ಸಂಗೀತ್ ಸೋಮ್, ಅಮರ್ ಸಿಂಗ್ ಮತ್ತು ಅಜಂಖಾನ್ 
ದೇಶ

ಸಂಗೀತ್ ಸೋಮ್, ಅಮರ್ ಸಿಂಗ್ ನನ್ನನ್ನು ಕೊಲ್ಲಲು ಪಿತೂರಿ ನಡೆಸಿದ್ದರು: ಅಜಂ ಖಾನ್

ಬಿಜೆಪಿ ಶಾಸಕ ಸಂಗೀತ್ ಸೋಮ್ ಮತ್ತು ಸಮಾಜವಾದಿ ಪಕ್ಷದ ಮಾಜಿ ಮುಖಂಡ ಅಮರ್ ಸಿಂಗ್ ನನ್ನನ್ನು ಕೊಲ್ಲಿಸಲು ಪಿತೂರಿ ನಡೆಸಿದ್ದರು ಎಂದು ಹಿರಿಯ ಸಚಿವ ಅಜಂ ಖಾನ್ ಆರೋಪಿಸಿದ್ದಾರೆ...

ರಾಮಪುರ್: ಬಿಜೆಪಿ ಶಾಸಕ ಸಂಗೀತ್ ಸೋಮ್ ನನ್ನನ್ನು ಕೊಲ್ಲಿಸಲು ಪಿತೂರಿ ನಡೆಸಿದ್ದರು, ಇದಕ್ಕೆ ಸಮಾಜವಾದಿ ಪಕ್ಷದ ಮಾಜಿ ಮುಖಂಡ ಅಮರ್ ಸಿಂಗ್ ಕೂಡ ಕೈ ಜೋಡಿಸಿದ್ದರು ಎಂದು ಉತ್ತರ ಪ್ರದೇಶ ಹಿರಿಯ ಸಚಿವ ಅಜಂ ಖಾನ್ ಆರೋಪಿಸಿದ್ದಾರೆ.

ಸಂಗೀತ್ ಸೋಮ್ ಮತ್ತು ಅಮರ್ ಸಿಂಗ್ ಇಬ್ಬರು ಒಂದೇ ಸಮುದಾಯದವರಾಗಿದ್ದಾರೆ. ಹೀಗಾಗಿ ನನ್ನನ್ನು ಹತ್ಯೆ ಮಾಡಲು ಪಿತೂರಿ ನಡೆಸಿದ್ದರು ಎಂದು ದೂರಿದ್ದಾರೆ.

ದಾದ್ರಿ ಹತ್ಯೆ ಪ್ರಕರಣದ ವೇಳೆ ಅಲ್ಲಿಗೆ ಭೇಟಿ ನೀಡಿದ್ದ ಶಾಸಕ ಸಂಗೀತ್ ಸೋಮ್ ದಾದ್ರಿ ಮತ್ತು ಮುಜಾಫರ್ ನಗರ ಹಿಂಸಾಚಾರದ  ಹಿಂದೆ ಅಜಂ ಖಾನ್ ಕೈವಾಡವಿದೆ ಎಂದು ಆರೋಪಿಸಿದ್ದರು.

ದಾದ್ರಿ ಘಟನೆ ಬಿಜೆಪಿಯಿಂದ ಪೂರ್ವ ನಿಯೋಜಿತವಾದದ್ದು ಎಂದು ಪ್ರತ್ಯಾರೋಪ ಮಾಡಿದ್ದ ಅಜಂ ಖಾನ್ ಆರ್ ಎಸ್ ಎಸ್ ವಿರುದ್ದ ವಾಗ್ದಾಳಿ ನಡೆಸಿದ್ದರು. ಧರ್ಮದ ಆಧಾರದ ಮೇಲೆ ಜನರನ್ನು ಒಡೆಯಲು ಬಿಜೆಪಿ ಪ್ರಯತ್ನ ಪಡುತ್ತಿದೆ ಎಂದು ಅಜಂ ಖಾನ್ ಆರೋಪಿಸಿದ್ದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಯುದ್ಧ ತೀವ್ರ: ಪಾಕಿಸ್ತಾನದ ಏರ್ ಸ್ಟ್ರೈಕ್ ಗೆ ಅಫ್ಘಾನಿಸ್ತಾನದಿಂದ ಕ್ಷಿಪಣಿ ದಾಳಿ ಉತ್ತರ

ಇತಿಹಾಸ ಬರೆದ Sherry Singh, 48 ವರ್ಷಗಳಲ್ಲಿ ಮೊದಲ ಬಾರಿಗೆ ಭಾರತಕ್ಕೆ 'ಮಿಸ್ ಯೂನಿವರ್ಸ್' ಕಿರೀಟ!

ಪಶ್ಚಿಮ ಬಂಗಾಳ ವೈದ್ಯಕೀಯ ವಿದ್ಯಾರ್ಥಿನಿ ಗ್ಯಾಂಗ್ ರೇಪ್ ಕೇಸ್: ಮೂವರ ಬಂಧನ

ಅಮೆರಿಕ ನಿಯೋಜಿತ ರಾಯಭಾರಿ ಸೆರ್ಗಿಯೊ ಗೋರ್- ಮೋದಿ, ಜೈಶಂಕರ್ ಭೇಟಿ; Tariff ಒತ್ತಡದ ನಡುವೆ ಭಾರತ-ಅಮೆರಿಕ ಸಂಬಂಧ ಸುಧಾರಣೆಯ ಸೂಚನೆ?

ಅಫ್ಘಾನಿಸ್ತಾನ ನಮ್ಮೊಂದಿಗೆ ಗಡಿ ಹಂಚಿಕೊಂಡಿರುವ ನೆರೆ ರಾಷ್ಟ್ರ- S Jaishankar; ಭಾರತದೊಂದಿಗೆ POK ವಿಲೀನದ ಸುಳಿವು; ಚೀನಾಗೂ ಶಾಕ್!

SCROLL FOR NEXT