ಅಖ್ಲಾಕ್ ಸಂಬಂಧಿಕರು(ಅಖ್ಲಾಕ್ ಭಾವಚಿತ್ರ- ಬಲ ತುದಿಯಲ್ಲಿ) 
ದೇಶ

ದಾದ್ರಿ ಪ್ರಕರಣ: ಹಿಂದೂ ಗೆಳೆಯನಿಗೆ ಕೊನೆಯ ಕರೆ ಮಾಡಿದ್ದ ಅಖ್ಲಾಕ್

ಗುಂಪೊಂದು ಮನೆಯೊಳಗೆ ನುಗ್ಗಿ ದಾಂದಲೆ ನಡೆಸುವಾಗ ದಾದ್ರಿಯ ಬಿಸಡಾಗಾಂವ್ ನಿವಾಸ್ ಮೊಹಮ್ಮದ್ ಅಖ್ಲಾಕ್ ತನ್ನ...

ಬಿಸಡಾಗಾಂವ್: ಗುಂಪೊಂದು ಮನೆಯೊಳಗೆ ನುಗ್ಗಿ ದಾಂದಲೆ ನಡೆಸುವಾಗ ದಾದ್ರಿಯ ಬಿಸಡಾಗಾಂವ್ ನಿವಾಸ್ ಮೊಹಮ್ಮದ್ ಅಖ್ಲಾಕ್ ತನ್ನ ಬಾಲ್ಯದ ಗೆಳೆಯ ಮನೋಜ್ ಸಿಸೋಡಿಯಾಗೆ ಕರೆ ಮಾಡಿ ವಿಷಯ ತಿಳಿಸಿದ್ದಾರೆ. 
ಹಿಂದೂ ಧರ್ಮದ ಮನೋಜ್ ಸಿಸೋಡಿಯಾ ಅಖ್ಲಾಕ್ ಗೆ ಬಾಲ್ಯದ ಗೆಳೆಯನಾಗಿದ್ದರು. ಗುಂಪೊಂದು ತಮ್ಮ ಮೇಲೆ ಹಲ್ಲೆ ಮಾಡುತ್ತಿರುವ ವಿಷಯವನ್ನು ಅಖ್ಲಾಕ್ ತನ್ನ ಗೆಳೆಯನಿಗೆ ಕರೆ ಮಾಡಿ ತಿಳಿಸಿದ್ದಾರೆ. ತಕ್ಷಣ ಗೆಳೆಯನ ಪ್ರಾಣ ಉಳಿಸಲೆಂದು ಮನೋಜ್ ಸಿಸೋಡಿಯಾ ಪೊಲೀಸರೊಂದಿಗೆ ಅಖ್ಲಾಕ್ ಮನೆಗೆ ಬಂದಿದ್ದಾರೆ. ಆದರೆ, ಅಷ್ಟರಲ್ಲಿ ಅಖ್ಲಾಕ್ ಪ್ರಾಣ ಬಿಟ್ಟಿದ್ದರು. ಮಗ ನರಳಾಡುತ್ತಿದ್ದ ದೃಶ್ಯ ಕಂಡುಬಂದಿದೆ. ಕರೆ ಮಾಡಿದ 15 ನಿಮಿಷದೊರಳಗಾಗಿ ಸಿಸೋಡಿಯಾ ಮತ್ತು ಪೊಲೀಸರು ಅಖ್ಲಾಕ್ ಮನೆಗೆ ಬಂದರಾದರೂ, ಅಖ್ಲಾಕ್ ನನ್ನು ಕಾಪಾಡಲು ಸಾಧ್ಯವಾಗಲಿಲ್ಲ.
ದಾಖಲೆಗಳನ್ನು ಪರೀಶೀಲಿಸಿದಾಗ, ಅಖ್ಲಾಕ್ ರ ಅವರ ಕೊನೆಯ ಕರೆ ಮನೋಜ್ ಸಿಸೋಡಿಯಾರಿಗೆ ಮಾಡಿರುವುದು ಕಂಡು ಬರುತ್ತದೆ. ಸುಮಾರು ರಾತ್ರಿ 10:30ರ ವೇಳೆಗೆ ಈ ಕರೆ ಮಾಡಲಾಗಿತ್ತು. ಸಿಸೋಡಿಯಾ ಅಖ್ಲಾಕ್ ಮನೆಗಿಂತ ಸುಮಾರು ಅರ್ಧ ಕಿ.ಮೀ. ದೂರದಲ್ಲಿ ಒಂದು ಸಣ್ಣ ಅಂಗಡಿಯೊಂದನ್ನು ನಡೆಸುತ್ತಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. 
ಈವರೆಗೆ ಈ ಹಳ್ಳಿಯಲ್ಲಿ ಕೋಮು ಹಿಂಸಾಚಾರ ನಡೆದಿರಲಿಲ್ಲ. ಈ ರೀತಿ ನನ್ನ ಸ್ನೇಹಿತನ ಸಾವು ನನಗೆ ತುಂಬಾ ಆಘಾತವನ್ನುಂಟು ಮಾಡಿದೆ ಎಂದು ಸಿಸೋಡಿಯಾ ಹೇಳಿದ್ದಾರೆ. ರಾತ್ರಿ ನಾನು ಮಲುಗುವುದಕ್ಕೆ ಸಿದ್ಧತೆ ನಡೆಸುತ್ತಿದ್ದಾಗ, ಅಖ್ಲಾಕ್ ನಂಬರ್ ನಿಂದ ಕರೆ ಬಂತು. ಅವನು ನಡುಕದಲ್ಲಿ ಮಾತನಾಡಿದ, ಹೇಗಾದರೂ ಮಾಡಿ ಪೊಲೀಸರನ್ನು ಕರೆಸು ಎಂದ, ಇದು ಅವನ ಕೊನೆಯ ಮಾತಾಗಿತ್ತು.
ತಕ್ಷಣ ನಾನು ಪೊಲೀಸರಿಗೆ ಕರೆ ಮಾಡಿ ವಿಷಯ ಮುಟ್ಟಿಸಿ, ಆತನ ಮನೆಗೆ ನಾನು ಹೊರಟೆ, ಅಖ್ಲಾಕ್ ಮನಗೆ ಹೋಗುವಷ್ಟರಲ್ಲಿ 15 ನಿಮಿಷಗಳಾಗಿತ್ತು. ಪೊಲೀಸರು ಅಲ್ಲಿಗೆ ದಾವಿಸಿದ್ದರು. ಆದರೆ ಅಷ್ಟರಲ್ಲಿ ಆತನನ್ನು ಹತ್ಯೆ ಮಾಡಲಾಗಿತ್ತು. ಸ್ವಲ್ಪ ಬೇಗ ಹೋಗಿದ್ದರೆ, ದಾಳಿ ಮಾಡಿದ ಗುಂಪಿನ ಜೊತೆ ಮಾತಾಡಿ, ಸ್ನೇಹಿತನನ್ನು ಉಳಿಸಿಕೊಳ್ಳಬಹುದಾಗಿತ್ತು. ಆದರೆ, ನರಳಾಡುತ್ತಿದ್ದ ಮಗ ಡ್ಯಾನಿಷ್ ನನ್ನು ಆಸ್ಪತ್ರೆಗೆ ದಾಖಲಿಸಿದೆವು. ಆತ ಚಿಕಿತ್ಸೆ ಪಡೆಯುತ್ತಿದ್ದಾನೆ. ಅಖ್ಲಾಕ್ ತಲೆಗೆ ಬಲವಾದ ಏಟುನಿಂದಲೇ ಸಾವು ಸಂಭವಿಸಿದೆ ಎಂದು ವೈದ್ಯಕೀಯ ವರದಿ ತಿಳಿಸಿದೆ ಎಂದು ಸಿಸೋಡಿಯಾ ಹೇಳಿದ್ದಾರೆ. 

