ಸ್ವಾಮಿ ಸ್ವರೂಪಾನಂದ ಸರಸ್ವತಿ 
ದೇಶ

ಹಿಂದೂಗಳಿಗೆ ಮಾತ್ರವಲ್ಲ, ಮುಸ್ಲಿಮರಿಗೂ ಗೋವು ಮಾತೆ: ಸ್ವಾಮಿ ಸ್ವರೂಪಾನಂದ

ಹಸು ಕೇವಲ ಹಿಂದೂಗಳಿಗೆ ಮಾತ್ರ ತಾಯಿಯಲ್ಲ, ಮುಸಲ್ಮಾನರಿಗೂ ಅದು ತಾಯಿ ಸಮಾನ ಎಂದು ದ್ವಾರಕಾ ಶಾರದಾ ಪೀಠದ ಶಂಕರಾಚಾರ್ಯ ಸ್ವಾಮಿ...

ಹರಿದ್ವಾರ: ಹಸು ಕೇವಲ ಹಿಂದೂಗಳಿಗೆ ಮಾತ್ರ ತಾಯಿಯಲ್ಲ, ಮುಸಲ್ಮಾನರಿಗೂ ಅದು ತಾಯಿ ಸಮಾನ ಎಂದು ದ್ವಾರಕಾ ಶಾರದಾ ಪೀಠದ ಮುಖ್ಯಸ್ಥ ಶಂಕರಾಚಾರ್ಯ ಸ್ವಾಮಿ ಸ್ವರೂಪಾನಂದ ಸರಸ್ವತಿ ಹೇಳಿದ್ದಾರೆ.

ಹಸುವಿನ ಹಾಲಿನಿಂದ ಹಿಂದೂಗಳಷ್ಟೇ ಮುಸ್ಲಿಮರು ಕೂಡ ಪ್ರೊಟೀನ್ ಪಡೆಯುತ್ತಾರೆ. ಹೀಗಾಗಿ ಹಸು ಮುಸ್ಲಿಮರಿಗೂ ಕೂಡ ತಾಯಿ ಸಮಾನವಾಗಿದೆ.

ಹಸುಗಳನ್ನು ಕೇವಲ ಹಿಂದೂಗಳು ಮಾತ್ರ ರಕ್ಷಿಸುತ್ತಾರೆ ಎಂಬುದು ವಿಷಯವಲ್ಲ, ದೇಶದ ವಿವಿಧ ಭಾಗಗಳಲ್ಲಿ ಗೋ ಹತ್ಯೆ ನಡೆಯುವುದನ್ನು ತಪ್ಪಿಸಲು ಏಕ ರೂಪವಾದ ಕಾನೂನು ಜಾರಿಗೆ ತರಬೇಕು ಎಂದು ಅವರು ಅಭಿಪ್ರಾಯ ಪಟ್ಟಿದ್ದಾರೆ.

ಗೋ ಹತ್ಯೆ ನಿಷೇಧಿಸುವಂತೆ ಈಗಾಗಲೇ ಸುಪ್ರಿಂ ಕೋರ್ಟ್ ನಲ್ಲಿ  ಹಲವು ಅರ್ಜಿಗಳು ಸಲ್ಲಿಕೆಯಾಗಿ, ಹಲವು ಬಾರಿ ತಿರಸ್ಕಾರಗೊಂಡಿವೆ ಎಂದು ಅವರು ತಿಳಿಸಿದ್ದಾರೆ.

ಹಸುವಿನ ಹಾಲಿನಿಂದ ಕೇವಲ ಪ್ರೋಟೀನ್ ಸಿಗುತ್ತದೆ ಎಂಬುದು ಮಾತ್ರವಲ್ಲದೇ ಹಸುವಿನ ಇತರ ಉತ್ಪನ್ನಗಳು ಹಲವು ರೀತಿಯಲ್ಲಿ ನಮ್ಮ ದೈನಂದಿನ ಜೀವನಕ್ಕೆ ಸಹಾಯವಾಗುತ್ತಿದೆ ಎಂದು ಹೇಳಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಜಮ್ಮುವಿನಾದ್ಯಂತ ಭಾರಿ ಮಳೆ: ಅಪಾರ ಪ್ರಮಾಣದ ಹಾನಿ, 10 ಮಂದಿ ಸಾವು: ಕೊಚ್ಚಿ ಹೋದ ರಸ್ತೆ, ಸೇತುವೆಗಳು!

ಫೈಟರ್ ಜೆಟ್‌ ಇಂಜಿನ್ ಖರೀದಿ: ಅಮೆರಿಕಾದ GE ಸಂಸ್ಥೆಯೊಂದಿಗೆ $1 ಬಿಲಿಯನ್ ಮೊತ್ತದ ಒಪ್ಪಂದಕ್ಕೆ ಭಾರತ ಸಿದ್ಧತೆ!

ಡಿಕೆಶಿ ಕ್ಷಮೆ ಕೇಳಬಾರದಿತ್ತು; ಮುಲಾಜಿಲ್ಲದೆ ಕಾಂಗ್ರೆಸ್ ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ಬಿಸಾಕಬೇಕಿತ್ತು- ಆರ್. ಅಶೋಕ್

ಸುಂಕ ಸಮರ: Trump 4 ಬಾರಿ ಕರೆ ಮಾಡಿದರೂ ಉತ್ತರಿಸದ PM Modi; ಅಮೆರಿಕ ನಿಯೋಗಕ್ಕೂ No Entry!

SCROLL FOR NEXT