ಆರ್.ಸಿ.ತಾಯಲ್ 
ದೇಶ

ಡಿಆರ್​ಡಿಓ ಕಚೇರಿಯಲ್ಲಿ ಬಾಂಬ್ ಪತ್ತೆ, ಎನ್​ಎಸ್​ಜಿಯಿಂದ ನಿಷ್ಕ್ರಿಯ!

ಭಾರಿ ಭದ್ರತೆ ಇರುವ ಭಾರತದ ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ(ಡಿಆರ್​ಡಿಓ) ಭವನದಲ್ಲೇ ಎರಡು ತಿಂಗಳ ಹಿಂದಷ್ಟೇ ಜೀವಂತ ಬಾಂಬ್...

ನವದೆಹಲಿ: ಭಾರಿ ಭದ್ರತೆ ಇರುವ ಭಾರತದ ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ(ಡಿಆರ್​ಡಿಓ) ಭವನದಲ್ಲೇ ಎರಡು ತಿಂಗಳ ಹಿಂದಷ್ಟೇ ಜೀವಂತ ಬಾಂಬ್ ಪತ್ತೆಯಾಗಿತ್ತು ಮತ್ತು ಅದನ್ನು ರಾಷ್ಟ್ರೀಯ ಭದ್ರತಾ ಸಿಬ್ಬಂದಿ(ಎನ್​ಎಸ್​ಜಿ) ನಿಷ್ಕ್ರಿಯಗೊಳಿಸಿದ್ದರು ಎಂದು ಎನ್​ಎಸ್​ಜಿ ಮುಖ್ಯಸ್ಥ ಆರ್ ಸಿ ತಾಯಲ್ ಮಂಗಳವಾರ ಹೇಳಿದ್ದಾರೆ. ಆದರೆ ಅದು ಪುರಾತನದ ಕಾಲದ ಬಾಂಬ್ ಮತ್ತು ಹಳೆ ಕಚೇರಿಯಲ್ಲಿ ಎಂದು ಹೇಳಿ ಅಚ್ಚರಿ ಮೂಡಿಸಿದರು.
ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಅವರು ಭಾಗವಹಿಸಿದ್ದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ತಾಯಲ್ ಅವರು, ಕೆಲ ತಿಂಗಳ ಹಿಂದೆ ನಡೆದ ಘಟನೆಯಲ್ಲಿ ಭಯೋತ್ಪಾದನೆ ನಿಗ್ರಹ ದಳವು ಸುಧಾರಿತ ಸ್ಪೋಟಕದ ಸಂಕಷ್ಟ ಕ್ಷಣದಿಂದ ಡಿಆರ್​ಡಿಓವನ್ನು ಪಾರು ಮಾಡಿತ್ತು ಎಂದು ಅವರು ಹೇಳಿದರು. 
ಇದೇ ವೇಳೆ ಎನ್​ಎಸ್​ಜಿ ಸಿಬ್ಬಂದಿಯ ಸಾಹಸ ಹೊಗಳಿದ ತಾಯಲ್ ಬೇರಾರಿಗೂ ಬಾಂಬ್ ನಿಷ್ಕ್ರಿಯಗೊಳಿಸಲು ಸಾಧ್ಯವಾಗದೇ ಹೋದಾಗ ಎನ್​ಎಸ್​ಜಿ ಬಾಂಬ್ ನಿಷ್ಕ್ರಿಯಗೊಳಿಸಿ ಸಾಹಸ ಮೆರೆದಿದೆ ಎಂದು ನುಡಿದರು.
ಈ ಸ್ಪೋಟಕ ಫಿರಂಗಿ ಸ್ಪೋಟವಾಗದೆ ಜೀವಂತವಾಗಿತ್ತು ಎಂದು ತಿಳಿಸಿರುವ ಎನ್​ಎಸ್​ಜಿ ಅಧಿಕಾರಿಗಳು, ದೆಹಲಿ ಮೆಟ್ರೋ ಕಾಮಗಾರಿ ಕೆಲಸಕ್ಕೆ ಡಿಆರ್​ಡಿಓ ಆವರಣದಲ್ಲಿ ನೆಲ ಅಗೆಯುತ್ತಿದ್ದಾಗ ಸ್ಪೋಟಕ ದೊರೆತಿತ್ತು. ಸ್ಥಳೀಯ ಪೊಲೀಸರು ಮತ್ತು ಬಾಂಬ್ ನಿಷ್ಕ್ರಿಯ ದಳದವರಿಗೆ ಅದನ್ನು ನಿಷ್ಕ್ರಿಯಗೊಳಿಸಲು ಸಾಧ್ಯವಾಗಲಿಲ್ಲ. ಆಗ ಎನ್​ಎಸ್​ಜಿ ಈ ಕೆಲಸ ಮಾಡಿತು ಎಂದು ಹೇಳಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಸುಂಕ ಸಮರ: Trump 4 ಬಾರಿ ಕರೆ ಮಾಡಿದರೂ ಉತ್ತರಿಸದ PM Modi; ಅಮೆರಿಕ ನಿಯೋಗಕ್ಕೂ No Entry!

'ಸದನದಲ್ಲಿ ಹುಲಿ, ಹೈಕಮಾಂಡ್‌ ಮುಂದೆ ಇಲಿ'.. 'ಅಧಿಕಾರದಲ್ಲಿ ಉಳಿಯಲು DK Shivakumar ಕ್ಷಮೆಯಾಚನೆ': BJP-JDS ಟೀಕಾ ಪ್ರಹಾರ!

ಸಂಭಾಲ್ ದೇವಸ್ಥಾನದಿಂದ ಸಾಯಿಬಾಬಾ ವಿಗ್ರಹಕ್ಕೆ ಗೇಟ್ ಪಾಸ್! ಗಂಗಾ ನದಿಯಲ್ಲಿ ವಿಸರ್ಜನೆ!

RSS ಅನ್ನು ಯಾರೂ "ಸಮರ್ಥಿಸಿಕೊಳ್ಳಬಾರದು": ಡಿಕೆಶಿ ಕ್ಷಮೆಯಾಚನೆ ಸ್ವಾಗತಿಸಿದ ಬಿ.ಕೆ ಹರಿಪ್ರಸಾದ್

SCROLL FOR NEXT