(ಸಾಂದರ್ಭಿಕ ಚಿತ್ರ) 
ದೇಶ

ಹಿಂದೂ ಧರ್ಮಕ್ಕೆ 300 ಕ್ರೈಸ್ತರ 'ಘರ್ ವಾಪಸಿ'

ವಾರಣಾಸಿಯ ಔಸಾನ್ ಪುರ ಗ್ರಾಮದಲ್ಲಿ ನಡೆದ ಕಾರ್ಯಕ್ರಮದ ಮೂಲಕ ಸುಮಾರು 300 ಮಂದಿ ಕ್ರಿಶ್ಚಿಯನ್ ಧರ್ಮದಿಂದ ಹಿಂದೂ ಧರ್ಮಕ್ಕೆ ಮತಾಂತರಗೊಂಡಿರುವ ಘಟನೆ ಸೋಮವಾರ ನಡೆದಿದೆ ಎಂದು ಮಾಧ್ಯಮಗಳ ವರದಿಗಳು ತಿಳಿಸಿದೆ...

ವಾರಾಣಾಸಿ: ವಾರಣಾಸಿಯ ಔಸಾನ್ ಪುರ ಗ್ರಾಮದಲ್ಲಿ ನಡೆದ ಕಾರ್ಯಕ್ರಮದ ಮೂಲಕ ಸುಮಾರು 300 ಮಂದಿ ಕ್ರಿಶ್ಚಿಯನ್ ಧರ್ಮದಿಂದ ಹಿಂದೂ ಧರ್ಮಕ್ಕೆ ಮತಾಂತರಗೊಂಡಿರುವ ಘಟನೆ ಸೋಮವಾರ ನಡೆದಿದೆ ಎಂದು ಮಾಧ್ಯಮಗಳ ವರದಿಗಳು ತಿಳಿಸಿದೆ.

ಕೆಲವು ವರ್ಷಗಳ ಹಿಂದಷ್ಟೇ ಈ ಗ್ರಾಮದಲ್ಲಿ ಸ್ಥಾಪನೆಗೊಂಡಿದ್ದ ಚರ್ಚ್ ವೊಂದು ಗ್ರಾಮದ ಹಿಂದೂಗಳಲನ್ನು ತಮ್ಮ ಧರ್ಮಕ್ಕೆ ಮತಾಂತರಿಸಿತ್ತು. ಇದೀಗ ಧರ್ಮ ಜಾಗರಣ್ ಸಮನ್ವಯ್ ಸಮಿತಿ ಇವರನ್ನು ಮತ್ತೆ ಹಿಂದೂ ಧರ್ಮಕ್ಕೆ ವಾಪಸ್ ಕರೆ ತಂದಿದೆ ಎಂದು ಟೈಮ್ಸ್ ಆಫ್ ಇಂಡಿಯಾ ತನ್ನ ವರದಿಯಲ್ಲಿ ಹೇಳಿಕೊಂಡಿದೆ.

ಕಾರ್ಯಕ್ರಮದಲ್ಲಿ  ಹಿಂದೂ ಧರ್ಮಕ್ಕೆ ಮತಾಂತರವಾದವರನ್ನೆಲ್ಲಾ ಶುದ್ದೀಕರಣ ಮಾಡಿ ಅವರಿಗೆ ಭಗವದ್ಗೀತೆ ಮತ್ತು ಹನುಮಾನ್ ಚಾಲೀಸಾ ಪುಸ್ತಕ ನೀಡಿ ಹಿಂದೂ ಧರ್ಮಕ್ಕೆ ಸೇರಿಸಿಕೊಳ್ಳಲಾಗಿದೆ ಎಂದು ವರದಿಯಲ್ಲಿ ವಿವರಿಸಿದೆ.

