ಪ್ರಣಬ್ ಮುಖರ್ಜಿ 
ದೇಶ

ಪ್ರಶಸ್ತಿ ವಾಪಸ್ ವಿಚಾರ: ಭಾವನೆಗಳ ಬೆನ್ನತ್ತಿ ಹೋಗಬಾರದು, ಪ್ರಣಬ್ ಮುಖರ್ಜಿ

ಲೇಖಕರು ಹಾಗೂ ಬರಹಗಾರರು ಚರ್ಚೆ ಮೂಲಕ ತಮ್ಮ ವಿರೋಧವನ್ನು ವ್ಯಕ್ತಪಡಿಸಬೇಕು. ಅದು ಬಿಟ್ಟು, ಭಾವನೆಗಳ ಬೆನ್ನತ್ತಿ ಹೋಗಬಾರದು,' ಎಂದು ರಾಷ್ಟ್ರಪತಿ ...

ನವದೆಹಲಿ: ಲೇಖಕರು ಹಾಗೂ ಬರಹಗಾರರು ಚರ್ಚೆ ಮೂಲಕ ತಮ್ಮ ವಿರೋಧವನ್ನು ವ್ಯಕ್ತಪಡಿಸಬೇಕು. ಅದು ಬಿಟ್ಟು, ಭಾವನೆಗಳ ಬೆನ್ನತ್ತಿ ಹೋಗಬಾರದು,' ಎಂದು ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಹೇಳಿದ್ದಾರೆ.

ಭಾರತೀಯ ಮಾಧ್ಯಮ ಮಂಡಳಿ ಆಯೋಜಿಸಿದ್ದ ರಾಷ್ಟ್ರೀಯ ಮಾಧ್ಯಮ ದಿನವನ್ನು ಉದ್ಘಾಟಿಸಿ, ಮಾತನಾಡಿದ ಅವರು ದೇಶದಲ್ಲಿ ಅಸಹಿಷ್ಣುತೆ ಹೆಚ್ಚಾಗುತ್ತಿದೆ ಎಂದು ಆರೋಪಿಸಿ ಪ್ರಶಸ್ತಿ ಹಿಂದಿರುಗಿಸುತ್ತಿರುವುದು ಸರಿಯಲ್ಲ ಎಂದು ಅಭಿಪ್ರಾಯ ಪಟ್ಟರು.

ಸಮಾಜದಲ್ಲಿ ಸಂಭವಿಸುವ ಘಟನೆಗಳಿಂದ ಕೆಲವು ಸೂಕ್ಷ್ಮ ಮನಸ್ಸುಗಳಿಗೆ ನೋವಾಗುವುದು ಸಹಜ. ಅಂಥ ಘಟನೆಗಳ ಮೇಲೆ ಸಹಾನುಭೂತಿ ತೋರಿ, ವಿವೇಕದಿಂದ ವರ್ತಿಸಬೇಕು. ಭಾವನೆಗಳದ್ದೇ ಮೇಲಾಟವಾಗದಂತೆ ಎಚ್ಚರವಹಿಸಬೇಕು,' ಎಂದು ಸಲಹೆ ನೀಡಿದ್ದಾರೆ.

'ಭಾರತೀಯರಾಗಿ ನಮ್ಮ ಸಂವಿಧಾನದಲ್ಲಿ ಉಲ್ಲೇಖಿಸಿರುವ ಮೌಲ್ಯಗಳು ಹಾಗೂ ಆದರ್ಶಗಳಿಗೆ ನಾವು ಹೆಮ್ಮೆ ಪಡಬೇಕು. ಅಂಥ ಅಹಿತಕರ ಘಟನೆಗಳು ನಡೆದಾಗ ತಿದ್ದಿಕೊಳ್ಳಲು ಸಂವಿಧಾನದಲ್ಲಿ ಅವಕಾಶವಿದೆ ಎಂದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

'ಆ ದೇಶಕ್ಕೂ ನಾನೇ 'ಹಂಗಾಮಿ' ಸರ್ವೋಚ್ಛ ನಾಯಕ': Donald Trump ಘೋಷಣೆ, ಬೆಚ್ಚಿಬಿದ್ದ ವೆನೆಜುವೆಲಾ!

PSLV-C62 ಮಿಷನ್ ವಿಫಲ: ಕೊನೆಯ ಹಂತದಲ್ಲಿ ಎದುರಾದ ಸಮಸ್ಯೆ, ISROಗೆ ಹಿನ್ನಡೆ

ಇತಿಹಾಸ ಕಲಿಯಬೇಕಿದ್ದರೆ ಕಾಲೇಜಿಗೆ ಹೋಗುತ್ತಾರೆ, ನಿಮ್ಮ ಬೋಧನೆಯ ಅಗತ್ಯವಿಲ್ಲ: ಪ್ರಧಾನಿ ಮೋದಿ ವಿರುದ್ಧ ಪ್ರಿಯಾಂಕ್ ಖರ್ಗೆ ವಾಗ್ದಾಳಿ

MGNREGA Row: ಯಾವಾಗ-ಎಲ್ಲಿ ಬೇಕಾದರೂ ಚರ್ಚೆಗೆ ಸಿದ್ಧ, ಡೈಲಾಗ್‌ ವೀರ HDK ಬಂದರೆ ಒಳ್ಳೆಯದು; ಡಿ.ಕೆ.ಶಿವಕುಮಾರ್

Positive Vibes ಗಾಗಿ ಮನೆಯಲ್ಲಿ ಯಾವ ಗಿಡ ಬೆಳಸಬೇಕು: ಮುಳ್ಳಿನ ಗಿಡಗಳಲ್ಲಿದೆಯೇ ನಕರಾತ್ಮಕ ಶಕ್ತಿ; ಮಲ್ಲಿಗೆ ಮತ್ತು ತುಳಸಿಗೆ ಸೂಕ್ತ ಸ್ಥಳ ಯಾವುದು?

SCROLL FOR NEXT