ಸಾಂದರ್ಭಿಕ ಚಿತ್ರ 
ದೇಶ

ದನದ ಮಾಂಸ ಅನಾರೋಗ್ಯಕರ ಎಂದು ಕುರಾನ್ ಹೇಳಿಲ್ಲ: ಶಾಹಿದ್ ಸಿದ್ದಿಕಿ

ದನದ ಮಾಂಸ ಆರೋಗ್ಯಕ್ಕೆ ಹಾನಿಕರ ಎಂದಿರುವ ಗುಜರಾತ್ ಸರ್ಕಾರದ ಪವಿತ್ರ ಕುರಾನ್ ಪೀಠದ ಹೇಳಿಕೆಯನ್ನು ಮಂಗಳವಾರ ಮಾಜಿ ಸಂಸದ ಶಾಹಿದ್ ಸಿದ್ದಕಿ

ನವದೆಹಲಿ: ದನದ ಮಾಂಸ ಆರೋಗ್ಯಕ್ಕೆ ಹಾನಿಕರ ಎಂದಿರುವ ಗುಜರಾತ್ ಸರ್ಕಾರದ ಪವಿತ್ರ ಕುರಾನ್ ಪೀಠದ ಹೇಳಿಕೆಯನ್ನು ಮಂಗಳವಾರ ಮಾಜಿ ಸಂಸದ ಶಾಹಿದ್ ಸಿದ್ದಕಿ ಅಲ್ಲಗೆಳೆದಿದ್ದಾರೆ.

"ನನಗೆ ತಿಳಿದಿರುವ ಪ್ರಕಾರ ಪವಿತ್ರ ಕುರಾನ್ ಈ ರೀತಿಯದ್ದು ಏನೂ ಹೇಳಿಲ್ಲ. ಅದು ಬೇರೆ ವಿಷಯ, ಪುರಾತನ ಮುಸ್ಲಿಮರು, ಹಸುವನ್ನು ಕೊಲ್ಲುವುದು ಇತರ ಜನರ ಭಾವನೆಗಳಿಗೆ ಧಕ್ಕೆ ತಂದರೆ ಕೊಲ್ಲುವುದು ಬೇಡ ಎಂದಿದ್ದರು" ಎಂದು ಸಿದ್ದಿಕಿ ತಿಳಿಸಿದ್ದಾರೆ.

ನೆನ್ನೆ ಗುಜರಾತಿನ ಮುಖ್ಯಮಂತ್ರಿ ಆನಂದಿಬೇನ್ ಪಟೇಲ್ ಮತ್ತು ಇಸ್ಲಾಮಿಕ್ ಚಿಹ್ನೆ ಅರ್ಧ ಚಂದ್ರ ಹೊತ್ತ ಭಿತ್ತಿಚಿತ್ರಗಳು ಅಹಮದಾಬಾದಿನ ಪ್ರದೇಶಗಳಲ್ಲಿ ರಾರಾಜಿಸಿದ್ದವು. ಇವುಗಳಲ್ಲಿ ಹಸುಗಳನ್ನು ರಕ್ಷಿಸುವ ಕುರಾನಿನ ಹೇಳಿಕೆಗಳನ್ನು, ಗೋ ಸೇವಾ ಮತ್ತು ಗೋಚಾರ ವಿಕಾಸ ಪೀಠ, ಗುಜರಾತ್ ಸರ್ಕಾರ ಎಂಬ ಹೆಸರಿನಲ್ಲಿ ಬರೆಯಲಾಗಿತ್ತು.

"ಅಕ್ರಾಮುಲ್ ಬಕ್ರಾ ಫೈನಹ ಸೈಯೇದುಲ್ ಬಹೈಮ" ಅಂದರೆ "ಹಸುಗಳಿಗೆ ಗೌರವ ತೋರಿಸಿ, ಎಕೆಂದರ ಅವುಗಳು ಎಲ್ಲ ಜಾನುವಾರುಗಳ ಮುಂದಾಳುಗಳು. ಹಸುವಿನ ಹಾಲು, ತುಪ್ಪ ಮತ್ತು ಮಜ್ಜಿಗೆಯಲ್ಲಿ ಆರೋಗ್ಯಕರ ಅಂಶಗಳಿವೆ ಮತ್ತು ಅದರ ಮಾಂಸದಿಂದ ಹಲವಾರು ರೋಗಗಳು ಬರುತ್ತವೆ" ಎಂದು ಭಿತ್ತಿಚಿತ್ರಗಳಲ್ಲಿ ಬರೆಯಲಾಗಿತ್ತು.

ಆದರೆ ಪವಿತ್ರ ಕುರಾನಿನಲ್ಲಿ ಹಸುಗಳ ಬಗ್ಗೆ ಹೇಳಲಾಗಿದೆ ಎಂದು ಸಿದ್ದಿಕಿ ತಿಳಿಸಿದ್ದಾರೆ. "ಹಾಲು ನೀಡುವ ಪ್ರಾಣಿಗಳನ್ನು ಕೊಲ್ಲಬಾರದು ಎಂದು ಕುರಾನ್ ತಿಳಿಸುತ್ತದೆ" ಎಂದು ಸಿದ್ದಿಕಿ ತಿಳಿಸಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಜಮ್ಮುವಿನಾದ್ಯಂತ ಭಾರಿ ಮಳೆ: ಅಪಾರ ಪ್ರಮಾಣದ ಹಾನಿ, 10 ಮಂದಿ ಸಾವು: ಕೊಚ್ಚಿ ಹೋದ ರಸ್ತೆ, ಸೇತುವೆಗಳು!

ಫೈಟರ್ ಜೆಟ್‌ ಇಂಜಿನ್ ಖರೀದಿ: ಅಮೆರಿಕಾದ GE ಸಂಸ್ಥೆಯೊಂದಿಗೆ $1 ಬಿಲಿಯನ್ ಮೊತ್ತದ ಒಪ್ಪಂದಕ್ಕೆ ಭಾರತ ಸಿದ್ಧತೆ!

ಡಿಕೆಶಿ ಕ್ಷಮೆ ಕೇಳಬಾರದಿತ್ತು; ಮುಲಾಜಿಲ್ಲದೆ ಕಾಂಗ್ರೆಸ್ ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ಬಿಸಾಕಬೇಕಿತ್ತು- ಆರ್. ಅಶೋಕ್

ಸುಂಕ ಸಮರ: Trump 4 ಬಾರಿ ಕರೆ ಮಾಡಿದರೂ ಉತ್ತರಿಸದ PM Modi; ಅಮೆರಿಕ ನಿಯೋಗಕ್ಕೂ No Entry!

SCROLL FOR NEXT