ದೇಶ

ಹಿಮಾಚಲ ಪ್ರದೇಶದಲ್ಲಿ ದಾದ್ರಿ ಘಟನೆ ಪುನರಾವರ್ತನೆ? ಗೋ ಕಳ್ಳಸಾಗಣೆದಾರನ ಹತ್ಯೆ

Shilpa D

ನಹಾಮ್: ದೇಶಾದ್ಯಂತ ತೀವ್ರ ಚರ್ಚೆಗೆ ಕಾರಣವಾಗಿದ್ದ ದಾದ್ರಿಯಲ್ಲಿ ವ್ಯಕ್ತಿ ಹತ್ಯೆ ಪ್ರಕರಣ ಜಮ ಮಾನಸದಿಂದ ಮಾಸುವ ಮುನ್ನವೇ ಹಿಮಾಚಲ ಪ್ರದೇಶದಲ್ಲಿ ಅಂಥಹುದ್ದೇ ಮತ್ತೊಂದು ಘಟನೆ ನಡೆದಿದೆ. ಹಸುಗಳನ್ನು ಕಳ್ಳ ಸಾಗಣೆ ಮಾಡುತ್ತಿದ್ದ ಆರೋಪದಲ್ಲಿ ಟ್ರಕ್ ಚಾಲಕನನ್ನು ಕೊಲೆ ಮಾಡಲಾಗಿದೆ.

ಟ್ರಕ್ ನಲ್ಲಿ ಹಸು ಸಾಗಿಸುತ್ತಿದ್ದ ಐವರನ್ನ ಹಿಮಾಚಲ ಪ್ರದೇಶ ಪೊಲೀಸರು ಸ್ಥಳೀಯರ ಸಹಾಯ ಪಡೆದು ಸಿರ್ ಮುರ್ ಜಿಲ್ಲೆಯ ಅರಣ್ಯ ಪ್ರದೇಶದಲ್ಲಿ ಬಂಧಿಸಿದ್ದರು. ಈ ವೇಳೆ ಐವರು ಆರೋಪಿಗಳ ಮೇಲೆ ದಾಳಿ ನಡೆಸಿದ ಸ್ಥಳೀಯರು ಅವರಿಗೆ ಹಿಗ್ಗಮುಗ್ಗಾ ಥಳಿಸಿದ್ದಾರೆ. ಗಾಯಗೊಂಡವರನ್ನು ಕೂಡಲೇ ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಯಿತು.

ಟ್ರಕ್ ನಲ್ಲಿ 10 ಎತ್ತುಗಳನ್ನು ಕದ್ದು ಸಾಗಿಸಲಾಗುತ್ತಿತ್ತು. ಈ ವೇಳೆ ಪೊಲೀಸರು ಆ ಲಾರಿಯನ್ನು ಚೇಸ್ ಮಾಡಿದ್ದರು. ಆರೋಪಿಗಳು ತಪ್ಪಿಸಿಕೊಳ್ಳಲು ಕೆಲವೊಂದು ಎತ್ತುಗಳನ್ನು ಲಾರಿಯಿಂದ ಹೊರ ಎಸೆದರು. ಈ ವೇಳೆ ಒಂದು ಎತ್ತು ಸ್ಥಳದಲ್ಲಿಯೇ ಸಾವನ್ನಪ್ಪಿತು.  

ನಂತರ ಚಾಲಕ ಲಾರಿ ನಿಲ್ಲಿಸಿ ತಪ್ಪಿಸಿಕೊಳ್ಳಲು ಕಾಡಿನೊಳಗೆ ಓಡಿ ಹೋದರು. ಆರೋಪಿಗಳನ್ನು ಹಿಡಿದ ಸ್ಥಳೀಯರು ಲಾವಾಸಾ ಚೌಕಿ ಬಳಿ ಥಳಿಸಿದ್ದಾರೆ. ಈ ವೇಳೆ ಐವರಲ್ಲಿ ಚಾಲಕ ಗಂಭೀರವಾಗಿ ಗಾಯಗೊಂಡು ಮೃತ ಪಟ್ಟಿದ್ದಾನೆ. ಉಳಿತ ನಾಲ್ವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಮೃತನನ್ನು ನೋಮನ್ ಎಂದು ಗುರುತಿಸಲಾಗಿದೆ. ಇನ್ನು ಘಟನೆಯಲ್ಲಿ ಭಜರಂಗದಳ ಕಾರ್ಯಕರ್ತರ ಕೈವಾಡವಿರಬಹುದೆಂದು ಶಂಕಿಸಲಾಗಿದೆ.

SCROLL FOR NEXT