ಪಾಕಿಸ್ತಾನ ಪ್ರಧಾನಿ ನವಾಜ್ ಷರೀಫ್ ಮತ್ತು ಅಮೆರಿಕ ಅಧ್ಯಕ್ಷ ಬರಾಕ್ ಒಬಾಮ (ಸಂಗ್ರಹ ಚಿತ್ರ) 
ದೇಶ

ಭಾರತದಿಂದ ಆಕ್ರಮಣಕಾರಿ ಮಿಲಿಟರಿ ನೀತಿ: ಷರೀಫ್

ಭಾರತವು ಪಾಕಿಸ್ತಾನಕ್ಕೆ ಭೀತಿ ಹುಟ್ಟಿಸುವ ರೀತಿಯಲ್ಲಿ ಆಕ್ರಮಣಕಾರಿ ಮಿಲಿಟರಿ ನೀತಿ ಅನುಸರಿಸುತ್ತಿದೆ. ಶಸ್ತ್ರಾಸ್ತ್ರಗಳನ್ನು ಸಂಗ್ರಹಿಸುತ್ತಿದೆ. ಇದರಿಂದಾಗಿ ಪಾಕಿಸ್ತಾನಕ್ಕೆ ಪ್ರತಿತಂತ್ರ ಹಣಿಯುವುದು..

ಇಸ್ಲಾಮಾಬಾದ್: ಭಾರತವು ಪಾಕಿಸ್ತಾನಕ್ಕೆ ಭೀತಿ ಹುಟ್ಟಿಸುವ ರೀತಿಯಲ್ಲಿ ಆಕ್ರಮಣಕಾರಿ ಮಿಲಿಟರಿ ನೀತಿ ಅನುಸರಿಸುತ್ತಿದೆ. ಶಸ್ತ್ರಾಸ್ತ್ರಗಳನ್ನು ಸಂಗ್ರಹಿಸುತ್ತಿದೆ. ಇದರಿಂದಾಗಿ ಪಾಕಿಸ್ತಾನಕ್ಕೆ  ಪ್ರತಿತಂತ್ರ ಹಣಿಯುವುದು ಅನಿವಾರ್ಯವಾಗಿದೆ ಎಂದು ಪಾಕ್ ಪ್ರಧಾನಿ ನವಾಜ್ ಷರೀಫ್ ಹೇಳಿದ್ದಾರೆ.

ಮಾತುಕತೆಗೆ ಹಿಂದೇಟು ಹಾಕುತ್ತಿರುವ ಭಾರತ ಭಾರಿ ಶಸ್ತ್ರಾಸ್ತ್ರ ಸಂಗ್ರಹ ಕಾರ್ಯದಲ್ಲಿ ತೊಡಗಿದೆ. ಭಾರತದ ಈ ಕಾರ್ಯಕ್ಕೆ ಅನೇಕ ರಾಷ್ಟ್ರಗಳ ಬೆಂಬಲವೂ ಸಿಗುತ್ತಿದೆ. ಒಟ್ಟಾರೆ ನೆರೆಯ  ದೇಶವು ಅಪಾಯಕಾರಿ ಮಿಲಿಟಿರಿ ಸಿದ್ಧಾಂತವನ್ನು ಅನುಸರಿಸುತ್ತಿದೆ ಎಂದು ಷರೀಫ್ ಅವರು ಯುಎಸ್ ಇನ್ಸ್ ಟಿಟ್ಯೂಟ್ ಆಫ್ ಪೀಸ್(ಯುಎಸ್‍ಐಪಿ)ನಲ್ಲಿ ಹೇಳಿದ್ದಾರೆ. ಎನ್‍ಎಸ್‍ಎ ಹಂತದ  ಮಾತುಕತೆ ಬೆನ್ನಲ್ಲೇ ಗಡಿಯುದ್ದಕ್ಕೂ ಕದನ ವಿರಾಮ ಉಲ್ಲಂಘನೆ ನಡೆಸಲಾಗಿದೆ.

ಇದರ ಜತೆಗೆ ಭಾರತೀಯ ರಾಜಕಾರಣಿಗಳು ಹಾಗೂ ಮಿಲಿಟರಿ ನಾಯಕತ್ವವು ಆಕ್ರಮಣಕಾರಿ ಹೇಳಿಕೆಗಳನ್ನೂ ನೀಡಿದೆ ಎಂದು ಷರೀಫ್ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದಕ್ಕೂ ಮೊದಲು  ಭಾರತದ ಜತೆಗಿನ ವಿವಾದದಲ್ಲಿ ಮಧ್ಯಪ್ರವೇಶಿಸುವಂತೆ ಪಾಕ್ ನೀಡಿದ ಆಹ್ವಾನವನ್ನು ಅಮೆರಿಕ ಮತ್ತೊಮ್ಮೆ ತಳ್ಳಿಹಾಕಿದೆ. ಭಾರತ ಮತ್ತು ಪಾಕ್ ವಿವಾದದ ನಡುವೆ ಮೂರನೇ ವ್ಯಕ್ತಿಯಾಗಿ ತಾನು ಮಧ್ಯಪ್ರವೇಶಿಸಲ್ಲ ಎಂದು ಷರೀಫ್ರಿಗೆ ಅಮೆರಿಕ ಸೂಚ್ಯವಾಗಿ ತಿಳಿಸಿದೆ.

