ಭೂಗತ ದೊರೆ ಚೋಟಾ ರಾಜನ್‍ (ಸಂಗ್ರಹ ಚಿತ್ರ) 
ದೇಶ

ಚೋಟಾ ರಾಜನ್ ಕರೆತರಲು ಪೊಲೀಸರ ತಂಡ ಇಂಡೋನೇಷ್ಯಾಕ್ಕೆ

ಭೂಗತ ದೊರೆ ಚೋಟಾ ರಾಜನ್‍ನನ್ನು ಕರೆತರಲು ಸಿಬಿಐ ಹಾಗೂ ಪೊಲೀಸ್ ಅಧಿಕಾರಿಗಳ ಜಂಟಿ ಪಡೆ ಭಾನುವಾರ ಇಂಡೋನೇಷ್ಯಾಗೆ ತಲುಪಿದೆ...

ನವದೆಹಲಿ/ಬಾಲಿ: ಭೂಗತ ದೊರೆ ಚೋಟಾ ರಾಜನ್‍ನನ್ನು ಕರೆತರಲು ಸಿಬಿಐ ಹಾಗೂ ಪೊಲೀಸ್ ಅಧಿಕಾರಿಗಳ ಜಂಟಿ ಪಡೆ ಭಾನುವಾರ ಇಂಡೋನೇಷ್ಯಾಗೆ ತಲುಪಿದೆ.

ಎರಡು ದಿನಗಳ ಹಿಂದೆ ಇಂಡೋನೇಷ್ಯಾದ ಅಧಿಕಾರಿಗಳಿಗೆ ಭಾರತ ಸರ್ಕಾರ ಪತ್ರ ಬರೆದು ರಾಜನ್ ನನ್ನು ಕಳಿಸಲು ಸೂಕ್ತ ವ್ಯವಸ್ಥೆ ಮಾಡುವಂತೆ ಕೋರಿತ್ತು. ಕಳೆದ ವಾರ ಬಾಲಿ ವಿಮಾನನಿಲ್ದಾಣದಲ್ಲಿ ಬಂಧಿಸಲಾಗಿದ್ದ ರಾಜನ್‍ನನ್ನು ಪ್ರಸ್ತುತ ಅಲ್ಲಿನ ಜೈಲೊಂದರಲ್ಲಿ ಇರಿಸಲಾಗಿದೆ.

ಜಕಾರ್ತಾದ ಭಾರತೀಯ ರಾಯಭಾರ ಕಚೇರಿ ಕಾರ್ಯದರ್ಶಿ ಸಂಜೀವ ಕುಮಾರ್ ಅಗರ್‍ವಾಲ್ ಅವರು ರಾಜನ್‍ನನ್ನು ಭೇಟಿ ಮಾಡಿ ಅರ್ಧ ಗಂಟೆ ಮಾತನಾಡಿದ್ದಾರೆ. ಇದೇ ಮೊದಲ ಬಾರಿಗೆ ಭಾರತೀಯ ಅಧಿಕಾರಿಯೊಬ್ಬರು ರಾಜನ್‍ನನ್ನು ಭೇಟಿ ಮಾಡಿದ್ದಾರೆ. ಇಂಡೋನೇಷ್ಯಾ ಜತೆ ಭಾರತಕ್ಕೆ ಯಾವುದೇ ಗಡೀಪಾರು ಒಪ್ಪಂದಗಳಿಲ್ಲದ ಕಾರಣ ಆತನ ಹಸ್ತಾಂತರಕ್ಕೆ ಸೂಕ್ತ ವ್ಯವಸ್ಥೆ ಮಾಡುವಂತೆ ಸರ್ಕಾರ ಕೋರಿತ್ತು. ಹಸ್ತಾಂತರ ಪ್ರಕ್ರಿಯೆ ಈಗಾಗಲೇ ಆರಂಭವಾಗಿದೆ. ಆದರೆ ಇದಕ್ಕೆ ಸಮಯದ ಮಿತಿ ಹೇರಿಲ್ಲವೆಂದು ಇಂಡೋನೇಷ್ಯಾದ ಭಾರತೀಯ ರಾಯಭಾರಿ ಗುರ್ಜಿತ್ ಸಿಂಗ್ ಹೇಳಿದ್ದಾರೆ. ರಾಜನ್ ಮೇಲಿನ ಹೆಚ್ಚಿನ ಪ್ರಕರಣಗಳು ಮುಂಬೈ ಪೊಲೀಸರಲ್ಲಿದ್ದು, ಅವರು ಆತನನ್ನು ಮೊದಲು ವಶಕ್ಕೆ ತೆಗೆದುಕೊಳ್ಳಲಿದ್ದಾರೆ

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ನಾವು ಏಕೆ ತಡೆಯಲಿ... ತಾಂತ್ರಿಕ ಸಮಸ್ಯೆ ಹೊರತು ಉದ್ದೇಶಪೂರ್ವಕವಲ್ಲ: ಮಹಿಳಾ ಪತ್ರಕರ್ತರನ್ನು ದೂರವಿಟ್ಟ ಬಗ್ಗೆ ಮುತ್ತಕಿ ಸ್ಪಷ್ಟನೆ

Afghan-Pak War: 'ಅಲ್ಲಾ ಕಾಪಾಡು' ಅಫ್ಘಾನ್ ಪ್ರತೀಕಾರದ ದಾಳಿ; ಆಗಸದೆತ್ತರಕ್ಕೆ ಚಿಮ್ಮಿದ ಪಾಕ್ ಸೈನಿಕರ ಶವಗಳು, ಗಡಿಯಿಂದ ಕಾಲ್ಕಿತ್ತ ಸೇನೆ, Video

ಯಾವುದೇ ಸಿದ್ಧಾಂತ ಅಥವಾ ಅಜೆಂಡಾವನ್ನು ಪ್ರಚಾರ ಮಾಡುತ್ತಿಲ್ಲ; 'ಕಾಂತಾರ: ಚಾಪ್ಟರ್ 1' ಕುರಿತು ರಿಷಬ್ ಶೆಟ್ಟಿ

'ಆಕೆ ಮಧ್ಯರಾತ್ರಿ 12.30ಕ್ಕೆ ಹೇಗೆ ಹೊರಬಂದಳು?': ಗ್ಯಾಂಗ್ ರೇಪ್ ಕುರಿತು ಮಮತಾ ಬ್ಯಾನರ್ಜಿ ಹೇಳಿಕೆ

ಹಾಸನಾಂಬ ದರ್ಶನಕ್ಕೆ ಭಕ್ತರ ಸಂಖ್ಯೆ ಹೆಚ್ಚಳ: ಎರಡೇ ದಿನಗಳಲ್ಲಿ ರೂ. 2.24 ಕೋಟಿ ಆದಾಯ, ಆರು ಸಿಬ್ಬಂದಿ ಅಮಾನತು!

SCROLL FOR NEXT