ನಯನತಾರಾ ಸೆಹೆಗಲ್ 
ದೇಶ

ದೇಶದ ಭದ್ರ ಅಡಿಪಾಯ ಧ್ವಂಸ ಅಸಾಧ್ಯ: ಸೆಹೆಗಲ್

ಆಧುನಿಕ ಭಾರತದ ಅಡಿಪಾಯ ಪ್ರಬಲ ತತ್ವಗಳಿಂದ ನಿರ್ಮಿತವಾದದ್ದು. ಇದು ಮಹಾತ್ಮ ಗಾಂಧಿ ನೇತೃತ್ವದ ರಾಷ್ಟ್ರೀಯ ಚಳವ ಳಿಯ ಫಲ. ಇದನ್ನು ಅಷ್ಟು...

ನವದೆಹಲಿ: `'ಆಧುನಿಕ ಭಾರತದ ಅಡಿಪಾಯ ಪ್ರಬಲ ತತ್ವಗಳಿಂದ ನಿರ್ಮಿತವಾದದ್ದು. ಇದು ಮಹಾತ್ಮ ಗಾಂಧಿ ನೇತೃತ್ವದ ರಾಷ್ಟ್ರೀಯ ಚಳವ ಳಿಯ ಫಲ. ಇದನ್ನು ಅಷ್ಟು ಸುಲಭದಲ್ಲಿ ಧ್ವಂಸ ಮಾಡಲು ಸಾಧ್ಯವಾಗದು''. ಸಂಶೋಧಕ ಎಂ ಎಂ ಕಲಬುರ್ಗಿ, ದಾದ್ರಿ ಘಟನೆ ಖಂಡಿಸಿ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಹಿಂದಿರುಗಿಸಿದ ಖ್ಯಾತ ಲೇಖಕಿ, ನೆಹರೂರ ಸೋದರಸೊಸೆ ನಯನತಾರಾ ಸೆಹೆಗಲ್ ಅವರ ಮನದಾಳದ ಮಾತಿದು. ಇಂಡಿಯನ್ ಎಕ್ಸ್ಪ್ರೆಸ್‍ಗೆ ನೀಡಿದ ಸಂದರ್ಶ ನದಲ್ಲಿ ಸೆಹೆಗಲ್ ಹಲವು ವಿಚಾರಗಳ ಬಗ್ಗೆಚರ್ಚಿಸಿದ್ದಾರೆ. ``ನಾನೊಬ್ಬ ಆಶಾವಾದಿ, ಸಮಾಜವಾದಿ. ಭೂಕಂಪವು ಕಟ್ಟಡದ ಮೇಲ್ಭಾಗವನ್ನು ಧ್ವಂಸಗೊಳಿಸಬಹುದು. ಆದರೆ, ಭದ್ರ ಅಡಿಪಾಯವನ್ನು ಅಲುಗಿಸುವು ದು ಸುಲಭವಲ್ಲ. ಈ ಅಡಿಪಾಯದ ಮೇಲಾಗುತ್ತಿರುವ ದಾಳಿಯ ಬಗ್ಗೆ ನನಗೆ ತೀವ್ರ ನೋವಿದೆ. ಆದರೆ, ಭಾರತೀಯರು ಎಂದಿಗೂ ತಮ್ಮ ಜಾತ್ಯತೀತತೆ ಬಿಟ್ಟುಕೊಡಲಾ ರರು. ಈಗ ನಡೆಯುತ್ತಿರುವ ದಾಳಿಗಳ ನ್ನು ದೊಡ್ಡ, ಧ್ವನಿಯಿಂದ ಖಂಡಿಸಬೇಕು. ಹೀಗೆ ನಿಂತು, ಖಂಡಿಸಿದ ಎಷ್ಟೋ ಉದಾಹರ ಣೆಗಳು ಇತಿಹಾಸದಲ್ಲಿ ಕಾಣಸಿಗುತ್ತವೆ. ಇದೂ ಅಂಥದ್ದರಲ್ಲಿ ಒಂದು'' ಎಂದಿದ್ದಾರೆ ಮೋದಿ ಸರ್ಕಾರವನ್ನು ಆರೆಸ್ಸೆಸ್ ಸರ್ಕಾರ ವೆಂದೇ ಕರೆದ ಸೆಹೆಗಲ್, ಬಿಜೆಪಿ ಮತ್ತು ಆರೆಸ್ಸೆಸ್ ನಡುವೆ ವ್ಯತ್ಯಾಸವೇನೂ ಇಲ್ಲ ಎಂದಿದ್ದಾರೆ. ವಂಶಾಡಳಿತದ ಬಗೆಗಿನ ಪ್ರಶ್ನೆಗೆ, `ಇಂದಿರಾ ಅವರು ಸಂಜೀವ್ರನ್ನು ಉತ್ತರಾಧಿಕಾರಿಯನ್ನಾಗಿ ನೇಮಸಿದಾಗಲೇ ನಾನು ವಂಶಾ ಡಳಿತ ವಿರೋಧಿಸಿದ್ದೆ. ರಾಹುಲ್, ಪ್ರಿಯಾಂಕಾರನ್ನೂ ನಾನು ನಾಯಕರೆಂದು ಪರಿಗಣಿಸಿಲ್ಲ. ವಂಶಾಡಳಿತದಲ್ಲಿ ನನಗೆ ನಂಬಿಕೆಯಿಲ್ಲ' ಎಂದಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

'ನಾವು ದಾಳಿ ಮಾಡದೇ ಹೋಗಿದ್ದರೆ ಇಷ್ಟು ಹೊತ್ತಿಗೆ Iran ಅಣ್ವಸ್ತ್ರ ರಾಷ್ಟ್ರವಾಗಿರುತ್ತಿತ್ತು': ಇಸ್ರೇಲ್ ಪ್ರಧಾನಿ ಬೆಂಜಮಿನ್ ನೇತನ್ಯಾಹು

IPL 2026: ತವರಿನಲ್ಲಿ ಮುಂಬೈ ಗೆ ಮುಖಭಂಗ; RCB ಗೆ 18 ರನ್ ಭರ್ಜರಿ ಗೆಲುವು!

7 ತಿಂಗಳ ಮಗುವಿಗಾಗಿ ಕೆಲಸದ ಸಮಯದ ಹೊಂದಾಣಿಕೆ ಕೋರಿದ ಭಾರತೀಯ ಉದ್ಯೋಗಿ; US ಮ್ಯಾನೇಜರ್ ಪ್ರತಿಕ್ರಿಯೆ ಬಗ್ಗೆ ಜಾಲತಾಣಗಳಲ್ಲಿ ಭಾರಿ ಚರ್ಚೆ!

ಗುರಿ ಇಟ್ಟಿದ್ದು ಜಿಹಾದಿ ಬಂಡುಕೋರರಿಗೆ, ಗುರಿಯಾಗಿದ್ದು ಸ್ಥಳೀಯ ಮಾರ್ಕೆಟ್; 100 ಕ್ಕೂ ಹೆಚ್ಚು ನಾಗರಿಕರ ಮಾರಣಹೋಮ!

IPL 2026: ಮುಂಬೈ ವಿರುದ್ದ ಭರ್ಜರಿ ಬ್ಯಾಟಿಂಗ್; ಬಾಬರ್ ಆಜಂ, ಕ್ರಿಸ್ ಗೇಯ್ಲ್ ದಾಖಲೆ ಮುರಿದ Virat Kohli!

SCROLL FOR NEXT