ನವದೆಹಲಿ: ಕೇಂದ್ರ ಸರ್ಕಾರದ ಜಾಹೀರಾತುಗಳು ಸುಪ್ರೀಂ ಕೋರ್ಟ್ನ ನಿಯಮಗಳನ್ನು ಉಲ್ಲಂಘಿಸುತ್ತಿವೆಯೇ? ಎಂಬುದನ್ನು ಪರಿಶೀಲಿಸುವುದಕ್ಕಾಗಿ ಕೇಂದ್ರ ಸರ್ಕಾರ ತ್ರಿಸದಸ್ಯ ಸಮಿತಿಯೊಂದನ್ನು ರೂಪಿಸಿದೆ. ಈ ಸಮಿತಿಯ ನೇತೃತ್ವವನ್ನು ಚುನಾವಣಾ ಆಯೋಗದ ಮಾಜಿ ಆಯುಕ್ತ ಬಿಬಿ ಟಂಡನ್ ವಹಿಸಲಿದ್ದಾರೆ.
ಟಂಡನ್ ನೇತೃತ್ವದ ಸಮಿತಿಯಲ್ಲಿ ಇಂಡಿಯಾ ಟಿವಿಯ ಮುಖ್ಯಸ್ಥ ರಜತ್ ಶರ್ಮಾ ಮತ್ತು ಒ ಗಿಲ್ವೀ ಆ್ಯಂಡ್ ಮಾಥೆರ್ನ ಎಕ್ಸಿಕ್ಯೂಟಿವ್ ಚೇರ್ಮೆನ್ ಪೀಯುಶ್ ಪಾಂಡೆ ಇದ್ದಾರೆ.
2015 ಮೇ 13ರಂದು ಸುಪ್ರೀಂ ಕೋರ್ಟ್, ಸರ್ಕಾರಿ ಜಾಹೀರಾತುಗಳಲ್ಲಿ ರಾಷ್ಟ್ರಪತಿ,ಪ್ರಧಾನಿ ಹಾಗೂ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳ ಚಿತ್ರಗಳನ್ನು ಬಳಸಬಹುದು ಎಂದು ಆದೇಶ ನೀಡಿತ್ತು. ಆದಾಗ್ಯೂ, ಇತ್ತೀಚೆಗೆ ಈ ಆದೇಶವನ್ನು ಮಾರ್ಪಾಡುಗೊಳಿಸಿದ್ದ ಕೋರ್ಟ್ ಇಂಥಾ ಜಾಹೀರಾತುಗಳಲ್ಲಿ ಕೇಂದ್ರ ಸಚಿವರು, ಮುಖ್ಯಮಂತ್ರಿಗಳು, ರಾಜ್ಯ ಸಚಿವರುಗಳು ಮತ್ತು ರಾಜ್ಯಪಾಲರ ಚಿತ್ರಗಳನ್ನೂ ಬಳಸುವುದಕ್ಕೆ ಅನುಮತಿ ನೀಡಿತ್ತು.
ಈ ಸಮಿತಿಯು ಮಾಹಿತಿ ಹಾಗೂ ಪ್ರಸಾರ ಸಚಿವಾಲಯಕ್ಕೆ ಅಥವಾ ಇಲಾಖೆ ಕೈಗೊಳ್ಳಬೇಕಾದ ಸೂಕ್ತ ಕ್ರಮಗಳ ಬಗ್ಗೆ ಶಿಫಾರಸು ಮಾಡಬಹುದಾಗಿದೆ.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos