ಸುಪ್ರೀಂ ಕೋರ್ಟ್ (ಸಂಗ್ರಹ ಚಿತ್ರ) 
ದೇಶ

ಹಕ್ಕಿಗಳಿಗೆ ಹಾರುವ ಹಕ್ಕು ಇದೆಯೇ?

ಹಕ್ಕಿಗಳಿಗೂ ಮೂಲಭೂತ ಹಕ್ಕು ಇದೆಯೇ? ಹೌದು ಹೀಗೆ ಪ್ರಶ್ನಿಸಿ, ಸುಪ್ರೀಂ ಕೋರ್ಟ್‍ನಲ್ಲಿ ಸಲ್ಲಿಕೆಯಾಗಿರುವ ಅರ್ಜಿ ಶೀಘ್ರದಲ್ಲೇ ವಿಚಾರಣೆಗೆ ಬರಲಿದೆ...

ನವದೆಹಲಿ: ಹಕ್ಕಿಗಳಿಗೂ ಮೂಲಭೂತ ಹಕ್ಕು ಇದೆಯೇ? ಹೌದು ಹೀಗೆ ಪ್ರಶ್ನಿಸಿ, ಸುಪ್ರೀಂ ಕೋರ್ಟ್‍ನಲ್ಲಿ ಸಲ್ಲಿಕೆಯಾಗಿರುವ ಅರ್ಜಿ ಶೀಘ್ರದಲ್ಲೇ ವಿಚಾರಣೆಗೆ ಬರಲಿದೆ.

``ಹಕ್ಕಿಗಳನ್ನು ಪಂಜರದಲ್ಲಿಡುವುದರಿಂದ ಹಾರಾಡುವ ಅವುಗಳ ಸ್ವಾತಂತ್ರ್ಯವನ್ನು ಉಲ್ಲಂಘಿಸಿಂದತಾಗುತ್ತದೆಯೇ,'' ಎಂದು ಪ್ರಶ್ನಿಸಿ ಸಲ್ಲಿಸಲಾಗಿದ್ದ ಅರ್ಜಿಯೊಂದನ್ನು ಸುಪ್ರೀಂ ಕೋರ್ಟ್ ವಿಚಾರಣೆಗಾಗಿ ಕೈಗೆತ್ತಿಕೊಂಡಿದೆ ಎಂದು ಶನಿವಾರ `ದ ಟೈಮ್ಸ್ ಆಫ್ಇಂಡಿಯಾ' ವರದಿ ಮಾಡಿದೆ.

``ಹಕ್ಕಿಗಳಿಗೂ ಮುಕ್ತವಾಗಿ ಆಕಾಶದಲ್ಲಿ ಹಾರಾಡುವ ಮೂಲಭೂತ ಹಕ್ಕಿದೆ. ಹಕ್ಕಿಗಳ ನ್ನು ಪಂಜರದಿಂದ ಕೂಡಿಹಾಕದೆ ಅವುಗಳ ಸ್ವಾತಂತ್ರ್ಯವನ್ನು ಗೌರವಿಸಬೇಕು,'' ಎಂದು ಗುಜರಾತ್ ಹೈಕೋರ್ಟ್ ಪ್ರಕರಣವೊಂದರಲ್ಲಿ ನೀಡಿದ್ದ ತೀರ್ಪನ್ನು ಪ್ರಶ್ನಿಸಿ ಈ ಅರ್ಜಿ ಸಲ್ಲಿಸಲಾಗಿದೆ. ಮುಖ್ಯ ನ್ಯಾಯಮೂತಿರ್  ಎಚ್.ಎಲ್. ದತ್ತು, ನ್ಯಾ. ಶಿವಕೀರ್ತಿ ಸಿಂಗ್ ಮತ್ತು ನ್ಯಾ.ಅಮಿತಾವಾರಾಯ್ ಅವರಿದ್ದ ಪೀಠ ವಿಚಾರಣೆಗೆ ಒಪ್ಪಿಗೆ ಸೂಚಿಸಿದೆ. ಬೀದಿ ವ್ಯಾಪಾರಿಗಳು 494 ಹಕ್ಕಿಗಳನ್ನು ಪಂಜರದಲ್ಲಿ ಕೂಡಿಹಾಕಿದ್ದ ಪ್ರಕರಣಕ್ಕೆ ಸಂಬಂಧಿಸಿ ಹೈಕೋರ್ಟ್ ಈ ತೀರ್ಪು ನೀಡಿತ್ತು. ಬಹುತೇಕ ಪ್ರಕರಣಗಳಲ್ಲಿ ಹಕ್ಕಿಗಳ ರೆಕ್ಕೆ ಮತ್ತು ಬಾಲಗಳನ್ನು ಕತ್ತರಿಸಲಾಗುತ್ತಿತ್ತು.

