ನೀರು ಪೂರೈಸುವ ರೈಲು 
ದೇಶ

ಬರಪೀಡಿತ ಲಾತೂರ್‌ಗೆ ರೈಲು ಮೂಲಕ ಶುದ್ಧ ಜಲ

ಮಹಾರಾಷ್ಟ್ರದ ಬರ ಪೀಡಿತ ಪ್ರದೇಶವಾದ ಲಾತೂರ್‌ಗೆ ರೈಲು ಮೂಲಕ ಶುದ್ಧ ಜಲ ಪೂರೈಸಲಾಗಿದೆ. ಮಹಾರಾಷ್ಟ್ರದ ಮರಾಠ್‌ವಾಡಾ ಪ್ರದೇಶದಲ್ಲಿರುವ...

ಮುಂಬೈ: ಮಹಾರಾಷ್ಟ್ರದ ಬರ ಪೀಡಿತ ಪ್ರದೇಶವಾದ ಲಾತೂರ್‌ಗೆ  ರೈಲು ಮೂಲಕ ಶುದ್ಧ ಜಲ ಪೂರೈಸಲಾಗಿದೆ. 
ಮಹಾರಾಷ್ಟ್ರದ ಮರಾಠ್‌ವಾಡಾ ಪ್ರದೇಶದಲ್ಲಿರುವ ಲಾತೂರ್ ಮತ್ತು ಸುತ್ತಮುತ್ತಲಿನ ಪ್ರದೇಶಗಳು ಭೀಕರ ಬರಗಾಲದಿಂದ ಕಂಗೆಟ್ಟಿವೆ. ಈ ಬಾರಿ ಇಲ್ಲಿಗೆ 15 ದಿನಗಳಿಗೊಮ್ಮೆ ಮುನ್ಸಿಪಾಲಿಟಿ ನೀರು ಪೂರೈಕೆ ಮಾಡುತ್ತಿರುವುದಿಂದ ಜನರು ಕುಡಿಯುವ ನೀರಿಗೆ ಪರದಾಟ ಮಾಡುತ್ತಿದ್ದಾರೆ.
ಇದನ್ನು ಮನಗಂಡ ಮಹಾ ಸರ್ಕಾರ ಭಾರತೀಯ ರೈಲ್ವೆಯ ಸಹಯೋಗದೊಂದಿಗೆ ರೈಲಿನಲ್ಲಿ ನೀರು ಸಾಗಿಸುವ ಕಾರ್ಯವನ್ನು ಹಮ್ಮಿ ಕೊಂಡಿದೆ. ಮಂಗಳವಾರ ಬೆಳಗ್ಗೆ  5 ಲಕ್ಷ ಲೀಟರ್‌ನ್ನು ಹೊತ್ತ ರೈಲು ಲಾತೂರ್ ತಲುಪಿದೆ. 
ನೀರು ಹೊತ್ತು ತಂದ ವಾಟರ್ ಟ್ರೈನ್‌ನಲ್ಲಿ 10 ಟ್ಯಾಂಕರ್‌ಗಳಿದ್ದು, ಪ್ರತೀ ಟ್ಯಾಂಕರ್‌ನಲ್ಲಿ 50,000 ಲೀಟರ್ ನೀರು ಸರಬರಾಜು ಮಾಡಲಾಗುತ್ತದೆ.
ಪಶ್ಚಿಮ ಮಹಾರಾಷ್ಟ್ರದ ಸಾಂಗ್ಲಿ ಜಿಲ್ಲೆಯ ಮಿರಾಜ್ ನಿಂದ ಈ ಕುಡಿನೀರನ್ನು ಲಾತೂರ್‌ಗೆ ಸರಬರಾಜು ಮಾಡಲಾಗುತಿದ್ದು, ಪ್ರಸ್ತುತ ನಗರಕ್ಕೆ ಪ್ರತಿ ದಿನ  20 ಮಿಲಿಯನ್ ಲೀಟರ್ ನೀರಿನ ಅಗತ್ಯವಿದೆ.
ಇನ್ನು ಮುಂದಿನ ರೈಲು ಏಪ್ರಿಲ್ 15 ಕ್ಕೆ ಲಾತೂರ್‌ಗೆ ನೀರು ಪೂರೈಸಲಿದೆ ಎಂದು ಅಧಿಕೃತರು ಹೇಳಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

'ಸದನದಲ್ಲಿ ಹುಲಿ, ಹೈಕಮಾಂಡ್‌ ಮುಂದೆ ಇಲಿ'.. 'ಅಧಿಕಾರದಲ್ಲಿ ಉಳಿಯಲು DK Shivakumar ಕ್ಷಮೆಯಾಚನೆ': BJP-JDS ಟೀಕಾ ಪ್ರಹಾರ!

RSS ಅನ್ನು ಯಾರೂ "ಸಮರ್ಥಿಸಿಕೊಳ್ಳಬಾರದು": ಡಿಕೆಶಿ ಕ್ಷಮೆಯಾಚನೆ ಸ್ವಾಗತಿಸಿದ ಬಿ.ಕೆ ಹರಿಪ್ರಸಾದ್

ಸುಪ್ರೀಂ ಕೋರ್ಟ್‌ಗೆ ನ್ಯಾ. ಪಾಂಚೋಲಿ ಹೆಸರು ಶಿಫಾರಸು: ನ್ಯಾ. ಬಿ. ವಿ. ನಾಗರತ್ನ ತೀವ್ರ ಅಸಮಾಧಾನ!

ಶಿಬು ಸೊರೇನ್ 'ರಾಜ್ಯದ ಪಿತಾಮಹ' ಎಂದು ಘೋಷಿಸುವಂತೆ ಜೆಎಂಎಂ ಆಗ್ರಹ

SCROLL FOR NEXT