ಜನತಾ ಪರಿವಾರದ ಮುಖಂಡರು 
ದೇಶ

ಮಹಾ ಮೈತ್ರಿ ಭಿನ್ನಾಭಿಪ್ರಾಯ; ಮುಲಾಯಂ ಮನವೊಲಿಸಲು ಶರದ್, ಲಾಲು ವಿಫಲ

ಜನತಾ ಪರಿವಾರದ ಜೊತೆ ಆಂತರಿಕ ಭಿನ್ನಾಭಿಪ್ರಾಯಗಳನ್ನು ಕಾಂಗ್ರೆಸ್ ಪಕ್ಷ ಕೂಡ ಬದಿಗಿಟ್ಟಿರುವಾಗ, ಈ ಮೈತ್ರಿಯಿಂದ ಸಮಾಜವಾದಿ ಪಕ್ಷ ಹೊರಬರುವುದಾಗಿ ಘೋಷಿಸಿರುವ ಪಕ್ಷದ ಮುಖಂಡ

ನವದೆಹಲಿ: ಜನತಾ ಪರಿವಾರದ ಜೊತೆ ಆಂತರಿಕ ಭಿನ್ನಾಭಿಪ್ರಾಯಗಳನ್ನು ಕಾಂಗ್ರೆಸ್ ಪಕ್ಷ ಕೂಡ ಬದಿಗಿಟ್ಟಿರುವಾಗ, ಈ ಮೈತ್ರಿಯಿಂದ ಸಮಾಜವಾದಿ ಪಕ್ಷ ಹೊರಬರುವುದಾಗಿ ಘೋಷಿಸಿರುವ ಪಕ್ಷದ ಮುಖಂಡ ಮುಲಾಯಂ ಸಿಂಗ್ ಯಾದವ್ ಅವರನ್ನು ಮನವೊಲಿಸಲು ಶುಕ್ರವಾರ ಜೆಡಿಯು ಅಧ್ಯಕ್ಷ ಶರದ್ ಯಾದವ್ ಮತ್ತು ಆರ್ ಜೆ ಡಿ ಅಧ್ಯಕ್ಷ ಲಾಲು ಪ್ರಸಾದ್ ಯಾದವ್ ಇನ್ನಿಲ್ಲದಂತೆ ಪ್ರಯತ್ನಿಸಿದರೂ, ಮುಲಾಯಂ ಯಾವುದಕ್ಕೂ ಮಣಿದಿಲ್ಲ ಎಂದು ತಿಳಿದುಬಂದಿದೆ.

"ಮಾತು ಮಾತು ಮಾತು" ಎಂದಷ್ಟೇ ಸಭೆಯ ನಂತರ ಹೇಳಿದ ಶರದ್ ಯಾದವ್, ಸಭೆ ಫಲಪ್ರದವಾಗದೆ ಇದ್ದಿದ್ದನ್ನು ಸೂಚಿಸಿದ್ದಾರೆ.

ಮುಲಾಯಂ ಅವರು ತಮ್ಮ ರಾಜಕಾರಣದಲ್ಲಿ ಹಲವಾರು ಯು-ಟರ್ನ್ ಗಳನ್ನು ತೆಗೆದುಕೊಂಡಿದ್ದಾರೆ ಆದರೆ ನಿತೀಶ್ ಕುಮಾರ್ ಕನಸು ಕಂಡಷ್ಟೇ ಜನತಾ ಪರಿವಾರದ ವಿಲೀನ ಅವರ ಕನಸಿನ ಕೂಸಾಗಿತ್ತು ಕೂಡ. ಅಲ್ಲದೆ ನಿತೀಶ್ ಮತ್ತು ಲಾಲು ಮಧ್ಯೆ ಇದ್ದ ಭಿನ್ನಾಭಿಪ್ರಾಯಗಳನ್ನು ಸರಿ ಪಡಿಸಿ ಮಹಾ ಮೈತ್ರಿಗೆ ಸಹಾಯ ಮಾಡಿದವರೇ ಅವರು.

ಆದರೆ ಇದು ಮುಲಾಯಂ ಅವರ ಕುಟುಂಬ ಸದಸ್ಯರ ವಿರೋಧವನ್ನು ಆಕರ್ಷಿಸಿತ್ತು ಎಂದು ತಿಳಿದುಬಂದಿದೆ. ಸಹೋದರ ಶಿವಪಾಲ್ ಯಾದವ್ (ಉತ್ತರಪ್ರದೇಶದ ಸಚಿವ) ಮತ್ತು ದಾಯಾದಿ ರಾಮ್ ಗೋಪಾಲ್ ಯಾದವ್ ಇದಕ್ಕೆ ವಿರೋಧ ವ್ಯಕ್ತಪಡಿಸಿದ್ದರು ಎನ್ನಲಾಗಿದೆ. ಆಳದೆ ಸಿಬಿಐ ಕೇಸುಗಳ ಕೈವಾಡವೂ ಇದರಲ್ಲಿದೆ ಎನ್ನಲಾಗಿದೆ.

