ಶಿವಸೇನಾ ಮುಖ್ಯಸ್ಥ ಉದ್ಧವ್ ಠಾಕ್ರೆ 
ದೇಶ

ಜನರನ್ನು ಒಂದು ಸಲ ಮಾತ್ರ ಮೂರ್ಖರನ್ನಾಗಿ ಮಾಡಬಹುದು: ಬಿಜೆಪಿಗೆ ಶಿವಸೇನೆ

ಬಿಹಾರ ವಿಧಾನಸಭೆ ಚುನಾವಣೆ ಫಲಿತಾಂಶಕ್ಕೆ ಸಂಬಂಧಿಸಿದಂತೆ ತನ್ನ ಮಿತ್ರ ಬಿಜೆಪಿಯನ್ನು ತರಾಟೆಗೆ ತೆಗೆದುಕೊಂಡಿರುವ ಶಿವ,ಸೇನೆ...

ಮುಂಬೈ: ಬಿಹಾರ ವಿಧಾನಸಭೆ ಚುನಾವಣೆ ಫಲಿತಾಂಶಕ್ಕೆ ಸಂಬಂಧಿಸಿದಂತೆ ತನ್ನ ಮಿತ್ರ ಬಿಜೆಪಿಯನ್ನು ತರಾಟೆಗೆ ತೆಗೆದುಕೊಂಡಿರುವ ಶಿವ,ಸೇನೆ, 'ನೀವು ಜನರನ್ನು ಒಂದು ಸಲ ಮಾತ್ರ ಮೂರ್ಖರನ್ನಾಗಿ ಮಾಡಬಹುದು, ಪದೇ ಪದೆ ಮಾಡಲಿಕ್ಕಾಗಲ್ಲ' ಎಂದು  ಕುಟುಕಿದೆ.

ಅಧಿಕಾರ ಮತ್ತು ಹಣ ಬಲದಿಂದ ಚುನಾವಣೆಯನ್ನು ಗೆಲ್ಲಲು ಸಾಧ್ಯವಿಲ್ಲ ಎಂದಿರುವ ಶಿವಸೇನೆ, ಬಿಹಾರ ಚುನಾವಣೆಯ ಪ್ರಚಾರದ ವೇಳೆ ರಾಜಕೀಯ ಶಕ್ತಿ ಮತ್ತು ಹಣಬಲದ ಅಪರಿಮಿತ ಬಳಕೆಯೊಂದಿಗೆ ಬಿಹಾರಕ್ಕೆ ಹಲವು ಕೋಟಿ ರುಪಾಯಿಗಳ ಪ್ಯಾಕೇಜ್‌ ಅನ್ನು ಕೇಂದ್ರ ಸರ್ಕಾರ ಘೋಷಿಸಿತ್ತು. ಆದರೂ ಬಿಜೆಪಿಗೆ 60 ಸ್ಥಾನಗಳನ್ನು ಕೂಡ ಗೆಲ್ಲಲಾಗಲಿಲ್ಲ ಮತ್ತು ಮಿತ್ರ ಪಕ್ಷಗಳು 20 ಅಡಿ ಆಳದಲ್ಲಿ ಸಮಾಧಿಯಾಗಿದ್ದಾರೆ' ಎಂದು ಸೇನೆ ತನ್ನ ಮುಖವಾಣಿ ಸಾಮ್ನಾದಲ್ಲಿ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದೆ.

ಬಿಹಾರ ಮುಖ್ಯಮಂತ್ರಿ ನಿತೀಶ್‌ ಕುಮಾರ್‌ ಅವರ ಅದ್ಭುತ ಗೆಲುವಿಗೆ ಅವರ ಕ್ಲೀನ್‌ ಇಮೇಜ್‌ ಕಾರಣ, ಪ್ರಾಮಾಣಿಕ ಪ್ರಚಾರಾಭಿಯಾನ ಹಾಗೂ ಅಭಿವೃದ್ಧಿಗೆ ನೀಡಿದ ಒತ್ತು ಮತ್ತೊಂದು ಪ್ರಮುಖ ಕಾರಣ. ಅವರ ಅಭಿಯಾನದಲ್ಲಿ ದ್ವೇಷದ ಕೋಮು ರಾಜಕಾರಣಕ್ಕೆ ಯಾವುದೇ ಅವಕಾಶವಿರಲಿಲ್ಲ ಎಂದು ಶಿವಸೇನೆ ಹೇಳಿದೆ.

