ಪ್ರಣಬ್ ಮುಖರ್ಜಿ 
ದೇಶ

ಒಡಕುಂಟುಮಾಡುವ ಚಿಂತನೆಗಳನ್ನು ತೆಗೆದುಹಾಕಿ: ರಾಷ್ಟ್ರಪತಿ ಪ್ರಣಬ್ ಮುಖರ್ಜಿ

ಭಾರತದ ನಿಜವಾದ ಮಲಿನ ರಸ್ತೆಗಳ ಮೇಲಿಲ್ಲ ಬದಲಾಗಿ ನಮ್ಮ ಮನಸ್ಸು ಹಾಗೂ ಸಮಾಜವನ್ನು ಒಡೆಯುವ ದೃಷ್ಟಿಕೋನಗಳನ್ನು ತೊಲಗಿಸಲು ಸಿದ್ಧವಿಲ್ಲದ ಮನಸ್ಥಿತಿಯಲ್ಲಿದೆ ಎಂದು ಪ್ರಣಬ್ ಮುಖರ್ಜಿ ಹೇಳಿದ್ದಾರೆ.

ಅಹಮದಾಬಾದ್: ಭಾರತದ ನಿಜವಾದ ಮಲಿನ ರಸ್ತೆಗಳ ಮೇಲಿಲ್ಲ ಬದಲಾಗಿ ನಮ್ಮ ಮನಸ್ಸು ಹಾಗೂ ಸಮಾಜವನ್ನು ಒಡೆಯುವ ದೃಷ್ಟಿಕೋನಗಳನ್ನು ತೊಲಗಿಸಲು ಸಿದ್ಧವಿಲ್ಲದ ಮನಸ್ಥಿತಿಯಲ್ಲಿದೆ ಎಂದು ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಹೇಳಿದ್ದಾರೆ.
ಗುಜರಾತ್ ಭೇಟಿಯಲ್ಲಿರುವ ಪ್ರಣಬ್ ಮುಖರ್ಜಿ, ಸಬರ್ ಮತಿ ಆಶ್ರಮದಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ್ದು, ಭೇದ ಭಾವದ ಆಲೋಚನೆಗಳನ್ನು ಬಿಟ್ಟು ಮನಸ್ಸನ್ನು ಚೊಕ್ಕಗೊಳಿಸುವುದಕ್ಕೆ ದೇಶದ ಜನತೆಗೆ ಕರೆ ನೀಡಿದ್ದಾರೆ. ಸಮಗ್ರತೆಗೆ ಮಹಾತ್ಮಾ ಗಾಂಧಿ ಅವರ ದೃಷ್ಟಿಕೋನವನ್ನು ಉಲ್ಲೇಖಿಸಿರುವ ಪ್ರಣಬ್ ಮುಖರ್ಜಿ, ಭಾರತ ಪ್ರತಿಯೊಂದು ವರ್ಗವು ಸಮಾನತೆಯಿಂದ ಬದುಕಲು ಸಾಧ್ಯವಿರುವ ಸಮಗ್ರ ರಾಷ್ಟ್ರವಾಗಿರಬೇಕು ಎಂದು ಪ್ರಣಬ್ ಮುಖರ್ಜಿ ಹೇಳಿದ್ದಾರೆ.
ಪ್ರತಿ ದಿನವೂ ನಮ್ಮ ಸುತ್ತಮುತ್ತಲ ಪ್ರದೇಶದಲ್ಲಿ ಹಿಂಸಾಚಾರ ನಡೆದಿರುವ ಬಗ್ಗೆ ಕೇಳುತ್ತಿದ್ದೇವೆ. ಹಿಂಸೆಯನ್ನು ಎದುರಿಸುವಾಗ ನಾವು ಅಹಿಂಸಾ ಮಾರ್ಗವನ್ನು ಮರೆಯಬಾರದು ಎಂದು ಪ್ರಣಬ್ ಮುಖರ್ಜಿ ಅಭಿಪ್ರಾಯಪಟ್ಟಿದ್ದಾರೆ. ಅಹಿಂಸೆ ಎನ್ನುವುದು ನಕಾರಾತ್ಮಕ ಶಕ್ತಿಯಲ್ಲ, ಅಹಿಂಸೆಯಿಂದ ಮಾತ್ರ ಎಲ್ಲರ ಒಳಗೊಳ್ಳುವಿಕೆ ಸಾಧ್ಯವಾಗುತ್ತದೆ ಎಂದು ಪ್ರಣಬ್ ಮುಖರ್ಜಿ ಅಭಿಪ್ರಾಯಪಟ್ಟಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

'ನಾವು ದಾಳಿ ಮಾಡದೇ ಹೋಗಿದ್ದರೆ ಇಷ್ಟು ಹೊತ್ತಿಗೆ Iran ಅಣ್ವಸ್ತ್ರ ರಾಷ್ಟ್ರವಾಗಿರುತ್ತಿತ್ತು': ಇಸ್ರೇಲ್ ಪ್ರಧಾನಿ ಬೆಂಜಮಿನ್ ನೇತನ್ಯಾಹು

IPL 2026: ತವರಿನಲ್ಲಿ ಮುಂಬೈ ಗೆ ಮುಖಭಂಗ; RCB ಗೆ 18 ರನ್ ಭರ್ಜರಿ ಗೆಲುವು!

7 ತಿಂಗಳ ಮಗುವಿಗಾಗಿ ಕೆಲಸದ ಸಮಯದ ಹೊಂದಾಣಿಕೆ ಕೋರಿದ ಭಾರತೀಯ ಉದ್ಯೋಗಿ; US ಮ್ಯಾನೇಜರ್ ಪ್ರತಿಕ್ರಿಯೆ ಬಗ್ಗೆ ಜಾಲತಾಣಗಳಲ್ಲಿ ಭಾರಿ ಚರ್ಚೆ!

ಗುರಿ ಇಟ್ಟಿದ್ದು ಜಿಹಾದಿ ಬಂಡುಕೋರರಿಗೆ, ಗುರಿಯಾಗಿದ್ದು ಸ್ಥಳೀಯ ಮಾರ್ಕೆಟ್; 100 ಕ್ಕೂ ಹೆಚ್ಚು ನಾಗರಿಕರ ಮಾರಣಹೋಮ!

IPL 2026: ಮುಂಬೈ ವಿರುದ್ದ ಭರ್ಜರಿ ಬ್ಯಾಟಿಂಗ್; ಬಾಬರ್ ಆಜಂ, ಕ್ರಿಸ್ ಗೇಯ್ಲ್ ದಾಖಲೆ ಮುರಿದ Virat Kohli!

SCROLL FOR NEXT