ಷರೀಫ್ಗೆ ವಿರೋಧ: ಬಲೂಚಿಸ್ತಾನವನ್ನು ಪಾಕ್ ಹಿಡಿತದಿಂದ ಮುಕ್ತಗೊಳಿಸುವಂತೆ ಒತ್ತಾಯಿಸಿ ನವಾಜ್ ಷರೀಫ್ರನ್ನು ಎಳೆದಾಡಿದ ಘಟನೆ ನಡೆದಿದೆ. ಯು.ಎಸ್.ಇನ್ಸ್ಟಿಟ್ಯೂಟ್ ಆಫ್ ಪೀಸ್‍ನಲ್ಲಿ  ಕಾರ್ಯಕ್ರಮಕ್ಕೆ ಆಗಮಿಸಿದ ವೇಳೆ ಗುಂಪೊಂರಲ್ಲಿದ್ದ ``ಒಸಾಮಾ ಬಿನ್ ಲಾಡೆನ್‍ನ ಸ್ನೇಹಿತ'', ``ಬಲೂಚಿಸ್ತಾನವನ್ನು ಮುಕ್ತಿಗೊಳಿಸಿ'' ಎಂದು ವ್ಯಕ್ತಿ ಸ್ಟೇಜ್‍ಗೆ ಬಂದು ಎಳೆದಾಡಿದ್ದಾನೆ.

ಲಷ್ಕರೆ ತಯ್ಬಾದ ವಿರುದ್ಧ
ಕ್ರಮ ಕೈಗೊಳ್ಳುವೆ ಎಂಬ ಪ್ರಧಾನಿ ನವಾಜ್ ಷರೀಫ್ ಹೇಳಿಕೆ ಭಾರತವನ್ನು ಸಂಪ್ರೀತಗೊಳಿಸಲು ನೀಡಿದಂಥದ್ದು. ಇದು ಕಾಶ್ಮೀರದ ಮುಸ್ಲಿಮರ ಭಾವನೆಯನ್ನು ನೋಯಿಸಲಿದೆ. ಕಾಶ್ಮೀರಿಗಳ ಸ್ವಾತಂತ್ರ್ಯ ಹೋರಾಟದ ದೃಷ್ಟಿಯಿಂದ ಈ ಹೇಳಿಕೆ ಸರಿಯಲ್ಲ.
-ಅಬ್ದುಲ್ಲಾ ಗಝ್ನವಿ, ಲಷ್ಕರೆ ತಯ್ಬಾ ವಕ್ತಾರ

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಸಮಸ್ತ ಜನರಿಗೆ ಸುಗಮ ಆಡಳಿತ, ಶುದ್ಧ ನೀರಿನ ಪೂರೈಕೆ: ಸ್ವಚ್ಚತೆ- ಸಂಚಾರ ವ್ಯವಸ್ಥೆಗೆ ಸಿಎಂ ಸಿದ್ದರಾಮಯ್ಯ ಕಟ್ಟಪ್ಪಣೆ

ಸಿದ್ದರಾಮಯ್ಯ ಮೇಲೆ ತೂಗುಗತ್ತಿ: ಅಧಿಕಾರದಲ್ಲಿ ಉಳಿಯಲು ಸಂಪುಟ ಪುನಾರಚನೆ ಕಸರತ್ತು; ಬಿಹಾರ-ಕೇರಳ ಚುನಾವಣೆಯತ್ತ ಡಿಕೆಶಿ ಚಿತ್ತ!

ವೀರೇಂದ್ರ ಪಪ್ಪಿ ಕರ್ಮಕಾಂಡ ನೋಡುತ್ತಿದ್ದರೆ CM- DCM ಇನ್ಯಾವ ಪರಿ ಲೂಟಿ ಮಾಡಿ ಹೈಕಮಾಂಡ್ ಗೆ ಕಪ್ಪ ನೀಡುತ್ತಿರಬೇಡಾ?

ಈ ಬಾರಿ ನಾನು ಸಚಿವನಾಗುವ ಭರವಸೆ ಇದೆ: ಸಂಪುಟ ವಿಸ್ತರಣೆಯೇ ನವೆಂಬರ್ ಕ್ರಾಂತಿಯಿರಬಹುದು; ಸಲೀಂ ಅಹ್ಮದ್

BDA ಯೋಜನಾ ಪ್ರಾಧಿಕಾರದ ಜವಾಬ್ದಾರಿ ಹಸ್ತಾಂತರ: GBA ವಿರೋಧಿಸುವವರು ಪಾಲಿಕೆ ಚುನಾವಣೆ ಬಹಿಷ್ಕರಿಸಲಿ; ಡಿಕೆಶಿ ಸವಾಲು

SCROLL FOR NEXT