ಗೋ ಕಳ್ಳಸಾಗಣೆ 
ದೇಶ

ನಹಾಮ್ ನಲ್ಲಿ ಗೋ ಕಳ್ಳಸಾಗಣೆದಾರನ ಹತ್ಯೆ: ಓರ್ವನ ಸೆರೆ

ಹಿಮಾಚಲದ ಸಿರಮೌರ್‌ ಜಿಲ್ಲೆಯಲ್ಲಿ ಗೋವುಗಳನ್ನು ಕಳ್ಳಸಾಗಣೆ ಮಾಡುತ್ತಿದ್ದ ವ್ಯಕ್ತಿಯೊಬ್ಬನನ್ನು ಬಡಿದುಕೊಂದ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಓರ್ವನನ್ನು...

ನಹಾಮ್: ಹಿಮಾಚಲದ ಸಿರಮೌರ್‌ ಜಿಲ್ಲೆಯಲ್ಲಿ ಗೋವುಗಳನ್ನು ಕಳ್ಳಸಾಗಣೆ ಮಾಡುತ್ತಿದ್ದ ವ್ಯಕ್ತಿಯೊಬ್ಬನನ್ನು ಬಡಿದುಕೊಂದ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಓರ್ವನನ್ನು ಬಂಧಿಸಿದ್ದಾರೆ. 
ಲಾರಿಯಲ್ಲಿ ಗೋವುಗಳ ಕಳ್ಳಸಾಗಣೆ ವೇಳೆ ಕಳ್ಳಸಾಗಣೆಯನ್ನು ತಡೆಯಲು ಉದ್ರಿಕ್ತರ ಗುಂಪು ಸುಮೋ ವಾಹನವನ್ನು ಬಳಸಿತ್ತು. ಈ ವಾಹನ ಚಾಲಕನನ್ನು ಸದ್ಯ ಬಂಧಿಸಲಾಗಿದ್ದು, ಕೆಲ ದಿನಗಳಲ್ಲೇ ಉಳಿದ ಆರೋಪಿಗಳನ್ನು ಬಂಧಿಸಲಾಗುವುದು ಎಂದು ನಹಾನ್ ನ ಪೊಲೀಸ್ ಅಧೀಕ್ಷಕ ಸೌಮ್ಯ ಸಾಂಬಶಿವನ್ ಹೇಳಿದ್ದಾರೆ. 
ಹತ್ಯೆಗೀಡಾದ ವ್ಯಕ್ತಿ ಸೇರಿ ನಾಲ್ವರು ಕಳೆದ ಬುಧವಾರ ಲಾರಿಯೊಂದರಲ್ಲಿ 10 ದನ ಮತ್ತು 5 ಆಕಳನ್ನು ಸಾಗಿಸುತ್ತಿದ್ದರು. ಇದನ್ನು ಗಮನಿಸಿದ ಜನರು ಟ್ರಕ್‌ ಮೇಲೆ ದಾಳಿ ಮಾಡಿದ್ದಾರೆ. ಆಗ ಹೆದರಿದ ಲಾರಿಯಲ್ಲಿದ್ದ ವ್ಯಕ್ತಿಗಳು ಕೆಲ ಆಕಳನ್ನು ಟ್ರಕ್‌ನಿಂದ ಕೆಳಗೆ ನೂಕಿದ್ದಾರೆ. ಆಗ ಒಂದು ಗೋವು ಸತ್ತುಹೋಗಿದೆ. ಇನ್ನು 5 ಗೋವುಗಳು ಗಾಯಗೊಂಡಿವೆ. ಅನಂತರ ಗೋಕಳ್ಳರು ಸ್ಥಳವೊಂದರಲ್ಲಿ ಅವಿತಿದ್ದಾಗ, ಜನರು ಇವರನ್ನು ಬೆನ್ನಟ್ಟಿ ಥಳಿಸಿ ಪೊಲೀಸರಿಗೆ ಒಪ್ಪಿಸಿದ್ದಾರೆ. ಆದರೆ ಜನರಿಂದ ಥಳಿತಕ್ಕೊಳಗಾಗಿದ್ದ ಉತ್ತರಪ್ರದೇಶದ ಸಹಾರನ್‌ಪುರದ ನೋಮಾನ್‌ (28) ಎಂಬಾತ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾನೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ನನ್ನ-ಕಾಂಗ್ರೆಸ್ ಮಧ್ಯೆ ಭಕ್ತ- ಭಗವಂತನ ಸಂಬಂಧ ಇದೆ, RSS ಗೀತೆ ಹಾಡಿದ್ದಕ್ಕೆ ನೋವಾಗಿದ್ದರೆ ಕ್ಷಮೆ ಕೇಳುತ್ತೇನೆ: ಡಿಕೆ ಶಿವಕುಮಾರ್

ಭಾರತದ ಮೇಲೆ ಶೇ. 50 ರಷ್ಟು ಸುಂಕ ನಾಳೆ ಜಾರಿ, ಅಮೆರಿಕ ಕರಡು ಸೂಚನೆ; ಔಷಧ, ಎಲೆಕ್ಟ್ರಾನಿಕ್ಸ್‌ ವಸ್ತುಗಳಿಗೆ ವಿನಾಯಿತಿ

ಪದಕ ಹಾಕಿಸಿಕೊಳ್ಳಲು ನಿರಾಕರಿಸಿದ DMK ಸಚಿವನ ಪುತ್ರ, BJP ನಾಯಕ Annamalai ಹೇಳಿದ್ದೇನು? Video

'ಶಾಂತಿ ಬೇಕಾದರೆ ಯುದ್ಧಕ್ಕೆ ಸಿದ್ಧರಾಗಿ.. Sudarshan Chakra ವಾಯುರಕ್ಷಣಾ ವ್ಯವಸ್ಥೆಗೆ ಮೂರೂ ಸೇನೆಗಳ ಬೃಹತ್ ಪ್ರಯತ್ನ ಬೇಕು': CDS Chauhan

ಧರ್ಮಸ್ಥಳ ಬುರುಡೆ ಕೇಸು: ಮಹೇಶ್ ತಿಮರೋಡಿ ನಿವಾಸದಲ್ಲಿ ಆರೋಪಿ ಚಿನ್ನಯ್ಯನ ಮೊಬೈಲ್ ಪತ್ತೆ

SCROLL FOR NEXT