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ನ್ಯಾಯಾಂಗದಲ್ಲಿ ಭ್ರಷ್ಟಾಚಾರದ ಪಾಠ: ಕೇಂದ್ರ ಕ್ಷಮೆಯಾಚಿಸುತ್ತಿದ್ದಂತೆ NCERT ಪಠ್ಯ ಪುಸ್ತಕ ಬ್ಯಾನ್, ಪ್ರತಿಗಳನ್ನು ವಶಕ್ಕೆ ಪಡೆಯಲು ಸುಪ್ರೀಂ ಸೂಚನೆ

ಅಪ್ರಾಪ್ತ ಬಾಲಕಿಯೊಂದಿಗೆ ಅನುಚಿತ ವರ್ತನೆ: ಪೋಕ್ಸೋ ಕೇಸ್ ದಾಖಲಾಗುತ್ತಿದಂತೆ ಮಲ್ಲಿಕಾರ್ಜುನ ಮುತ್ಯಾ video ರಿಲೀಸ್!

'ನಿಮ್ಮ ಭಾಷಣ ನಾಚಿಕೆಯಿಲ್ಲದೆ ಸಮರ್ಥನೆ ಮಾಡಿಕೊಂಡಂತೆ ಇತ್ತು': ಐನ್ ಸ್ಟೈನ್ ನೆಹರೂಗೆ ಬರೆದ ಪತ್ರ ಉಲ್ಲೇಖಿಸಿ Modi ಟೀಕಿಸಿದ ಕಾಂಗ್ರೆಸ್

Ranji Trophy final: ಔಕಿಬ್ ನಬಿ ಬೌಲಿಂಗ್ ಮ್ಯಾಜಿಕ್‌ಗೆ ಬೆರಗಾದ ಕೆಎಲ್ ರಾಹುಲ್; ಆರಂಭದಲ್ಲೇ ಕರ್ನಾಟಕಕ್ಕೆ ಸಂಕಷ್ಟ!

T20 World cup 2026: 'ಆಕ್ರಮಣಕಾರಿ ಶೈಲಿ ಮುಂದುವರಿಸಿ': ಜಿಂಬಾಬ್ವೆ ವಿರುದ್ಧದ ಪಂದ್ಯಕ್ಕೂ ಮುನ್ನ ಟೀಂ ಇಂಡಿಯಾಗೆ ಅನಿಲ್ ಕುಂಬ್ಳೆ ಎಚ್ಚರಿಕೆ

SCROLL FOR NEXT