ಆದರೆ ಅಧಿಕೃತವಾಗಿ, ಈ ಮೈತ್ರಿ ಕಾಂಗ್ರೆಸ್ ಪಕ್ಷಕ್ಕೆ ೪೦ ಸ್ಥಾನಗಳನ್ನು ನೀಡಿ ಸಮಾಜವಾದಿ ಪಕ್ಷಕ್ಕೆ ಕೇವಲ ೫ ಕ್ಷೇತ್ರಗಳನ್ನು ನೀಡಿದ್ದು ಈ ಮೈತ್ರಿ ಮುರಿಯಲು ಕಾರಣ ಎಂದು ಹೇಳಲಾಗಿದೆ.

ಮುಲಾಯಂ ಸಿಂಗ್ ಯಾದವ್ ಅವರು ಬಿಜೆಪಿ ಗಾಳಕ್ಕೆ ಬೀಳುತ್ತಿದ್ದಾರೆ ಎಂದು ಹೇಳಲಾಗುತ್ತಿದೆ. ಅವರು ಪ್ರಧಾನಿ ನರೇಂದ್ರ ಮೋದಿ ಅಂಟ್ಟು ಅಮಿತ್ ಷಾ ಅವರನ್ನು ಕಳೆದ ಸೋಮವಾರ ಭೇಟಿಯಾಗಿದ್ದಾರೆ ಎನ್ನಲಾಗುತ್ತಿತ್ತು. ಆದರೆ ಇದರ ಬಗ್ಗೆ ಪ್ರತಿಕ್ರಿಯಿಸಲು ಶರದ್ ಯಾದವ್ ನಿರಾಕರಿಸಿದ್ದು ಎಲ್ಲ ಭಿನ್ನಾಭಿಪ್ರಾಯಗಳು ಬಗೆಹರಿಯಲಿವೆ ಎಂದಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಅಮೆರಿಕ ನಿಯೋಜಿತ ರಾಯಭಾರಿ ಸೆರ್ಗಿಯೊ ಗೋರ್- ಮೋದಿ, ಜೈಶಂಕರ್ ಭೇಟಿ; Tariff ಒತ್ತಡದ ನಡುವೆ ಭಾರತ-ಅಮೆರಿಕ ಸಂಬಂಧ ಸುಧಾರಣೆಯ ಸೂಚನೆ?

ಅಫ್ಘಾನಿಸ್ತಾನ ನಮ್ಮೊಂದಿಗೆ ಗಡಿ ಹಂಚಿಕೊಂಡಿರುವ ನೆರೆ ರಾಷ್ಟ್ರ- S Jaishankar; ಭಾರತದೊಂದಿಗೆ POK ವಿಲೀನದ ಸುಳಿವು; ಚೀನಾಗೂ ಶಾಕ್!

ಅಬ್ಬಬ್ಬಾ ರೋಮಾಂಚನ: ಅದ್ಭುತ ಸೃಷ್ಟಿಸಿದ ರಿಷಬ್ ಶೆಟ್ಟಿಗೆ ರಾಷ್ಟ್ರಪ್ರಶಸ್ತಿ ಕೊಡಲೇಬೇಕು - ತಮಿಳು ನಿರ್ದೇಶಕ ಅಟ್ಲೀ

Pakistan: ಇಸ್ರೇಲ್ ವಿರೋಧಿ ಪ್ರತಿಭಟನಾ ಜಾಥಾ, ಪೋಲೀಸರ ಗುಂಡೇಟಿಗೆ 11 ಮಂದಿ ಬಲಿ! Video

ಉತ್ತರ ಪ್ರದೇಶಕ್ಕೆ ಭೇಟಿ ನೀಡಿದ ತಾಲಿಬಾನ್ ಸಚಿವನಿಗೆ ಅದ್ಧೂರಿ ಸ್ವಾಗತ, ಸರ್ಕಾರದ ಭದ್ರತೆ; ಯೋಗಿಗೆ ನಾಚಿಕೆಯಾಗಬೇಕು- SP ಸಂಸದ ಶಫೀಕರ್

SCROLL FOR NEXT