ರಾಜನಾಥ್ ಸಿಂಗ್ 
ದೇಶ

ದಾದ್ರಿ ಹತ್ಯೆಗೂ, ಗೋಮಾಂಸಕ್ಕೂ ಸಂಬಂಧವಿಲ್ಲ: ರಾಜನಾಥ್‌ ಸಿಂಗ್

ದಾದ್ರಿ ಹತ್ಯೆಗೆ ಯಾವುದೇ ರೀತಿಯ ಕೋಮು ಸಂಬಂಧವಾಗಲೀ ಗೋಮಾಂಸ ಸಂಬಂಧವಾಗಲೀ ಇಲ್ಲ ಎಂದು ಉತ್ತರ ಪ್ರದೇಶ ಸರ್ಕಾರದ ವರದಿಯಿಂದ ಸ್ಪಷ್ಟವಾಗಿದೆ ...

ನವದೆಹಲಿ:  ದಾದ್ರಿ ಹತ್ಯೆಗೆ ಯಾವುದೇ ರೀತಿಯ ಕೋಮು ಸಂಬಂಧವಾಗಲೀ ಗೋಮಾಂಸ ಸಂಬಂಧವಾಗಲೀ ಇಲ್ಲ ಎಂದು ಉತ್ತರ ಪ್ರದೇಶ ಸರ್ಕಾರದ ವರದಿಯಿಂದ ಸ್ಪಷ್ಟವಾಗಿದೆ ಎಂದು ಕೇಂದ್ರ ಗೃಹ ಸಚಿವ ರಾಜನಾಥ್‌ ಸಿಂಗ್‌ ಹೇಳಿದ್ದಾರೆ.

ಲೋಕಸಭೆಯಲ್ಲಿ ಪ್ರಶ್ನೆಯೊಂದಕ್ಕೆ ಉತ್ತರಿಸಿದ ಅವರು, ದಾದ್ರಿಯ ಬಿಶಾಡಾ ಗ್ರಾಮದಲ್ಲಿ ಮನೆಯೊಂದರಲ್ಲಿ ಗೋಮಾಂಸ ತಿಂದಿದ್ದಾರೆ ಮತ್ತು ಗೋಮಾಂಸವನ್ನು ಶೇಖರಿಸಿಟ್ಟುಕೊಂಡಿದ್ದಾರೆ ಎಂಬ ವದಂತಿಯಿಂದ ಕೋಪೋದ್ರಿಕ್ತವಾಗಿದ್ದ ಜನ ಸಮೂಹವೊಂದು ವಿವೇಚನೆಯನ್ನು ಕಳೆದುಕೊಂಡು ಮನೆಯ ಯಜಮಾನ ಮೊಹಮ್ಮದ್‌ ಇಖಲಾಕ್‌ ಎಂಬವರನ್ನು ಹೊಡೆದು ಸಾಯಿಸಿತ್ತು. ಮಾತ್ರವಲ್ಲದೆ ಆತನ ಪುತ್ರನ ಮೇಲೂ ಹಲ್ಲೆ ಮಾಡಿತ್ತು, ಇದರಿಂದ ದೇಶಾದ್ಯಂತ ಪರಿಸ್ಥಿತಿ ಉದ್ವಿಗ್ನಗೊಂಡಿತ್ತು.

ಇದೀಗ ಉತ್ತರ ಪ್ರದೇಶ ಸರಕಾರವು ದಾದ್ರಿ ಘಟನೆಯ ಆಮೂಲಾಗ್ರ ತನಿಖೆ ನಡೆಸಿ ಈ ಘಟನೆಗೆ ಕೋಮು ಸಂಬಂಧವಾಗಲೀ ಗೋಮಾಂಸ ಸಂಬಂಧವಾಗಲೀ ಇಲ್ಲವೆಂದು ಖಾತರಿಪಡಿಸುವ ವರದಿಯನ್ನು ಕೇಂದ್ರಕ್ಕೆ ಸಲ್ಲಿಸಿದೆ. ಈ ವಿಷಯವನ್ನು ಇಂದು ರಾಜನಾಥ್‌ ಸಿಂಗ್‌ ಲೋಕಸಭೆಯಲ್ಲಿ ಹೇಳಿದರು.

ಇದರಿಂದ ಕೆರಳಿದ ವಿಪಕ್ಷಗಳ ಸುಗಮ ಕಲಾಪ ನಡೆಯಲು ಬಿಡಲಿಲ್ಲ ಹೀಗಾಗಿ ಲೋಕಸಭೆ ಸ್ಪೀಕರ್‌ ಸುಮಿತ್ರಾ ಮಹಾಜನ್  ಕಲಾಪವನ್ನು ಬುಧವಾರಕ್ಕೆ ಮುಂದೂಡಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಜಮ್ಮುವಿನಾದ್ಯಂತ ಭಾರಿ ಮಳೆ: ಅಪಾರ ಪ್ರಮಾಣದ ಹಾನಿ, 10 ಮಂದಿ ಸಾವು: ಕೊಚ್ಚಿ ಹೋದ ರಸ್ತೆ, ಸೇತುವೆಗಳು!

ಫೈಟರ್ ಜೆಟ್‌ ಇಂಜಿನ್ ಖರೀದಿ: ಅಮೆರಿಕಾದ GE ಸಂಸ್ಥೆಯೊಂದಿಗೆ $1 ಬಿಲಿಯನ್ ಮೊತ್ತದ ಒಪ್ಪಂದಕ್ಕೆ ಭಾರತ ಸಿದ್ಧತೆ!

ಡಿಕೆಶಿ ಕ್ಷಮೆ ಕೇಳಬಾರದಿತ್ತು; ಮುಲಾಜಿಲ್ಲದೆ ಕಾಂಗ್ರೆಸ್ ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ಬಿಸಾಕಬೇಕಿತ್ತು- ಆರ್. ಅಶೋಕ್

ಸುಂಕ ಸಮರ: Trump 4 ಬಾರಿ ಕರೆ ಮಾಡಿದರೂ ಉತ್ತರಿಸದ PM Modi; ಅಮೆರಿಕ ನಿಯೋಗಕ್ಕೂ No Entry!

SCROLL FOR NEXT