ಮತಾಂತರ ಕುರಿತಂತೆ ಪ್ರತಿಕ್ರಿಯೆ ನೀಡಿರುವ ವಾಪಾಸಿಗೊಂಡ ಗ್ರಾಮಸ್ಥರೊಬ್ಬರು, ಗ್ರಾಮದಲ್ಲಿ ಹಲವು ವರ್ಷಗಳ ಹಿಂದೆ ಚರ್ಚ್ ವೊಂದು ನಿರ್ಮಾಣವಾಗಿತ್ತು. ಚರ್ಚ್ ನೋಡಲು ಪ್ರತೀದಿನ ನೂರಾರು ಕುಟುಂಬಗಳು ಭೇಟಿ ನೀಡುತ್ತಿದ್ದರು. ಹೀಗೆಯೇ ಪ್ರಾರ್ಥನೆ ಮಾಡಲೆಂದು ಪ್ರತೀ ವಾರ ಚರ್ಚ್ ಗೆ ಹೋಗುತ್ತಿದ್ದರು. ಹೀಗೆ ಚರ್ಚ್ ಹೋಗುತ್ತಿದ್ದವರನ್ನು ಗ್ರಾಮದಲ್ಲಿರುವ ಕೆಲವರು ಮತಾಂತರಗೊಂಡಿದ್ದಾರೆಂದು ಹೇಳಲು ಪ್ರಾರಂಭಿಸಿದ್ದರು. ಚರ್ಚ್ ಗೆ ಹೋಗುತ್ತಿದ್ದವರಲ್ಲಿ ಸಾಕಷ್ಟು ಮಂದಿ ದಲಿತರಾಗಿದ್ದರು. ನಾವು ನಮ್ಮ ನಂಬಿಕೆಯನ್ನು ಬದಲಾಯಿಸಿಕೊಂಡಿದ್ದೆವೆಯೇ ಹೊರತು ಧರ್ಮವನಲ್ಲ. ಧರ್ಮವನ್ನು ತೊರೆದರೆ ಎಸ್ ಸಿಗಳಿಗೆ ಸಿಗುವ ಸೌಲಭ್ಯದಿಂದ ವಂಚಿತರಾಗುತ್ತೇವೆ ಎಂಬ ಭಯ ನಮಗಿತ್ತು. ಎಂದು ಘರ್ ವಾಪಾಸಿಗೊಂಡ ಗ್ರಾಮಸ್ಥರೊಬ್ಬರು ಹೇಳಿಕೊಂಡಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಜಮ್ಮು-ಕಾಶ್ಮೀರ: ಮಸೂದ್ ಅಜರ್ ಆಡಿಯೋ ಬೆನ್ನಲ್ಲೇ ಭಾರತದ ಗಡಿಗೆ ನುಗ್ಗಲು 'ಪಾಕ್ ಡ್ರೋನ್' ಗಳು ಯತ್ನ!

1st ODI: ಕೊಹ್ಲಿ ಅರ್ಧಶತಕ: ನ್ಯೂಜಿಲ್ಯಾಂಡ್ ವಿರುದ್ಧದ ಪಂದ್ಯದಲ್ಲಿ ಭಾರತಕ್ಕೆ ರೋಚಕ ಜಯ!

ಕಾಂಗ್ರೆಸ್ ಶಾಸಕಿ ನಯನಾ ಮೋಟಮ್ಮಗೆ ಅಶ್ಲೀಲ ಕಾಮೆಂಟ್! ಕಿಡಿಗೇಡಿಗಳಿಗೆ ಕೊಟ್ಟ ವಾರ್ನಿಂಗ್ ಏನು?

ಮಿಲಿಟರಿ ದಾಳಿಗೆ ಟ್ರಂಪ್, ನೆತನ್ಯಾಹು ಸಜ್ಜು: ತಿರುಗೇಟು ನೀಡಿದ ಇರಾನ್! ಹೇಳಿದ್ದೇನು ಗೊತ್ತಾ?

ಪಾಕಿಸ್ತಾನದಲ್ಲಿ 'ಗುಂಡಿಟ್ಟು' ಹಿಂದೂ ರೈತನ ಕಗ್ಗೊಲೆ! ಹೈದರಾಬಾದಿನಲ್ಲಿ ಆರೋಪಿಗಳ ಬಂಧನ

SCROLL FOR NEXT