ಪ್ರಭಾಕರನ್ 
ದೇಶ

ಎಲ್ ಟಿಟಿಇ ಪ್ರಭಾಕರನ್ ಬಂಟ ಗೋಪಾಲಸ್ವಾಮಿ 'ರಾ'ಏಜೆಂಟ್ : ಪುಸ್ತಕ

ಎಲ್ ಟಿಟಿ ಇ ಮುಖ್ಯಸ್ಥ ವೇಲುಪಿಳ್ಳೈ ಪ್ರಭಾಕರನ್ ಬಂಟ ಹಾಗೂ ಎಲ್​ಟಿಟಿಇ ನಾಯಕ ಗೋಪಾಲಸ್ವಾಮಿ ಮಹೇಂದ್ ರಾಜಾ ಅಲಿಯಾಸ್ ...

ನವದೆಹಲಿ: ಎಲ್ ಟಿಟಿ ಇ ಮುಖ್ಯಸ್ಥ ವೇಲುಪಿಳ್ಳೈ ಪ್ರಭಾಕರನ್ ಬಂಟ ಹಾಗೂ ಎಲ್​ಟಿಟಿಇ ನಾಯಕ ಗೋಪಾಲಸ್ವಾಮಿ ಮಹೇಂದ್ ರಾಜಾ ಅಲಿಯಾಸ್  ಮಹತ್ತಾಯ ಭಾರತದ ಸಂಶೋಧನೆ ಮತ್ತು ವಿಶ್ಲೇಷಣಾ ವಿಭಾಗದ (ಆರ್​ಎಡಬ್ಲ್ಯೂ- ರಾ) ಏಜೆಂಟನಾಗಿದ್ದ ಎಂಬ ಮಾಹಿತಿಯನ್ನು ಪುಸ್ತಕವೊಂದು ಬಹಿರಂಗ ಪಡಿಸಿದೆ.

ಮಾಜಿ ಪ್ರಧಾನಿ ರಾಜೀವ ಗಾಂಧಿ ಹತ್ಯೆಯಾಗುವುದಕ್ಕೆ ಕೆಲ ಕ್ಷಣಗಳ ಮುನ್ನ ಸಂದರ್ಶನ ನಡೆಸಿದ್ದ ಪತ್ರಕರ್ತೆ ನೀನಾ ಗೋಪಾಲ್ ಅವರು ತಮ್ಮ ‘ಅಸಾಸಿನೇಷನ್ ಆಫ್ ರಾಜೀವ ಗಾಂಧಿ’ (ಪೆಂಗ್ವಿನ್) ಪುಸ್ತಕದಲ್ಲಿ ಈ ವಿಚಾರವನ್ನು ದಾಖಲಿಸಿದ್ದಾರೆ.

ಮಹತ್ತಾಯನನ್ನು 1989ರಷ್ಟು ಹಿಂದೆಯೇ ‘ರಾ’ ಏಜೆಂಟ್ ಆಗಿ ನೇಮಕ ಮಾಡಿ ಪ್ರಭಾಕರನ್ ಬಳಿಗೆ ಕಳುಹಿಸಲಾಗಿತ್ತು. ಬಂಡಾಯ ಚಳವಳಿಯನ್ನು ಒಳಗಿಂದೊಳಗೇ ತನ್ನ ಕೈಗೆ ತೆಗೆದುಕೊಂಡು ಪ್ರಭಾಕರನ್​ನನ್ನು ಮುಗಿಸಿ ಎಲ್​ಟಿಟಿಇ ಸಂಘಟನೆಯನ್ನು ಕೈವಶ ಮಾಡಿಕೊಳ್ಳುವ ಕೆಲಸವನ್ನು ಈತನಿಗೆ ವಹಿಸಲಾಗಿತ್ತು’ ಎಂದು ನೀನಾ ಗೋಪಾಲ್ ಬರೆದಿದ್ದಾರೆ.

ನಂತರ ಗೋಪಾಲ್ ರಾ ಏಜೆಂಟ್ ಎಂಬ ವಿಷಯ ಪ್ರಭಾಕರನ್ ಗೆ ತಿಳಿದು ಅವರನ್ನು ಹತ್ಯೆ ಮಾಡಲಾಯಿತು ಎಂದು ಹೇಳಲಾಗಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಗ್ರೇಟರ್ ಬೆಂಗಳೂರು ಪ್ರಾಧಿಕಾರ ಚುನಾವಣೆ ಜೂನ್ 30ರೊಳಗೆ ಮುಗಿಸಿ: ರಾಜ್ಯ ಸರ್ಕಾರಕ್ಕೆ 'ಸುಪ್ರೀಂ' ಗಡುವು

'ಆ ದೇಶಕ್ಕೂ ನಾನೇ 'ಹಂಗಾಮಿ' ಸರ್ವೋಚ್ಛ ನಾಯಕ': Donald Trump ಘೋಷಣೆ, ಬೆಚ್ಚಿಬಿದ್ದ ವೆನೆಜುವೆಲಾ!

ಕ್ರಿಕೆಟ್ ಇತಿಹಾಸದಲ್ಲೇ ಮೊದಲು: ಅಂತಾರಾಷ್ಟ್ರೀಯ ಕ್ರಿಕೆಟ್ ಲೀಗ್ ನಲ್ಲಿ ಜೊತೆಯಾಗಿ ಕಣಕ್ಕಿಳಿದ ಅಪ್ಪ-ಮಗ.. ಯಾರಿವರು?

PSLV-C62 ಮಿಷನ್ ವಿಫಲ: ಕೊನೆಯ ಹಂತದಲ್ಲಿ ಎದುರಾದ ಸಮಸ್ಯೆ, ISROಗೆ ಹಿನ್ನಡೆ

ಇತಿಹಾಸ ಕಲಿಯಬೇಕಿದ್ದರೆ ಕಾಲೇಜಿಗೆ ಹೋಗುತ್ತಾರೆ, ನಿಮ್ಮ ಬೋಧನೆಯ ಅಗತ್ಯವಿಲ್ಲ: ಪ್ರಧಾನಿ ಮೋದಿ ವಿರುದ್ಧ ಪ್ರಿಯಾಂಕ್ ಖರ್ಗೆ ವಾಗ್ದಾಳಿ

SCROLL FOR NEXT