ದೇಶ

ತೆಲಂಗಾಣ: ಪಿಂಚಣಿಗಾಗಿ ನಾಲಿಗೆ ಕತ್ತರಿಸಿಕೊಂಡ ಹಿರಿಯ ನಾಗರಿಕ

Lingaraj Badiger
ಹೈದರಾಬಾದ್: ಪಿಂಚಣಿಗಾಗಿ ಅಲೆದು ಅಲೆದು ಸುಸ್ತಾಗಿದ್ದ ಹಿರಿಯ ನಾಗರಿಕರೊಬ್ಬರು ತೆಲಂಗಾಣ ಸಚಿವಾಲಯದ ಸಿ ಬ್ಲಾಕ್ ನಲ್ಲಿ ಸಚಿವಾಲಯ ಸಿಬ್ಬಂದಿ ಮತ್ತು ಇತರರ ಮುಂದೆಯೇ ತಮ್ಮ ನಾಲಿಗೆ ಕಟ್ ಮಾಡಿಕೊಂಡು ಆಕ್ರೋಶ ವ್ಯಕ್ತಪಡಿಸಿದ ಘಟನೆ ಮಂಗಳವಾರ ನಡೆದಿದೆ.
ಇಂದು ಮಧ್ಯಾಹ್ನ 4.30ರ ಸುಮಾರಿಗೆ ಜೀದಿಮೆತ್ಲಾದ ಸುರರಾಮ್ ಗ್ರಾಮದ ನಿವಾಸಿ ರಾಜು ಎಂಬುವವರು ಸಚಿವಾಲಯದ ಕಟ್ಟಡದ ಬಳಿ ಬ್ಲೇಡ್ ನಿಂದ ತಮ್ಮ ನಾಲಿಗೆ ಕತ್ತರಿಸಿಕೊಂಡಿದ್ದಾರೆ. ಕೂಡಲೇ ಅವರನ್ನು ಪೊಲೀಸರು ಸಮೀಪದ ಆಸ್ಪತ್ರೆಗೆ ದಾಖಲಿಸಿದ್ದಾರೆ.
ರಾಜು ಅವರು ವಿಕಲಚೇತನರಾಗಿದ್ದು, ತಮ್ಮ ಪಿಂಚಣಿ ಹಣಕ್ಕಾಗಿ ಹಲವು ದಿನಗಳಿಂದ ಅಲೆಯುತ್ತಿದ್ದರು ಎನ್ನಲಾಗಿದೆ. ಈ ಸಂಬಂಧ ಸೈಫಾಬಾದ್ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ನಡೆಸುತ್ತಿದ್ದಾರೆ.
SCROLL FOR NEXT