ಲಂಕಾ ನೌಕಾಪಡೆಯಿಂದ ಭಾರತೀಯ ಮೀನುಗಾರರ ಬಂಧನ (ಸಂಗ್ರಹ ಚಿತ್ರ) 
ದೇಶ

ಲಂಕಾ ನೌಕಾಪಡೆಯಿಂದ 15 ಮಂದಿ ಭಾರತೀಯ ಮೀನುಗಾರರ ಬಂಧನ

ಶ್ರೀಲಂಕಾಗೆ ಸೇರಿದ ಸಮುದ್ರ ಪ್ರದೇಶದಲ್ಲಿ ಅಕ್ರಮವಾಗಿ ಮೀನುಗಾರಿಕೆ ನಡೆಸುತ್ತಿದ್ದರು ಎಂಬ ಆರೋಪದ ಮೇರೆಗೆ ಶ್ರೀಲಂಕಾದ ನೌಕಾಪಡೆ 15 ಮಂದಿ ಭಾರತೀಯ ಮೀನುಗಾರರನ್ನು ಬಂಧಿಸಿದೆ.

ರಾಮೇಶ್ವರಂ: ಶ್ರೀಲಂಕಾಗೆ ಸೇರಿದ ಸಮುದ್ರ ಪ್ರದೇಶದಲ್ಲಿ ಅಕ್ರಮವಾಗಿ ಮೀನುಗಾರಿಕೆ ನಡೆಸುತ್ತಿದ್ದರು ಎಂಬ ಆರೋಪದ ಮೇರೆಗೆ ಶ್ರೀಲಂಕಾದ ನೌಕಾಪಡೆ 15 ಮಂದಿ ಭಾರತೀಯ  ಮೀನುಗಾರರನ್ನು ಬಂಧಿಸಿದೆ.

ಭಾರತ-ಶ್ರೀಲಂಕಾ ನಡುವಿನ ಅಂತಾರಾಷ್ಟ್ರೀಯ ಸಮುದ್ರ ಗಡಿ ಪ್ರದೇಶ ಕಚ್ಚಾತೀವು ಬಳಿಯಲ್ಲಿ ಮೀನುಗಾರರನ್ನು ಬಂಧಿಸಿರುವ ಕುರಿತು ಮಾಹಿತಿ ಲಭ್ಯವಾಗಿದ್ದು, ಮೀನುಗಾರರು ನಡೆಸುತ್ತಿದ್ದ 2  ಬೋಟ್ ಗಳ ಅನ್ನು ಕೂಡ ಲಂಕಾ ನೌಕಾಪಡೆ ವಶಕ್ಕೆ ಪಡೆದಿದ್ದಾರೆ. ಬಂಧಿತರೆಲ್ಲರೂ ಅಕ್ಕರೈಪೇಟ್ಟೈ ಮತ್ತು ನಾಗಪಟ್ಟಣಂಗೆ ಸೇರಿದವರು ಎನ್ನಲಾಗುತ್ತಿದ್ದು, ಎಲ್ಲ 15 ಮಂದಿ ಮೀನುಗಾರರನ್ನು  ಪ್ರಸ್ತುತ ಕಾಂಗೇಸುಂತುರೈನಲ್ಲಿನ ಜೈಲಿಗೆ ರವಾನಿಸಲಾಗಿದೆ ಎಂದು ಎಂದು ತಿಳಿದುಬಂದಿದೆ.

ಮತ್ತೊಂದು ಪ್ರಕರಣದಲ್ಲಿ ಕಳೆದ ಸೋಮವಾರ ರಾತ್ರಿ ಕಚ್ಚಾತೀವು ಬಳಿ ಮೀನುಗಾರಿಕೆ ನಡೆಸುತ್ತಿದ್ದ ಸುಮಾರು 60 ಬೋಟ್ ಗಳ ಮೀನುಗಾರಿಕಾ ನೆಟ್ ಗಳು ಮತ್ತು ಇತರೆ ವಸ್ತುಗಳನ್ನು  ಲಂಕಾದ ನೌಕಾಪಡೆಯ ಸಿಬ್ಬಂದಿ ನಾಶ ಮಾಡಿದ್ದಲ್ಲದೇ ಅವುಗಳನ್ನು ಸಮುದ್ರಕ್ಕೆ ಎಸೆದಿದ್ದಾರೆ ಎಂದು ತಿಳಿದುಬಂದಿದೆ.

