ದೇಶ

ಪ್ರಣಯ್ ರಾಯ್ ಕ್ಷಮೆಯಾಚನೆ

Rashmi Kasaragodu
ನವದೆಹಲಿ: ಹಿರಿಯ ಪತ್ರಕರ್ತ ಮತ್ತು ಎನ್‍ಡಿಟಿವಿ ವಾರ್ತಾವಾಹಿನಿಯ ಸಹಸಂಸ್ಥಾಪಕ  ಪ್ರಣಯ್ ರಾಯ್ ತಮ್ಮ ವಾಹಿ ನಿಯ ವೀಕ್ಷಕರಲ್ಲಿ ಕ್ಷಮೆಯಾಚಿಸಿದ್ದಾರೆ.  ಬಿಹಾರ ಚುನಾವಣೆಯ ಫಲಿತಾಂಶದ ಸುದ್ದಿ ಪ್ರಸಾರದಲ್ಲಿ ದಿನದ ಮೊದಲ ಕೆಲವು  ಗಂಟೆಗಳಲ್ಲಿ ನೀಡಿದ ತಪ್ಪು ಮಾಹಿತಿ ಹಾಗೂ ಗೊಂದಲ ಮೂಡಿಸಿದ ಬಗ್ಗೆ ಅವರು ವಿಷಾದ ವ್ಯಕ್ತಪಡಿಸಿದ್ದಾರೆ. ಎಲೆಕ್ಷನ್ ಏಜೆನ್ಸಿ ನೀಡಿದ ತಪ್ಪುಮಾಹಿತಿಯಿಂದಾಗಿ ಕೆಲವು ಗಂಟೆಗಳ ಕಾಲ ಬಲಾಬಲದ ಮಾಹಿತಿ ತಪ್ಪಾಗಿ ನೀಡುವಂತಾಯಿತು ಎಂದಿರುವ ಪ್ರಣಯ್ ರಾಯ್  ಇದಕ್ಕೆ ವಿವರಣೆಯನ್ನು
ಏಜೆನ್ಸಿಯಿಂದ ತಾವು ಕೇಳಿರುವುದಾಗಿಯೂ ತಿಳಿಸಿದ್ದಾರೆ. ಇದಕ್ಕೂ ಮುನ್ನ, ಚುನಾವಣಾಪೂರ್ವ ಸಮೀಕ್ಷೆಯಲ್ಲಿಯೂ ತಮ್ಮಿಂದ ಬಿತ್ತರವಾದ ವರದಿ ಕಳೆದ ಮೂವತ್ತು ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ತಪ್ಪಾಗಿದ್ದಕ್ಕೆ ಅವರು ಕ್ಷಮೆ ಕೋರಿದರು. ಈ ವರ್ಷ ವಿಶ್ವದ ಹಲವೆಡೆ ಚುನಾವಣಾಪೂರ್ವ ಸಮೀಕ್ಷೆಗಳು ತಲೆಕೆಳಕಾಗಿದ್ದು, ತಮ್ಮಿಂದಲೂ ಅದೇ ರೀತಿಯ ಪ್ರಮಾದವಾಗಿದೆ ಎಂದು ಹೇಳಿಕೊಂಡಿದ್ದು, ತಪ್ಪಿನ ಸಂಪೂರ್ಣ ಜವಾಬ್ದಾರಿ ಹೊರುವುದಾಗಿ ಹೇಳಿದ್ದಾರೆ.
SCROLL FOR NEXT