ಪ್ರಚಾರಾಭಿಯಾನದ ಉದ್ದಕ್ಕೂ ನಿತೀಶ್‌ ಕುಮಾರ್‌ ಅವರು ತಮ್ಮ ಮತದಾರರಲ್ಲಿ ಯಾವ ಸುಳ್ಳನ್ನೂ ಹೇಳಲಿಲ್ಲ, ಢೋಂಗಿ ಭರವಸೆಗಳನ್ನು ನೀಡಲಿಲ್ಲ. ಹಣಶಕ್ತಿ, ಅಧಿಕಾರದ ಶಕ್ತಿಯನ್ನು ತೋರ್ಪಡಿಸಲಿಲ್ಲ. ಕಾನೂನಿನ ಆಡಳಿವೇ ಪರಮೋಚ್ಚವೆಂದು ಪ್ರತಿಪಾದಿಸುತ್ತಾ ಬಂದರು. ಪ್ರಚಾರಾಭಿಯಾನದ್ದುದ್ದಕ್ಕೂ ಅವರು ತಮ್ಮನ್ನು ಜನರಿಗೆ ಸರಳವಾಗಿಯೇ ಕಾಣಿಸಿದರು ಎಂದು ಸೇನೆ ಹೇಳಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

'ಇಸ್ರೇಲ್‌ ಜೊತೆ ನಮ್ಮ ಸಂಬಂಧ 'ರಕ್ತ ಮತ್ತು ತ್ಯಾಗ'ದಲ್ಲಿ ಬರೆಯಲ್ಪಟ್ಟಿದೆ, ನಾನು ಹುಟ್ಟಿದ ವರ್ಷ ಭಾರತ ಇಸ್ರೇಲ್ ಗೆ ಮಾನ್ಯತೆ ನೀಡಿತು': ಪ್ರಧಾನಿ ಮೋದಿ-Video

ಹಗರಣ ರಹಿತ ಹುದ್ದೆ ಭರ್ತಿಗೆ ಕ್ರಮ: ಯುವಕರು ಧೈರ್ಯವಾಗಿರಿ, ನಿಮ್ಮ ಸಮಸ್ಯೆ ಬಗೆಹರಿಸುತ್ತೇವೆ, ಸದ್ಯದಲ್ಲೇ ಸಂದೇಶ ನೀಡುತ್ತೇವೆ; ಡಿ ಕೆ ಶಿವಕುಮಾರ್

ದಲಿತಾಸ್ತ್ರದ ಮೂಲಕ ಕಟ್ಟಿಹಾಕಲು ಸಿದ್ದು ಬಣ ಕಸರತ್ತು: ತೆರಮರೆಯಲ್ಲಿ ಡಿಕೆಶಿ ಬೆಂಬಲಿಗರ ಮಸಲತ್ತು; ಅಂತರ್ಯುದ್ಧದಲ್ಲಿ ಯಾರಿಗಿದೆ ಗೆಲ್ಲುವ ತಾಕತ್ತು?

Gold Rate Today: ಬೆಂಗಳೂರಿನಲ್ಲಿ ಇಂದಿನ ಚಿನ್ನ, ಬೆಳ್ಳಿ ದರ ಎಷ್ಟಿದೆ? ಇಲ್ಲಿದೆ ವಿವರ...

ಆರೋಗ್ಯ ಇಲಾಖೆಯಿಂದ ಉರ್ದು ಭಾಷೆ ಆಹ್ವಾನ ಪತ್ರಿಕೆ: ಜನರನ್ನು ದಾರಿ ತಪ್ಪಿಸಲೇಬೇಕು ಎಂಬ ಹಠಕ್ಕೆ ಬಿದ್ದಿದ್ದೀರಾ?

SCROLL FOR NEXT