ಜೈಪುರದಲ್ಲಿ ಬಿರುಗಾಳಿಯಿಂದಾಗಿ ಧರೆಗುರುಳಿದ ಮರವನ್ನು ಪಕ್ಕಕ್ಕೆ ಸರಿಸಲು ಯತ್ನಿಸುತ್ತಿರುವ ಸಾರ್ವಜನಿಕರು. 
ದೇಶ

ಉತ್ತರ ಭಾರತದಲ್ಲಿ ಬಿರುಗಾಳಿ: ರಾಜಸ್ಥಾನದಲ್ಲಿ 7 ಮಂದಿ ಬಲಿ

ಉತ್ತರ ಭಾರತದಲ್ಲಿ ಮಂಗಳವಾರ ಬಿರುಗಾಳಿ ಸೃಷ್ಟಿಸಿದ್ದ ಅನಾಹುತಕ್ಕೆ ಹಲವು ಮನೆಗಳು ನಾಶವಾಗಿದ್ದು, ರಾಜಸ್ಥಾನದಲ್ಲಿ 7 ಮಂದಿ ಬಲಿಯಾಗಿದ್ದಾರೆ...

ನವದೆಹಲಿ: ಉತ್ತರ ಭಾರತದಲ್ಲಿ ಮಂಗಳವಾರ ಬಿರುಗಾಳಿ ಸೃಷ್ಟಿಸಿದ್ದ ಅನಾಹುತಕ್ಕೆ ಹಲವು ಮನೆಗಳು ನಾಶವಾಗಿದ್ದು, ರಾಜಸ್ಥಾನದಲ್ಲಿ 7 ಮಂದಿ ಬಲಿಯಾಗಿದ್ದಾರೆ.

ಬೇಸಿಗೆಯಿಂದ ನಲುಗಿದ್ದ ಉತ್ತರ ಭಾರತದ ಹಲವೆಡೆ ನಿನ್ನೆ ಮಳೆ ಆರಂಭವಾಗಿತ್ತು. ಈ ವೇಳೆ ಗಾಳಿ ಹೆಚ್ಚಾಗಿದೆ. ನಂತರ 4.15 ಸಂಜೆ ಸುಮಾರಿಗೆ ಬಂದ ಬಿರುಗಾಳಿ ಅಲ್ಲಿನ ಜನತೆಯನ್ನು ಭಯಭೀತ ಗೊಳಿಗೊಳಿಸಿದ್ದು, ಹಲವೆಡೆ ಮನೆಗಳ ಮೇಲ್ಛಾವಣಿಗಳು ಧರೆಗುಳುವಂತೆ ಮಾಡಿದೆ. ಅಲ್ಲದೆ ಗಾಳಿಯ ತೀವ್ರತೆ ಹೆಚ್ಚಾದ ಕಾರಣ ರಸ್ತೆಗಳೆಲ್ಲ ಧೂಳುಮಯವಾಗಿದೆ. ಇದರಿಂದಾಗಿ ರಾಜಸ್ಥಾನದಲ್ಲಿ 7ಕ್ಕೂ ಅಧಿಕ ಮಂದಿ ಸಾವನ್ನಪ್ಪಿರುವುದಾಗಿ ತಿಳಿದುಬಂದಿದೆ.

ರಾಜಸ್ತಾನ ಒಂದರಲ್ಲೇ 5 ಮಂದಿ ಸಾವನ್ನಪ್ಪಿದ್ದು, ಭರತ್ಪುರ ಹಾಗೂ ಬಿಕನರ್ ನಲ್ಲಿ ಇಬ್ಬರು ಸಾವನ್ನಪ್ಪಿರುವುದಾಗಿ ಪೊಲೀಸರು ಹೇಳಿದ್ದಾರೆ. ಬಿರುಗಾಳಿಯಿಂದ ಅಲ್ಲಿನ ಮನೆಗಳು ನಾಶಗೊಂಡಿದ್ದು, ಹಲವೆಡೆ ರಸ್ತೆಗಳಲ್ಲಿ ಮರಗಳು ಧರೆಗುರುಳಿರುವುದಾಗಿ ವರದಿಯಾಗಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಭಾರತದ ಮೇಲೆ ಶೇ.50 ರಷ್ಟು ಸುಂಕಾಸ್ತ್ರ ಜಾರಿ: ಕೊನೆಗೆ ಒಟ್ಟಿಗೆ ಸೇರ್ತಿವಿ! US ಖಜಾನೆ ಮುಖ್ಯಸ್ಥ ಹಿಂಗ್ಯಾಕಂದ್ರು?

ಸಶಸ್ತ್ರ ಪಡೆಗಳು ಮುಂದಿನ ಭದ್ರತಾ ಸವಾಲುಗಳಿಗೆ ಸಿದ್ಧರಾಗಿರಬೇಕು: ರಾಜನಾಥ್ ಸಿಂಗ್

ಹಿಂದೂ ನಂಬಿಕೆ ಒಡೆಯುತ್ತಿರುವ ಬಾನು ಮುಷ್ತಾಕ್: ಶಿವನ ಬೆಟ್ಟವನ್ನೇ 'ಯೇಸು ಬೆಟ್ಟ' ಮಾಡಲು ಹೊರಟವರಿಂದ ಧರ್ಮದ ಪಾಠ ಬೇಡ- ಪ್ರತಾಪ್ ಸಿಂಹ

2030 Commonwealth Games: ಭಾರತದ ಬಿಡ್‌ಗೆ ಕೇಂದ್ರ ಸಂಪುಟ ಅನುಮೋದನೆ! ಅಹಮದಾಬಾದ್ ನಲ್ಲಿ ಆಯೋಜಿಸುವ ಪ್ರಸ್ತಾಪ!

'ಡೆವಿಲ್‌' ಸಿನಿಮಾದ '‘ಇದ್ರೆ ನೆಮ್ಮದಿಯಾಗ್ ಇರ್ಬೇಕ್' ಹಾಡಿಗೆ ಭರ್ಜರಿ ಸ್ಟೆಪ್ ಹಾಕಿದ ವಿನೋದ್ ರಾಜ್! Video

SCROLL FOR NEXT