒಬ್ಬ ಹಿರಿಯ ಸರ್ಕಾರಿ ಅಧಿಕಾರಿ!

ಸೋಮವಾರ ನಡೆದ ಅತ್ಯಂತ ಮುಜುಗರಕಾರಿ ಸನ್ನಿವೇಶವೊಂದರಲ್ಲಿ, ಸೇವಾ ಇಲಾಖೆಯ ಪ್ರಧಾನ ಕಾರ್ಯದರ್ಶಿ ಅನಿಂದೋ ಮಜುಂದಾರ್ ಎಂದಿನಂತೆ ದೆಹಲಿಯ ತಮ್ಮ ಸೆಕ್ರೆಟರಿಯಟ್ ಕಟ್ಟಡದ ಏಳನೇ ಮಹಡಿಯಲ್ಲಿರುವ ತಮ್ಮ ಕಚೇರಿಗೆ ಹೋದರೆ, ತಮ್ಮ ಕೊಠಡಿಗೆ ಬೀಗ ಜಡಿದಿರುವುದನ್ನು ಕಂಡು ದಂಗಾಗಿದ್ದಾರೆ.

ಕೊಠಡಿಗೆ ಮಾತ್ರವಲ್ಲದೆ ಅವರ ಸುಪರ್ದಿಯ ಇಡೀ ಕಚೇರಿಗೇ ಬೀಗ ಹಾಕಲಾಗಿತ್ತು. ಘಟನೆಯ ಹಿನ್ನೆಲೆ: ದೆಹಲಿ ಸರ್ಕಾರದ ಒಪ್ಪಿಗೆ ಪಡೆಯದೆ ಐಎಎಸ್ ಅಧಿಕಾರಿ ಶಕುಂತಲಾ ಗಾಮ್ಲಿನ್ ಅವರನ್ನು ಪ್ರಭಾರ ಮುಖ್ಯ ಕಾರ್ಯದರ್ಶಿ ಹುದ್ದೆಗೆ ನಜೀಬ್ ಜಂಗ್ ನೇಮಕ ಮಾಡಿದ್ದು ವಿವಾದವಾಗಿತ್ತು. ಕೇಜ್ರಿವಾಲ್ ಇದನ್ನು ಕಟುವಾಗಿ ವಿರೋಧಿಸಿ, ನೇಮಕವನ್ನು ಪ್ರಶ್ನಿಸಿದ್ದರು.

ನಜೀಬ್ ಜಂಗ್ ಕಳಿಸಿದ್ದ ನೇಮಕಾತಿ ಆದೇಶಕ್ಕೆ ಮಜುಂದಾರ್ ಸಹಿ ಹಾಕಿದ್ದು ಕೇಜ್ರಿವಾಲ್ ಕೆಂಗಣ್ಣಿಗೆ ಕಾರಣವಾಗಿತ್ತು. ಶನಿವಾರದಂದು ಮಜುಂದಾರ್‍ರನ್ನು ಕೇಜ್ರಿವಾಲ್ ಏಕಾಏಕಿ ಹುದ್ದೆಯಿಂದ ತೆಗೆದುಹಾಕಿ ಆದೇಶ ಹೊರಡಿಸಿದ್ದಲ್ಲದೆ ಅವರ ಸ್ಥಾನಕ್ಕೆ ರಾಜೇಂದ್ರ ಕುಮಾರ್‍ರನ್ನು ನೇಮಿಸಿದ್ದರು. ಆದರೆ ಸೋಮವಾರ ಜಂಗ್ ಕೇಜ್ರಿವಾಲ್ ಸರ್ಕಾರದ ಆದೇಶ ತಿರಸ್ಕರಿಸಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಅಮೆರಿಕ ನಿಯೋಜಿತ ರಾಯಭಾರಿ ಸೆರ್ಗಿಯೊ ಗೋರ್- ಮೋದಿ, ಜೈಶಂಕರ್ ಭೇಟಿ; Tariff ಒತ್ತಡದ ನಡುವೆ ಭಾರತ-ಅಮೆರಿಕ ಸಂಬಂಧ ಸುಧಾರಣೆಯ ಸೂಚನೆ?

ಅಫ್ಘಾನಿಸ್ತಾನ ನಮ್ಮೊಂದಿಗೆ ಗಡಿ ಹಂಚಿಕೊಂಡಿರುವ ನೆರೆ ರಾಷ್ಟ್ರ- S Jaishankar; ಭಾರತದೊಂದಿಗೆ POK ವಿಲೀನದ ಸುಳಿವು; ಚೀನಾಗೂ ಶಾಕ್!

ಅಬ್ಬಬ್ಬಾ ರೋಮಾಂಚನ: ಅದ್ಭುತ ಸೃಷ್ಟಿಸಿದ ರಿಷಬ್ ಶೆಟ್ಟಿಗೆ ರಾಷ್ಟ್ರಪ್ರಶಸ್ತಿ ಕೊಡಲೇಬೇಕು - ತಮಿಳು ನಿರ್ದೇಶಕ ಅಟ್ಲೀ

Pakistan: ಇಸ್ರೇಲ್ ವಿರೋಧಿ ಪ್ರತಿಭಟನಾ ಜಾಥಾ, ಪೋಲೀಸರ ಗುಂಡೇಟಿಗೆ 11 ಮಂದಿ ಬಲಿ! Video

ಉತ್ತರ ಪ್ರದೇಶಕ್ಕೆ ಭೇಟಿ ನೀಡಿದ ತಾಲಿಬಾನ್ ಸಚಿವನಿಗೆ ಅದ್ಧೂರಿ ಸ್ವಾಗತ, ಸರ್ಕಾರದ ಭದ್ರತೆ; ಯೋಗಿಗೆ ನಾಚಿಕೆಯಾಗಬೇಕು- SP ಸಂಸದ ಶಫೀಕರ್

SCROLL FOR NEXT