ಮಾಜಿ ವಿಶೇಷ ಅಭಿಯೋಜಕಿ ರೋಹಿಣಿ ಸಾಲಿಯಾನ್ (ಸಂಗ್ರಹ ಚಿತ್ರ) 
ದೇಶ

ಮಾಲೇಗಾಂವ್: ಒತ್ತಡ ತಂದಿದ್ದು ಸುಹಾಸ್ ವರ್ಕೆ ಎಂದ ಸಾಲಿಯಾನ್

ಮಾಲೇಗಾಂವ್ ಸ್ಫೋಟದ ಆರೋಪಿಗಳ ಬಗ್ಗೆ ಮೃದು ಧೋರಣೆ ತಾಳುವಂತೆ ಸೂಚಿಸಿದ್ದ ರಾಷ್ಟ್ರೀಯ ತನಿಖಾ ಸಂಸ್ಥೆ(ಎನ್ಐಎ) ಅಧಿಕಾರಿ ಹೆಸರನ್ನು ಮಾಜಿ ವಿಶೇಷ ಅಭಿಯೋಜಕಿ ರೋಹಿಣಿ ಸಾಲಿಯಾನ್ ಬಹಿರಂಗಪಡಿಸಿದ್ದಾರೆ...

ನವದೆಹಲಿ: ಮಾಲೇಗಾಂವ್ ಸ್ಫೋಟದ ಆರೋಪಿಗಳ ಬಗ್ಗೆ ಮೃದು ಧೋರಣೆ ತಾಳುವಂತೆ ಸೂಚಿಸಿದ್ದ ರಾಷ್ಟ್ರೀಯ ತನಿಖಾ ಸಂಸ್ಥೆ(ಎನ್ಐಎ) ಅಧಿಕಾರಿ ಹೆಸರನ್ನು ಮಾಜಿ ವಿಶೇಷ ಅಭಿಯೋಜಕಿ ರೋಹಿಣಿ ಸಾಲಿಯಾನ್ ಬಹಿರಂಗಪಡಿಸಿದ್ದಾರೆ.

ತಮ್ಮ ಬಳಿ ಬಂದು ಸೂಚನೆ ನೀಡಿದ್ದ ಅಧಿಕಾರಿ ಹೆಸರು ಸುಹಾಸ್ ವರ್ಕೆ ಎಂದು ಸಾಲಿಯಾನ್ ಮಂಗಳವಾರ ಘೋಷಿಸಿದ್ದಾರೆ. ಜತೆಗೆ, ಎನ್ಐಎ ಮುಖ್ಯಸ್ಥ ರನ್ನು ವಜಾ ಮಾಡುವಂತೆಯೂ  ಅವರು ಆಗ್ರಹಿಸಿದ್ದಾರೆ ಎಂದು ಇಂಡಿಯಾ ಟುಡೇ ವರದಿ ಮಾಡಿದೆ.

ಎನ್ಐಎ ಎಸ್ಪಿ ವರ್ಕೆ ಹೆಸರು ಬಹಿರಂಗಪಡಿಸಿದ್ದನ್ನು ಸಮರ್ಥಿಸಿಕೊಂಡಿರುವ ಸಾಲಿಯಾನ್, ``ಎನ್ಐಎ ಮುಖ್ಯಸ್ಥರನ್ನು  ವಜಾ ಮಾಡಬೇಕು. ರಕ್ಷಕನೇ ಭಕ್ಷಕನಾ ದಾಗ, ನಾವೇನನ್ನು ನಿರೀಕ್ಷಿಸಲು ಸಾಧ್ಯ?'' ಎಂದು ಪ್ರಶ್ನಿ ಸಿದರು. ಅಧಿಕಾರಿ ಹೆಸರನ್ನು  ನಮೂದಿಸಿರುವ ಅಫಿಡವಿಟ್ ಅನ್ನು 2 ತಿಂಗಳ ಹಿಂದೆಯೇ  ಸಲ್ಲಿಸಲಾಗಿದೆ. ಪ್ರಕರಣ ವಿಚಾರಣೆ ಹಂತದಲ್ಲಿರುವ ಈ ಬಗ್ಗೆ ಹೆಚ್ಚು ಮಾತನಾಡುವ ಹಾಗಿಲ್ಲ ಎಂದೂ ಅವರು ಹೇಳಿದರು. ಸೋಮವಾರವಷ್ಟೇ ವಿಶೇಷ ಎನ್ಐಎ ನ್ಯಾಯಾಲ ಯವು, ಪ್ರಸಾದ್  ಪುರೋಹಿತ್ ಸೇರಿದಂತೆ ಸ್ಫೋಟದ 3 ಆರೋಪಿಗಳ ಜಾಮೀನು ಅರ್ಜಿ ತಿರಸ್ಕರಿಸಿತ್ತು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಪಶ್ಚಿಮ ಬಂಗಾಳ ವೈದ್ಯಕೀಯ ವಿದ್ಯಾರ್ಥಿನಿ ಗ್ಯಾಂಗ್ ರೇಪ್ ಕೇಸ್: ಮೂವರ ಬಂಧನ

ಯುದ್ಧ ತೀವ್ರ: ಪಾಕಿಸ್ತಾನದ ಏರ್ ಸ್ಟ್ರೈಕ್ ಗೆ ಅಫ್ಘಾನಿಸ್ತಾನದಿಂದ ಕ್ಷಿಪಣಿ ದಾಳಿ ಉತ್ತರ

20 ವರ್ಷ ಸಾಕಿ ಬೆಳೆಸಿದ 'ಅಶ್ವತ್ಥ'ಕ್ಕೆ ಕಿಡಿಗೇಡಿಗಳ ಕೊಡಲಿ ಪೆಟ್ಟು, ಬಿಕ್ಕಿ ಬಿಕ್ಕಿ ಅತ್ತ 'ವೃಕ್ಷಮಾತೆ', ಇಬ್ಬರ ಬಂಧನ, video viral

2nd Test: ವಿಂಡೀಸ್ ವಿರುದ್ಧ ಕುಲದೀಪ್ ಯಾದವ್ ಭರ್ಜರಿ ಬೌಲಿಂಗ್, ವಿಶ್ವ ದಾಖಲೆ

2nd Test, Day 3: ಮೊದಲ ಇನ್ನಿಂಗ್ಸ್ ನಲ್ಲಿ 248 ರನ್ ಗೆ ವಿಂಡೀಸ್ ಆಲೌಟ್, ಫಾಲೋಆನ್ ಹೇರಿದ ಭಾರತ

SCROLL FOR NEXT