ವಿಪತ್ತು ನಿರ್ವಹಣೆ(ಸಾಂದರ್ಭಿಕ ಚಿತ್ರ ) 
ದೇಶ

ಭಾರತದ ವಿಪತ್ತು ನಿರ್ವಹಣಾ ಸಾಮರ್ಥ್ಯದ ಬಗ್ಗೆ ಅಮೇರಿಕಾ ಶ್ಲಾಘನೆ

ನೇಪಾಳದಲ್ಲಿ ಸಂಭವಿಸಿದ್ದ ಭೂಕಂಪಕ್ಕೆ ಭಾರತ ನೀಡಿದ್ದ ಗಮನಾರ್ಹ ನೆರವನ್ನು ಅಮೇರಿಕಾ ಶ್ಲಾಘಿಸಿದೆ.

ವಾಷಿಂಗ್ಟನ್: ನೇಪಾಳದಲ್ಲಿ ಸಂಭವಿಸಿದ್ದ ಭೂಕಂಪಕ್ಕೆ ಭಾರತ ನೀಡಿದ್ದ ಗಮನಾರ್ಹ ನೆರವನ್ನು ಶ್ಲಾಘಿಸಿರುವ ಅಮೇರಿಕಾ, ಭಾರತದ ವಿಪತ್ತು ನಿರ್ವಹಣಾ ಸಾಮರ್ಥ್ಯವನ್ನು ಅತ್ಯಾಧುನಿಕ ಮತ್ತು ಸುಧಾರಿತ ಎಂದು ಬಣ್ಣಿಸಿದೆ.

ನೇಪಾಳದ ಭೂಕಂಪದ ಸಂತ್ರಸ್ತರನ್ನು ರಕ್ಷಿಸಲು ಕೈಗೊಂಡ ರಕ್ಷಣಾ ಕಾರ್ಯಾಚರಣೆ, ಭಾರತ ವಿಪತ್ತು ನಿರ್ವಹಣೆಯಲ್ಲಿ ಅದ್ಭುತ ಸಾಮರ್ಥ್ಯ ಹೊಂದಿದ್ದು, ಸುಧಾರಿತವಾಗಿದೆ ಎಂಬುದು ಸ್ಪಷ್ಟಪಡಿಸಿದೆ ಎಂದು ಅಮೇರಿಕಾ ಕಾಂಗ್ರೆಸ್ ನ ಸಭೆಯಲ್ಲಿ ದಕ್ಷಿಣ ರಾಜ್ಯದ ಸಹಾಯಕ ಕಾರ್ಯದರ್ಶಿ ನಿಶಾ ದೇಸಾಯಿ ಬಿಸ್ವಾಲ್ ತಿಳಿಸಿದ್ದಾರೆ.

ವಿಪತ್ತು ನಿರ್ವಣೆಯಲ್ಲಿ ಭಾರತೀಯ ಸೇನೆ ಕೈಗೊಂಡ ಕಾರ್ಯಾಚರಣೆ  ಅಮೇರಿಕಾ ಹೆಮ್ಮೆಪಡುವಂತಹದ್ದು ಎಂದಿರುವ  ನಿಶಾ ದೇಸಾಯಿ, ವಿಪತ್ತು ನಿರ್ವಹಣೆಯಲ್ಲಿ ಜಾಗತಿಕ ಮಟ್ಟದಲ್ಲಿ ಸಹಕಾರ ಮತ್ತು ಪ್ರಾದೇಶಿಕ ಪ್ರತಿಸ್ಪಂದನೆಯನ್ನು ಮತ್ತಷ್ಟು ಉತ್ತಮಗೊಳಿಸಬೇಕಿದೆ ಎಂದು ಅಭಿಪ್ರಾಪಟ್ಟಿದ್ದಾರೆ.  

