ಸನ್ನಿ ಲಿಯೋನ್ ಮತ್ತು ಅತುಲ್ ಕುಮಾರ್ ಅಂಜನ್(ಸಂಗ್ರಹ ಚಿತ್ರ) 
ದೇಶ

ಸನ್ನಿ ಲಿಯೋನ್ ಕಾಂಡೋಮ್ ಜಾಹಿರಾತಿನಿಂದ ಅತ್ಯಾಚಾರ ಹೆಚ್ಚಳ: ಅಂಜನ್ ಕುಮಾರ್

ರಾಜಕೀಯ ನಾಯಕರು ವಿವಾದಾತ್ಮಕ ಹೇಳಿಕೆ ನೀಡಿ ಸುದ್ದಿಯಾಗುವುದು ಮಾಮೂಲಿ. ಅದಕ್ಕೆ ಈಗ ಹೊಸ ಸೇರ್ಪಡೆ ಎಡಪಕ್ಷದ...

ನವದೆಹಲಿ: ರಾಜಕೀಯ ನಾಯಕರು ವಿವಾದಾತ್ಮಕ ಹೇಳಿಕೆ ನೀಡಿ ಸುದ್ದಿಯಾಗುವುದು ಮಾಮೂಲಿ. ಅದಕ್ಕೆ ಈಗ ಹೊಸ ಸೇರ್ಪಡೆ ಎಡಪಕ್ಷದ ನಾಯಕ ಅತುಲ್ ಕುಮಾರ್ ಅಂಜನ್.  
ಮಾದಕ ನಟಿ ಸನ್ನಿ ಲಿಯೋನ್ ಳ ಕಾಂಡೋಮ್ ಜಾಹಿರಾತಿನಿಂದ ಭಾರತದಲ್ಲಿ ಅತ್ಯಾತಾರ ಸಂಖ್ಯೆ ಜಾಸ್ತಿಯಾಗಲಿದೆ ಎಂದು ಇವರು ಹೇಳಿರುವುದು ವಿವಾದಕ್ಕೆ ಕಾರಣವಾಗಿದೆ.

"ಸನ್ನಿ ಲಿಯೋನ್ ಎಂಬ ಹೆಸರಿನ ಮಹಿಳೆಯಿದ್ದಾಳೆ. ಅವಳು ವಯಸ್ಕರಿಗೆ ಸಂಬಂಧಪಟ್ಟ ನಗ್ನ ಚಿತ್ರದ ನಾಯಕಿ'' ಎಂದು ಉತ್ತರ ಪ್ರದೇಶದ ಗಾಜಿಪುರ್ ಜಿಲ್ಲೆಯಲ್ಲಿ ಸಾರ್ವಜನಿಕ ರ್ಯಾಲಿಯನ್ನುದ್ದೇಶಿಸಿ ಮಾತನಾಡುವಾಗ ಭಾರತೀಯ ಕಮ್ಯುನಿಸ್ಟ್ ಪಕ್ಷದ ಈ ನಾಯಕ ಹೇಳಿದ್ದಾರೆ.ಅವರು ನಗ್ನ ಚಿತ್ರದ ಬಗ್ಗೆ ರ್ಯಾಲಿಯಲ್ಲಿ ಮಾತನಾಡಿರುವುದು ಅಶ್ಲೀಲಕರವಾಗಿತ್ತು ಎಂಬ ಅಭಿಪ್ರಾಯ ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿದೆ.

ಸನ್ನಿ ಲಿಯೋನ್ ಕಾಂಡೋಮ್ ಜಾಹೀರಾತಿನಲ್ಲಿ ಕಾಣಿಸಿಕೊಂಡಿರುವುದರಿಂದ ಮತ್ತು ಆ ಜಾಹೀರಾತು ಮಾಧ್ಯಮಗಳಲ್ಲಿ ಪ್ರಸಾರವಾಗುತ್ತಿದ್ದರೆ ಜನರು ತಪ್ಪು ದಾರಿಗಿಳಿಯುತ್ತಾರೆ. ಅತ್ಯಾಚಾರಕ್ಕೆ ಈ ಜಾಹಿರಾತು ಎಡೆಮಾಡಿಕೊಡುತ್ತದೆ ಎಂದು ಹೇಳಿದ್ದಾರೆ.

