ಪ್ರಣಯ್ ರಾಯ್ 
ದೇಶ

ಪ್ರಣಯ್ ರಾಯ್ ಕ್ಷಮೆಯಾಚನೆ

ಹಿರಿಯ ಪತ್ರಕರ್ತ ಮತ್ತು ಎನ್‍ಡಿಟಿವಿ ವಾರ್ತಾವಾಹಿನಿಯ ಸಹಸಂಸ್ಥಾಪಕ ಪ್ರಣಯ್ ರಾಯ್ ತಮ್ಮ ವಾಹಿ ನಿಯ ವೀಕ್ಷಕರಲ್ಲಿ ಕ್ಷಮೆಯಾಚಿಸಿದ್ದಾರೆ...

ನವದೆಹಲಿ: ಹಿರಿಯ ಪತ್ರಕರ್ತ ಮತ್ತು ಎನ್‍ಡಿಟಿವಿ ವಾರ್ತಾವಾಹಿನಿಯ ಸಹಸಂಸ್ಥಾಪಕ  ಪ್ರಣಯ್ ರಾಯ್ ತಮ್ಮ ವಾಹಿ ನಿಯ ವೀಕ್ಷಕರಲ್ಲಿ ಕ್ಷಮೆಯಾಚಿಸಿದ್ದಾರೆ.  ಬಿಹಾರ ಚುನಾವಣೆಯ ಫಲಿತಾಂಶದ ಸುದ್ದಿ ಪ್ರಸಾರದಲ್ಲಿ ದಿನದ ಮೊದಲ ಕೆಲವು  ಗಂಟೆಗಳಲ್ಲಿ ನೀಡಿದ ತಪ್ಪು ಮಾಹಿತಿ ಹಾಗೂ ಗೊಂದಲ ಮೂಡಿಸಿದ ಬಗ್ಗೆ ಅವರು ವಿಷಾದ ವ್ಯಕ್ತಪಡಿಸಿದ್ದಾರೆ. ಎಲೆಕ್ಷನ್ ಏಜೆನ್ಸಿ ನೀಡಿದ ತಪ್ಪುಮಾಹಿತಿಯಿಂದಾಗಿ ಕೆಲವು ಗಂಟೆಗಳ ಕಾಲ ಬಲಾಬಲದ ಮಾಹಿತಿ ತಪ್ಪಾಗಿ ನೀಡುವಂತಾಯಿತು ಎಂದಿರುವ ಪ್ರಣಯ್ ರಾಯ್  ಇದಕ್ಕೆ ವಿವರಣೆಯನ್ನು
ಏಜೆನ್ಸಿಯಿಂದ ತಾವು ಕೇಳಿರುವುದಾಗಿಯೂ ತಿಳಿಸಿದ್ದಾರೆ. ಇದಕ್ಕೂ ಮುನ್ನ, ಚುನಾವಣಾಪೂರ್ವ ಸಮೀಕ್ಷೆಯಲ್ಲಿಯೂ ತಮ್ಮಿಂದ ಬಿತ್ತರವಾದ ವರದಿ ಕಳೆದ ಮೂವತ್ತು ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ತಪ್ಪಾಗಿದ್ದಕ್ಕೆ ಅವರು ಕ್ಷಮೆ ಕೋರಿದರು. ಈ ವರ್ಷ ವಿಶ್ವದ ಹಲವೆಡೆ ಚುನಾವಣಾಪೂರ್ವ ಸಮೀಕ್ಷೆಗಳು ತಲೆಕೆಳಕಾಗಿದ್ದು, ತಮ್ಮಿಂದಲೂ ಅದೇ ರೀತಿಯ ಪ್ರಮಾದವಾಗಿದೆ ಎಂದು ಹೇಳಿಕೊಂಡಿದ್ದು, ತಪ್ಪಿನ ಸಂಪೂರ್ಣ ಜವಾಬ್ದಾರಿ ಹೊರುವುದಾಗಿ ಹೇಳಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಅಮೆರಿಕ ನಿಯೋಜಿತ ರಾಯಭಾರಿ ಸೆರ್ಗಿಯೊ ಗೋರ್- ಮೋದಿ, ಜೈಶಂಕರ್ ಭೇಟಿ; Tariff ಒತ್ತಡದ ನಡುವೆ ಭಾರತ-ಅಮೆರಿಕ ಸಂಬಂಧ ಸುಧಾರಣೆಯ ಸೂಚನೆ?

ಅಫ್ಘಾನಿಸ್ತಾನ ನಮ್ಮೊಂದಿಗೆ ಗಡಿ ಹಂಚಿಕೊಂಡಿರುವ ನೆರೆ ರಾಷ್ಟ್ರ- S Jaishankar; ಭಾರತದೊಂದಿಗೆ POK ವಿಲೀನದ ಸುಳಿವು; ಚೀನಾಗೂ ಶಾಕ್!

ಅಬ್ಬಬ್ಬಾ ರೋಮಾಂಚನ: ಅದ್ಭುತ ಸೃಷ್ಟಿಸಿದ ರಿಷಬ್ ಶೆಟ್ಟಿಗೆ ರಾಷ್ಟ್ರಪ್ರಶಸ್ತಿ ಕೊಡಲೇಬೇಕು - ತಮಿಳು ನಿರ್ದೇಶಕ ಅಟ್ಲೀ

Pakistan: ಇಸ್ರೇಲ್ ವಿರೋಧಿ ಪ್ರತಿಭಟನಾ ಜಾಥಾ, ಪೋಲೀಸರ ಗುಂಡೇಟಿಗೆ 11 ಮಂದಿ ಬಲಿ! Video

ಉತ್ತರ ಪ್ರದೇಶಕ್ಕೆ ಭೇಟಿ ನೀಡಿದ ತಾಲಿಬಾನ್ ಸಚಿವನಿಗೆ ಅದ್ಧೂರಿ ಸ್ವಾಗತ, ಸರ್ಕಾರದ ಭದ್ರತೆ; ಯೋಗಿಗೆ ನಾಚಿಕೆಯಾಗಬೇಕು- SP ಸಂಸದ ಶಫೀಕರ್

SCROLL FOR NEXT