ಪ್ರಕೃತಿ ವಿಕೋಪ ಸಂಭವಿಸಿದರೆ, ತಮ್ಮ ಸ್ವಂತ ವಿಪತ್ತು ನಿರ್ವಹಣಾ ದಳವನ್ನು ಅವಲಂಬಿಸಿದಂತೆ ನೆರೆ ರಾಷ್ಟ್ರಗಳು ಭಾರತದ ನೆರವನ್ನು ಅವಲಂಬಿಸುತ್ತಾರೆ. ಭಾರತದ ವಿಪತ್ತು ನಿರ್ವಹಣೆ ಆ  ಸಾಮರ್ಥ್ಯವನ್ನು ಹೊಂದಿದೆ. ಇತ್ತೀಚೆಗಷ್ಟೇ ಒರಿಸ್ಸಾದಲ್ಲಿ ಉಂಟಾದ ಚಂಡಮಾರುತದಲ್ಲಿ, ವಿಪತ್ತು ನಿರ್ವಹಣಾ ದಳ ಯಶಸ್ವೀ ಕಾರ್ಯಾಚರಣೆ ನಡೆಸಿದ್ದರ ಪರಿಣಾಮ ಅತ್ಯಂತ ಕಡಿಮೆ ಪ್ರಾಣಹಾನಿ ಸಂಭವಿಸಿತ್ತು. ಇದೂ ಸಹ ಭಾರತದ ಸಾಮರ್ಥ್ಯಕ್ಕೆ ಮತ್ತೊಂದು  ಉದಾಹರಣೆ ಎಂದು ನಿಶಾ ದೇಸಾಯಿ ಅಮೆರಿಕಾದ ಕಾಂಗ್ರೆಸ್ ಸದಸ್ಯರಿಗೆ ತಿಳಿಸಿದ್ದಾರೆ.  ನೇಪಾಳದ ಭೂಕಂಪದ ರಕ್ಷಣಾ ಕಾರ್ಯಾಚರಣೆಗೆ  ಬಾಂಗ್ಲಾ ದೇಶ, ಶ್ರೀಲಂಕಾ, ಚೀನಾ, ಜಪಾನ್ ನೀಡಿದ ನೆರವನ್ನು ನಿಶಾ ದೇಸಾಯಿ ಶ್ಲಾಘಿಸಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

PSLV-C62 ಮಿಷನ್ ವಿಫಲ: ಕೊನೆಯ ಹಂತದಲ್ಲಿ ಎದುರಾದ ಸಮಸ್ಯೆ, ISROಗೆ ಹಿನ್ನಡೆ

ಇತಿಹಾಸ ಕಲಿಯಬೇಕಿದ್ದರೆ ಕಾಲೇಜಿಗೆ ಹೋಗುತ್ತಾರೆ, ನಿಮ್ಮ ಬೋಧನೆಯ ಅಗತ್ಯವಿಲ್ಲ: ಪ್ರಧಾನಿ ಮೋದಿ ವಿರುದ್ಧ ಪ್ರಿಯಾಂಕ್ ಖರ್ಗೆ ವಾಗ್ದಾಳಿ

MGNREGA Row: ಯಾವಾಗ-ಎಲ್ಲಿ ಬೇಕಾದರೂ ಚರ್ಚೆಗೆ ಸಿದ್ಧ, ಡೈಲಾಗ್‌ ವೀರ HDK ಬಂದರೆ ಒಳ್ಳೆಯದು; ಡಿ.ಕೆ.ಶಿವಕುಮಾರ್

Positive Vibes ಗಾಗಿ ಮನೆಯಲ್ಲಿ ಯಾವ ಗಿಡ ಬೆಳಸಬೇಕು: ಮುಳ್ಳಿನ ಗಿಡಗಳಲ್ಲಿದೆಯೇ ನಕರಾತ್ಮಕ ಶಕ್ತಿ; ಮಲ್ಲಿಗೆ ಮತ್ತು ತುಳಸಿಗೆ ಸೂಕ್ತ ಸ್ಥಳ ಯಾವುದು?

ಬೆಂಗಳೂರು: 6 ವರ್ಷದ ಬಾಲಕಿ ಅಪಹರಿಸಿ ಹತ್ಯೆ ; ಕೊಲೆಗೂ ಮುನ್ನ ಲೈಂಗಿಕ ದೌರ್ಜನ್ಯ - ಶವ ಪರೀಕ್ಷೆ ವೇಳೆ ಸತ್ಯ ಬಹಿರಂಗ!

SCROLL FOR NEXT