''ತಾವು ಈ ಹಿಂದೆ ಒಂದೇ ಒಂದು ಸಲವೂ ಪೋರ್ನ್ ಸಿನಿಮಾಗಳನ್ನು ವೀಕ್ಷಿಸಿರಲಿಲ್ಲ. ಆದರೆ ಇತ್ತೀಚೆಗೆ ಒಂದು ಪೋರ್ನ್ ಸಿನಿಮಾ ನೋಡಿದಾಗ, ಕೇವಲ ಎರಡು ನಿಮಿಷದಲ್ಲಿಯೇ ವಾಂತಿ ಬರುವಂತಾಯಿತು. ಅಷ್ಟು ಕೆಟ್ಟದಾಗಿತ್ತು ಎಂದು ಹೇಳಿದರು.

ಇತ್ತೀಚೆಗೆ ಸಮಾಜವಾದಿ ಮುಖಂಡ ಮುಲಾಯಂ ಸಿಂಗ್ ಯಾದವ್, ಒಬ್ಬ ಹುಡುಗಿ ಮೇಲೆ ನಾಲ್ವರು ಹುಡುಗಿಯರು ಅತ್ಯಾಚಾರ ಮಾಡಲು ಸಾಧ್ಯವಿಲ್ಲ, ಅತ್ಯಾಚಾರಕ್ಕೆ ಹುಡುಗಿಯರೇ ಕಾರಣ ಎಂದು ಹೇಳಿಕೆ ನೀಡಿ ವಿವಾದ ಎಬ್ಬಿಸಿದ್ದರು. ಇತ್ತೀಚೆಗೆ ಸಂಸತ್ತಿನಲ್ಲಿ ಮಹಿಳೆಯರ ಭದ್ರತೆ ಕುರಿತು ಚರ್ಚಿಸುವಾಗ ಸಂಯುಕ್ತ ಜನತಾದಳದ ಮುಖಂಡ ಶರದ್ ಯಾದವ್, 'ನಮ್ಮಲ್ಲಿ ಯಾರು ಹುಡುಗಿಯರ ಹಿಂದೆ ಹೋಗದೆ ಬಾಕಿ ಉಳಿದಿಲ್ಲ '' ಎಂದು ಕೇಳಿ ವಿವಾದಕ್ಕೆ ಕಾರಣವಾಗಿದ್ದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಉಕ್ರೇನ್ ವಿರುದ್ಧ ರಷ್ಯಾದ ದೀರ್ಘಕಾಲ ಸಂಘರ್ಷಕ್ಕೆ ಭಾರತವೇ ಕಾರಣ, ಇದು 'ಮೋದಿ ಯುದ್ಧ': White House ವ್ಯಾಪಾರ ಸಲಹೆಗಾರ ಪೀಟರ್ ನವರೊ

ಅಮೆರಿಕದ ಸುಂಕ: ಜವಳಿ ವಲಯದ ಒತ್ತಡ ಕಡಿಮೆ ಮಾಡಲು 40 ಪ್ರಮುಖ ಆಮದು ದೇಶ ಗುರುತು

ಭೀಕರ ಮಳೆಗೆ ಜಮ್ಮು-ಕಾಶ್ಮೀರ ತತ್ತರ: ಸಾವಿನ ಸಂಖ್ಯೆ 41ಕ್ಕೆ ಏರಿಕೆ; ಕೇಂದ್ರದಿಂದ ನೆರವಿನ ಭರವಸೆ; ಮುಂದುವರೆದ ರಕ್ಷಣಾ ಕಾರ್ಯಾಚರಣೆ

ಭಾರತದ ಮೇಲೆ ಅಮೆರಿಕಾ ಸುಂಕಾಸ್ತ್ರ: ದೇಶ ರಕ್ಷಿಸುವಲ್ಲಿ ಪ್ರಧಾನಿ ಮೋದಿ ವಿಫಲ; AICC ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ವಾಗ್ದಾಳಿ

ಜಮ್ಮು-ಕಾಶ್ಮೀರದ ಬಂಡಿಪೋರಾದಲ್ಲಿ ಗುಂಡಿನ ಚಕಮಕಿ: ಇಬ್ಬರು ಉಗ್ರರ ಹತ್ಯೆ

SCROLL FOR NEXT