ವಾರಾಣಸಿ: ಬಡತನ ನಿರ್ಮೂಲನೆಯೇ ಕೇಂದ್ರ ಸರ್ಕಾರದ ಮೊದಲ ಆದ್ಯತೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ವಾರಾಣಸಿಗೆ ಭೇಟಿ ನೀಡಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ದೇಶದ ಯುವ ನಾಗರಿಕರು ಬಡತನದಲ್ಲಿರಬಾರದು, ಯಾವುದೇ ಪರಿಸ್ಥಿತಿ ಇರಲಿ ನಿಮ್ಮ ಮಕ್ಕಳಿಗೆ ಮೊದಲು ಶಿಕ್ಷಣ ನೀಡಿ ಎಂದು ಪ್ರಧಾನಿ ಮೋದಿ ವಾರಾಣಸಿ ಜನತೆಗೆ ಕರೆ ನೀಡಿದ್ದಾರೆ. ಬಡತನ ನಿರ್ಮೂಲನೆ ಮಾಡಲು ಶಿಕ್ಷಣದಿಂದ ಮಾತ್ರ ಸಾಧ್ಯ ಎಂದು ಮೋದಿ ಅಭಿಪ್ರಾಯಪಟ್ಟಿದ್ದಾರೆ.
ಇದೇ ವೇಳೆ ಇ-ರಿಕ್ಷಾಗಳನ್ನು ವಿತರಣೆ ಮಾಡಿದ ಪ್ರಧಾನಿ ನರೇಂದ್ರ ಮೋದಿ, ವಾರಾಣಸಿಗೆ ಪ್ರವಾಸಿಗರು ಬಂದರೆ ಮೊದಲು ಮಾತನಾಡಿಸುವುದು ಆಟೋ ರಿಕ್ಷಾದವರನ್ನು. ಇ- ರಿಕ್ಷಾಗಳಿಂದ ವಾರಾಣಸಿಯ ಭವಿಷ್ಯ ಬದಲಾಗಲಿದೆ ಎಂದು ಮೋದಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ತಮ್ಮ ಲೋಕಸಭಾ ಕ್ಷೇತ್ರದ ಭೇಟಿ ವೇಳೆ ಮೋದಿ 602 ಕುಟುಂಬಗಳಿಗೆ ಜನ್ ಧನ್ ಯೋಜನೆಯ ಪ್ಯಾಕೇಜ್ ಗಳನ್ನು ವಿತರಿಸಲಿದ್ದಾರೆ.