ಮಹೇಶ್ ಶರ್ಮಾ 
ದೇಶ

ಹಿಂದೂ ಗ್ರಂಥಕ್ಕೆ ಕುರಾನ್, ಬೈಬಲ್ ಸಮವಲ್ಲ

ಕುರಾನ್ ಆಗಲೀ, ಬೈಬಲ್ ಆಗಲೀ ಹಿಂದೂ ಧರ್ಮ ಗ್ರಂಥಗಳಿಗೆ ಸಮನಾದುದಲ್ಲ. ಹಾಗಾಗಿ ಶಾಲೆಗಳಲ್ಲಿ ರಾಮಾಯಣ, ಮಹಾಭಾರತ ಮತ್ತು ಭಗವದ್ಗೀತೆಯನ್ನು...

ನವದೆಹಲಿ: ಕುರಾನ್ ಆಗಲೀ, ಬೈಬಲ್ ಆಗಲೀ ಹಿಂದೂ ಧರ್ಮ ಗ್ರಂಥಗಳಿಗೆ ಸಮನಾದುದಲ್ಲ. ಹಾಗಾಗಿ ಶಾಲೆಗಳಲ್ಲಿ ರಾಮಾಯಣ, ಮಹಾಭಾರತ ಮತ್ತು ಭಗವದ್ಗೀತೆಯನ್ನು ಕಡ್ಡಾಯಗೊಳಿಸಬೇಕು. ಇಂತಹುದೊಂದು ವಿವಾದಾತ್ಮಕ ಹೇಳಿಕೆ ನೀಡಿದ್ದು ಕೇಂದ್ರ ಸಂಸ್ಕೃತಿ ಮತ್ತು ಪ್ರವಾಸೋದ್ಯಮ ಖಾತೆ ಸಹಾಯಕ ಸಚಿವ, ಬಿಜೆಪಿ ನಾಯಕ ಮಹೇಶ್ ಶರ್ಮಾ. ಸೋಮವಾರ ಇಂಡಿಯಾ ಟುಡೇಗೆ ನೀಡಿದ ಸಂದರ್ಶನದಲ್ಲಿ ಅವರು ಈ ಹೇಳಿಕೆ ನೀಡಿದ್ದಾರೆ.

``ನಾನು ಕುರಾನ್ ಮತ್ತು ಬೈಬಲ್ ಅನ್ನು ಗೌರವಿಸುತ್ತೇನೆ. ಆದರೆ, ಅವುಗಳು ಹಿಂದೂ ಗ್ರಂಥಗಳಾದ ರಾಮಾಯಣ, ಮಹಾ ಭಾರತ, ಗೀತೆಗೆ ಸಮವಾಗಲಾರದು. ಭಾರತದ ಸಂಸ್ಕೃತಿ ಸಚಿವನಾಗಿ ನಾನು ಶಾಲಾ ಪಠ್ಯದಲ್ಲಿ ಹಿಂದೂ ಗ್ರಂಥಗಳನ್ನು ಕಡ್ಡಾಯಗೊಳಿಸುವಂತೆ ಕೇಳಿಕೊಳ್ಳುತ್ತೇನೆ. ಈ ವಿಷಯದಲ್ಲಿ ಮುಂದುವರಿಯುವ ಸಲುವಾಗಿ ಎಚ್ ಆರ್‍ಡಿ ಸಚಿವೆ ಸ್ಮೃತಿ ಇರಾನಿ ಅವರೊಂದಿಗೆ ನಿರಂತರ ಮಾತುಕತೆ ನಡೆಸುತ್ತಿದ್ದೇನೆ'' ಎಂದೂ ಶರ್ಮಾ ಹೇಳಿದ್ದಾರೆ.

ನವರಾತ್ರಿಗೂ ಮಾಂಸ ನಿಷೇಧ: ಜೈನರ ಪರ್ಯುಶಾನ್ ಮಾತ್ರವಲ್ಲ, ನವರಾತ್ರಿಯ ಸಂದರ್ಭದಲ್ಲೂ 9 ದಿನಗಳ ಕಾಲ ಮಾಂಸ ಮಾರಾಟಕ್ಕೆ ನಿಷೇಧ ಹೇರಬೇಕು ಎಂದೂ ಹೇಳಿದ್ದಾರೆ ಶರ್ಮಾ. ಬಿಜೆಪಿ ಆಡಳಿತವಿರುವ ಅನೇಕ ರಾಜ್ಯಗಳು ಮಾಂಸ ನಿಷೇಧದ ಬಿಸಿ ಅನುಭವಿಸುತ್ತಿರುವ ನಡುವೆಯೇ ಅವರು ಈ ಹೇಳಿಕೆ ನೀಡಿದ್ದಾರೆ.

ಜತೆಗೆ, ಕೆಲವರು ಮಾಡುವ ತ್ಯಾಗ ದಿಂದ ಒಂದು ಸಮುದಾಯದವರ ಧಾರ್ಮಿಕ ಭಾವನೆಗಳನ್ನು ಗೌರವಿಸಿ ದಂತಾಗುವುದಾದರೆ, ಮಾಂಸ ನಿಷೇಧ ತಪ್ಪೇನಲ್ಲ ಎಂದೂ ಅವರು ಅಭಿಪ್ರಾಯಪಟ್ಟಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಭಾರತದ ಮೇಲೆ ಶೇ.50 ರಷ್ಟು ಸುಂಕಾಸ್ತ್ರ ಜಾರಿ: ದಿನದ ಕೊನೆಗೆ ಒಟ್ಟಿಗೆ ಸೇರ್ತಿವಿ! US ಖಜಾನೆ ಮುಖ್ಯಸ್ಥರು ಹಿಂಗ್ಯಾಕಂದ್ರು?

ಸಶಸ್ತ್ರ ಪಡೆಗಳು ಮುಂದಿನ ಭದ್ರತಾ ಸವಾಲುಗಳಿಗೆ ಸಿದ್ಧರಾಗಿರಬೇಕು: ರಾಜನಾಥ್ ಸಿಂಗ್

ಹಿಂದೂ ನಂಬಿಕೆ ಒಡೆಯುತ್ತಿರುವ ಬಾನು ಮುಷ್ತಾಕ್: ಶಿವನ ಬೆಟ್ಟವನ್ನೇ 'ಯೇಸು ಬೆಟ್ಟ' ಮಾಡಲು ಹೊರಟವರಿಂದ ಧರ್ಮದ ಪಾಠ ಬೇಡ- ಪ್ರತಾಪ್ ಸಿಂಹ

2030 Commonwealth Games: ಭಾರತದ ಬಿಡ್‌ಗೆ ಕೇಂದ್ರ ಸಂಪುಟದ ಅನುಮೋದನೆ! ಅಹಮದಾಬಾದ್ ನಲ್ಲಿ ಆಯೋಜಿಸುವ ಪ್ರಸ್ತಾಪ!

ಡೆವಿಲ್‌' ಸಿನಿಮಾದ 'ಇದ್ರೆ ನೆಮ್ಮದಿಯಾಗಿ ಇರಬೇಕು' ಹಾಡಿಗೆ ಭರ್ಜರಿ ಸ್ಟೆಪ್ ಹಾಕಿದ ವಿನೋದ್ ರಾಜ್! Video

SCROLL FOR NEXT