ಇನ್ನು ಈ ಬಗ್ಗೆ ಮಾತನಾಡಿರುವ ಸ್ಥಳೀಯ ಮೀನುಗಾರರ ಸಂಘದ ಒಕ್ಕೂಟದ ಮುಖಂಡರಾದ ಎಸ್.ಎಮೆರಿಟ್ ಮತ್ತು ಸಗಾಯರಾಜು ಅವರು, "ಕಚ್ಚಾತೀವು ಪ್ರದೇಶದಲ್ಲಿ ಮೀನುಗಾರಿಕೆ  ನಡೆಸುತ್ತಿದ್ದ ಮೀನುಗಾರಿಕಾ ಬೋಟ್ ಅನ್ನು ಲಂಕಾದ ನೌಕಾಪಡೆ ಅಕ್ರಮವಾಗಿ ಬೆನ್ನಟ್ಟಿತು. ಈ ವೇಳೆ ಒಂದು ಬೋಟ್ ನೀರಿನಲ್ಲಿ ಮುಳುಗಿತು. ಜೊತೆಗಿದ್ದ ಬೋಟ್ ನ ಸಹಾಯದಿಂದ  ಅದರಲ್ಲಿದ್ದ 5 ಮಂದಿ ಮೀನುಗಾರರನ್ನು ರಕ್ಷಿಸಲಾಯಿತು".

"ಲಂಕಾ ನೌಕಾಪಡೆಯ ಸಿಬ್ಬಂದಿ ಮೀನುಗಾರರಿಗೆ ಗನ್ ತೋರಿಸಿ ಕಚ್ಚಾತೀವು ಪ್ರದೇಶದಲ್ಲಿ ಮೀನುಗಾರಿಕೆ ನಡೆಸದಂತೆ ಬೆದರಿಕೆ  ಹಾಕುತ್ತಿದ್ದಾರೆ. ಅಲ್ಲದೆ ನಮ್ಮ ಸುಮಾರು 60 ಬೋಟ್ ಗಳಲ್ಲಿನ ಮೀನುಗಾರಿಕಾ ನೆಟ್ ಗಳು ಮತ್ತು ಇತರೆ ಸಲಕರಣೆಗಳನ್ನು ನಾಶ ಮಾಡಿ ಸಮುದ್ರಕ್ಕೆ ಎಸೆದಿದ್ದಾರೆ. ಇದರಿಂದಾಗಿ  ಭಯಬೀತರಾದ ನಮ್ಮ ಮೀನುಗಾರರು ಯಾವುದೇ ಮೀನುಗಳನ್ನು ತರದೇ ಖಾಲಿ ಕೈಯಲ್ಲಿ ವಾಪಸಾಗಿದ್ದಾರೆ" ಎಂದು ಆರೋಪಿಸಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

'ಸದನದಲ್ಲಿ ಹುಲಿ, ಹೈಕಮಾಂಡ್‌ ಮುಂದೆ ಇಲಿ'.. 'ಅಧಿಕಾರದಲ್ಲಿ ಉಳಿಯಲು DK Shivakumar ಕ್ಷಮೆಯಾಚನೆ': BJP-JDS ಟೀಕಾ ಪ್ರಹಾರ!

RSS ಅನ್ನು ಯಾರೂ "ಸಮರ್ಥಿಸಿಕೊಳ್ಳಬಾರದು": ಡಿಕೆಶಿ ಕ್ಷಮೆಯಾಚನೆ ಸ್ವಾಗತಿಸಿದ ಬಿ.ಕೆ ಹರಿಪ್ರಸಾದ್

ಸುಪ್ರೀಂ ಕೋರ್ಟ್‌ಗೆ ನ್ಯಾ. ಪಾಂಚೋಲಿ ಹೆಸರು ಶಿಫಾರಸು: ನ್ಯಾ. ಬಿ. ವಿ. ನಾಗರತ್ನ ತೀವ್ರ ಅಸಮಾಧಾನ!

ಶಿಬು ಸೊರೇನ್ 'ರಾಜ್ಯದ ಪಿತಾಮಹ' ಎಂದು ಘೋಷಿಸುವಂತೆ ಜೆಎಂಎಂ ಆಗ್ರಹ

SCROLL FOR NEXT