ಕೆಲವು ಪ್ರಕರಣಗಳಲ್ಲಂತೂ ಅವುಗಳು ಹಾರದಂತೆ ರೆಕ್ಕೆಗೆ ಗೋಂದು ಹಾಕಿ ಅಂಟಿಸಲಾಗುತ್ತಿತ್ತು. ಕಾಲಿಗೆ ಭಾರವಾದ ರಿಂಗ್‍ಗಳನ್ನೂ ಹಾಕಲಾಗಿತ್ತು. ಇದು ಬಹುತೇಕ ಹಕ್ಕಿ ಬಜಾರ್‍ಗಳಲ್ಲಿ ಮಾಮೂಲಿ. ಈ ಹಿನ್ನೆಲೆಯಲ್ಲಿ ಗುಜರಾತ್ ಹೈಕೋರ್ಟ್ ``ಹಕ್ಕಿಗಳನ್ನು ಈ ರೀತಿ ಬಂಧಿಸಿಡುವುದು ಅಪರಾಧ. ಅವುಗಳಿಗೂ ನೈಸರ್ಗಿಕ ವಾತಾವರಣದಲ್ಲಿ ಮುಕ್ತ ಆಕಾಶದಲ್ಲಿ ಹಾರಾಡುವ ಸ್ವಾತಂತ್ರ್ಯವಿದೆ. ಈ ಹಕ್ಕಿಗಳಿಗೆ ಯಾವುದೇ ನೋವಾಗದಂತೆ ನೋಡಿಕೊಳ್ಳುವುದು ಎಲ್ಲ ನಾಗರಿಕರ ಕರ್ತವ್ಯ,'' ಎಂದು ಅಭಿಪ್ರಾಯಪಟ್ಟಿತ್ತು.

ಹೈಕೋರ್ಟ್‍ನ ಈ ತೀರ್ಪನ್ನು ಪ್ರಶ್ನಿಸಿ ಪ್ರಾಣಿ ಪ್ರೇಮಿ ಸಂಘವೊಂದು ಸುಪ್ರೀಂಕೋರ್ಟ್ ಮೆಟ್ಟಿಲೇರಿದೆ. ಗುಜರಾತ್ ಹೈಕೋರ್ಟ್‍ನ ತೀರ್ಪನ್ನು ಪ್ರಶ್ನಿಸಿರುವ ಈ ಸಂಘ, ``ಪ್ರಾಣಿಗಳ ಕಾಯ್ದೆ ಹಾಗೂ ಅರಣ್ಯಜೀವಿ ಸಂರಕ್ಷಣಾ ಕಾಯ್ದೆ ಪ್ರಕಾರ ಪ್ರಾಣಿಗಳ ಮೇಲಿನ ಹಿಂಸೆ ತಡೆ ನಿಬಂಧನೆಗೆ ವಿರುದ್ಧವಾಗಿದೆ,'' ಎಂದು ವಾದಿಸಿದೆ. ಹಕ್ಕಿಗಳನ್ನು ಪಂಜದಲ್ಲಿಡುವುದು ಮತ್ತು ಪ್ರಾಣಿಗಳ ವ್ಯಾಪಾರವನ್ನು ನಿಷೇಧಿಸಬಾರದು ಎಂದು ಒತ್ತಾಯಿಸಿದೆ. ಗುಜರಾತ್ ಕೋಟ್ರ್ ನ ಈ ತೀರ್ಪಿನಿಂದಾಗಿ ವ್ಯಾಪಾರಿಗಳಿಗೆ ವಿನಾ ಕಾರಣ ಕಿರುಕುಳ ಆಗುತ್ತಿದೆ ಎಂದು ಎನ್ ಜಿಒ ಆರೋಪಿಸಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ನೇಪಾಳದಲ್ಲಿ ಭೀಕರ ಪ್ರವಾಹ; ಮೃತರ ಸಂಖ್ಯೆ 903ಕ್ಕೆ ಏರಿಕೆ, ವಿದೇಶಿಯರು ಸೇರಿ 4,000ಕ್ಕೂ ಹೆಚ್ಚು ಮಂದಿ ಇನ್ನೂ ನಾಪತ್ತೆ!

ನೆರೆ ಸಂತ್ರಸ್ತರಿಗೆ ನೆರವು ಹೊತ್ತು ಹೋದವರಿಗೆ ಶಾಕ್: 'ಇಲ್ಲೇ ಖರೀದಿಸಿ' ಎಂದ ನೇಪಾಳ ಅಧಿಕಾರಿಗಳು! ಆಗಿದ್ದೇನು?

ಬಾಕ್ಸ್ ಆಫೀಸ್ ನಲ್ಲಿ ಮುಗ್ಗರಿಸಿದ 'Batwara 1947': ಸನ್ನಿ ಡಿಯೋಲ್ ಮುಸ್ಲಿಂ ಪಾತ್ರ ಜನರಿಗೆ ಇಷ್ಟವಾಗಲಿಲ್ಲವೇ! ಶಬಾನಾ ಆಜ್ಮಿ ಹೇಳಿದ್ದೇನು?

Hit And Run: ಪಾದಚಾರಿಗೂ ಜೀವಂತವಾಗಿ ರಸ್ತೆ ದಾಟುವ ಹಕ್ಕಿದೆ: ದೆಹಲಿ ಕೋರ್ಟ್

ರಾಹುಲ್ ಗಾಂಧಿಯನ್ನು ಪ್ರಧಾನಿ ಅಭ್ಯರ್ಥಿಯಾಗಿ ಒಪ್ಪದಿದ್ದರೆ TVK ಸಂಪುಟದಿಂದ ಕಾಂಗ್ರೆಸ್ ಹೊರಬರಲಿದೆ: ಸಚಿವ