ದೇಶ

ಸೆ.9 -13 ವರೆಗೆ ಭಾರತ- ಪಾಕ್ ಬಿಎಸ್ಎಫ್ ಮಹಾನಿರ್ದೇಶಕರ ಸಭೆ

ಭಾರತ-ಪಾಕಿಸ್ತಾನ ಮಹಾನಿರ್ದೇಶಕರ ನಡುವಿನ ಸಭೆ 9 -13 ವರೆಗೆ ನಡೆಯಲಿದೆ. ದೇವೇಂದ್ರ ಕುಮಾರ್ ಪಾಠಕ್ ನೇತೃತ್ವದಲ್ಲಿ ಭಾರತದ ಬಿಎಸ್ಎಫ್ ಪಡೆ ಸಭೆಯಲ್ಲಿ ಭಾಗವಹಿಸಲಿದೆ.

ನವದೆಹಲಿ: ಜಮ್ಮು-ಕಾಶ್ಮೀರದಲ್ಲಿ ಪದೇ ಪದೇ ನಡೆಯುತ್ತಿರುವ ಕದನ ವಿರಾಮ ಉಲ್ಲಂಘನೆ, ಕಚ್ಛ್ ನ ರಣ್ ಪ್ರದೇಶದಲ್ಲಿ ನಡೆಯುತ್ತಿರುವ ಒಳನುಸುಳುವಿಕೆ ವಿಷಯಗಳು ಸೆ.9 ರಂದು ನಡೆಯಲಿರುವ ಭಾರತ-ಪಾಕಿಸ್ತಾನ ನಡುವಿನ ಗಡಿ ಭದ್ರತಾ ಪಡೆ ಮಹಾನಿರ್ದೇಶಕರುಗಳ ಸಭೆಯಲ್ಲಿ ಚರ್ಚೆಯಾಗಲಿವೆ.

ಪಾಕಿಸ್ತಾನ ರೇಂಜರ್ ಮಹಾನಿರ್ದೇಶಕ ಉಮರ್ ಫಾರೂಕ್ ಬುಕಾರಿ ನೇತೃತ್ವದ 16 ಸದಸ್ಯರ ನಿಯೋಗ ಅಟ್ಟಾರಿ- ವಾಘ ಗಡಿ ಮೂಲಕ ಪಂಜಾಬ್ ಗೆ ಪ್ರಯಾಣ ಬೆಳೆಸಲಿದ್ದು ಭಾರತದ ಬಿಎಸ್ಎಫ್ ನಿರ್ದೇಶಕರೊಂದಿಗೆ ಮಾತುಕತೆ ನಡೆಸಲಿದ್ದಾರೆ. ಮಹಾನಿರ್ದೇಶಕರ ನಡುವಿನ ಸಭೆ 9 -13 ವರೆಗೆ ನಡೆಯಲಿದೆ. ದೇವೇಂದ್ರ ಕುಮಾರ್ ಪಾಠಕ್ ನೇತೃತ್ವದಲ್ಲಿ ಭಾರತದ ಬಿಎಸ್ಎಫ್ ಪಡೆ ಸಭೆಯಲ್ಲಿ ಭಾಗವಹಿಸಲಿದೆ.

ಗುಜರಾತ್ ನ ಕಚ್ಛ್ ನಲ್ಲಿರುವ ಹರಾಮಿ ನಲ್ಲಹ್ ಪ್ರದೇಶದಲ್ಲಿ ಒಳನುಸುಳುವಿಕೆ, ಕಳ್ಳಸಾಗಣೆ ನಡೆಯುತ್ತಿರುವುದು ಚರ್ಚೆಗೆ ಬರುವ ಪ್ರಮುಖ ವಿಷಯಗಳೆಂದು ನಿರೀಕ್ಷಿಸಲಾಗಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಭಾರತದ ಮೇಲೆ ಶೇ.50 ರಷ್ಟು ಸುಂಕಾಸ್ತ್ರ ಜಾರಿ: ಕೊನೆಗೆ ಒಟ್ಟಿಗೆ ಸೇರ್ತಿವಿ! US ಖಜಾನೆ ಮುಖ್ಯಸ್ಥ ಹಿಂಗ್ಯಾಕಂದ್ರು?

ಸಶಸ್ತ್ರ ಪಡೆಗಳು ಮುಂದಿನ ಭದ್ರತಾ ಸವಾಲುಗಳಿಗೆ ಸಿದ್ಧರಾಗಿರಬೇಕು: ರಾಜನಾಥ್ ಸಿಂಗ್

ಹಿಂದೂ ನಂಬಿಕೆ ಒಡೆಯುತ್ತಿರುವ ಬಾನು ಮುಷ್ತಾಕ್: ಶಿವನ ಬೆಟ್ಟವನ್ನೇ 'ಯೇಸು ಬೆಟ್ಟ' ಮಾಡಲು ಹೊರಟವರಿಂದ ಧರ್ಮದ ಪಾಠ ಬೇಡ- ಪ್ರತಾಪ್ ಸಿಂಹ

2030 Commonwealth Games: ಭಾರತದ ಬಿಡ್‌ಗೆ ಕೇಂದ್ರ ಸಂಪುಟ ಅನುಮೋದನೆ! ಅಹಮದಾಬಾದ್ ನಲ್ಲಿ ಆಯೋಜಿಸುವ ಪ್ರಸ್ತಾಪ!

'ಡೆವಿಲ್‌' ಸಿನಿಮಾದ '‘ಇದ್ರೆ ನೆಮ್ಮದಿಯಾಗ್ ಇರ್ಬೇಕ್' ಹಾಡಿಗೆ ಭರ್ಜರಿ ಸ್ಟೆಪ್ ಹಾಕಿದ ವಿನೋದ್ ರಾಜ್! Video

SCROLL FOR NEXT