ದೇಶ

ಹೈದರಾಬಾದ್ ಮೃಗಾಲಯದಿಂದ ಕರಡಿ ಪರಾರಿ

Vishwanath S

ಹೈದರಾಬಾದ್: ಹೈದರಾಬಾದ್ ನೆಹರೂ ಝೂಲಾಜಿಕಲ್ ಪಾರ್ಕ್ ನಿಂದ ಕಳೆದ ರಾತ್ರಿ ಕರಡಿ ಪರಾರಿಯಾಗಿದ್ದು, ಬಹದೂರ್ ಪುರದ ಸ್ಥಳೀಯರಲ್ಲಿ ಆತಂಕ ಸೃಷ್ಟಿಯಾಗಿದೆ.

ಪಾರ್ಕ್ ನ ಆವರಣದಿಂದ ಕರಡಿ ಪರಾರಿಯಾಗುತ್ತಿದ್ದಂತೆ ಕರಡಿ ಮೇಲ್ವಿಚಾರಕ ಕೂಡಲೇ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಕೂಡಲೇ ಎಚ್ಚೆತ ಝೂನ ಅಧಿಕಾರಿಗಳು ಪಶುವೈದ್ಯರ ತಂಡದೊಂದಿಗೆ ಕಾರ್ಯಾಚರಣೆ ಕೈಗೊಂಡಿದರು. ಕಳೆದ ರಾತ್ರಿಯಲ್ಲಾ ಕಾರ್ಯಾಚರಣೆ ನಡೆಸಿದರು ಕರಡಿ ಪತ್ತೆಯಾಗಿಲ್ಲ.

ಇಂತಹ ಪ್ರಕರಣಗಳು ತೀರ ಅಪರೂಪ. ಕಳೆದ ಆಗಸ್ಟ್ ನಲ್ಲಿ ಹುಲಿಯೊಂದು ಪರಾರಿಯಾಗಿತ್ತು. ಕೂಡಲೇ ಅಧಿಕಾರಿಗಳು ಝೂಗೆ ಭೇಟಿ ನೀಡಿದ್ದವರನ್ನು ಸ್ಥಳಾಂತರಿಸಿದ್ದರು. ನಂತರ ಹುಲಿಯನ್ನು ಸೆರೆ ಹಿಡಿದಿದ್ದರು.

SCROLL FOR NEXT