ಸ್ವಾಮಿ ಸ್ವರೂಪಾನಂದ ಸರಸ್ವತಿ 
ದೇಶ

ಹಿಂದೂಗಳಿಗೆ ಮಾತ್ರವಲ್ಲ, ಮುಸ್ಲಿಮರಿಗೂ ಗೋವು ಮಾತೆ: ಸ್ವಾಮಿ ಸ್ವರೂಪಾನಂದ

ಹಸು ಕೇವಲ ಹಿಂದೂಗಳಿಗೆ ಮಾತ್ರ ತಾಯಿಯಲ್ಲ, ಮುಸಲ್ಮಾನರಿಗೂ ಅದು ತಾಯಿ ಸಮಾನ ಎಂದು ದ್ವಾರಕಾ ಶಾರದಾ ಪೀಠದ ಶಂಕರಾಚಾರ್ಯ ಸ್ವಾಮಿ...

ಹರಿದ್ವಾರ: ಹಸು ಕೇವಲ ಹಿಂದೂಗಳಿಗೆ ಮಾತ್ರ ತಾಯಿಯಲ್ಲ, ಮುಸಲ್ಮಾನರಿಗೂ ಅದು ತಾಯಿ ಸಮಾನ ಎಂದು ದ್ವಾರಕಾ ಶಾರದಾ ಪೀಠದ ಮುಖ್ಯಸ್ಥ ಶಂಕರಾಚಾರ್ಯ ಸ್ವಾಮಿ ಸ್ವರೂಪಾನಂದ ಸರಸ್ವತಿ ಹೇಳಿದ್ದಾರೆ.

ಹಸುವಿನ ಹಾಲಿನಿಂದ ಹಿಂದೂಗಳಷ್ಟೇ ಮುಸ್ಲಿಮರು ಕೂಡ ಪ್ರೊಟೀನ್ ಪಡೆಯುತ್ತಾರೆ. ಹೀಗಾಗಿ ಹಸು ಮುಸ್ಲಿಮರಿಗೂ ಕೂಡ ತಾಯಿ ಸಮಾನವಾಗಿದೆ.

ಹಸುಗಳನ್ನು ಕೇವಲ ಹಿಂದೂಗಳು ಮಾತ್ರ ರಕ್ಷಿಸುತ್ತಾರೆ ಎಂಬುದು ವಿಷಯವಲ್ಲ, ದೇಶದ ವಿವಿಧ ಭಾಗಗಳಲ್ಲಿ ಗೋ ಹತ್ಯೆ ನಡೆಯುವುದನ್ನು ತಪ್ಪಿಸಲು ಏಕ ರೂಪವಾದ ಕಾನೂನು ಜಾರಿಗೆ ತರಬೇಕು ಎಂದು ಅವರು ಅಭಿಪ್ರಾಯ ಪಟ್ಟಿದ್ದಾರೆ.

ಗೋ ಹತ್ಯೆ ನಿಷೇಧಿಸುವಂತೆ ಈಗಾಗಲೇ ಸುಪ್ರಿಂ ಕೋರ್ಟ್ ನಲ್ಲಿ  ಹಲವು ಅರ್ಜಿಗಳು ಸಲ್ಲಿಕೆಯಾಗಿ, ಹಲವು ಬಾರಿ ತಿರಸ್ಕಾರಗೊಂಡಿವೆ ಎಂದು ಅವರು ತಿಳಿಸಿದ್ದಾರೆ.

ಹಸುವಿನ ಹಾಲಿನಿಂದ ಕೇವಲ ಪ್ರೋಟೀನ್ ಸಿಗುತ್ತದೆ ಎಂಬುದು ಮಾತ್ರವಲ್ಲದೇ ಹಸುವಿನ ಇತರ ಉತ್ಪನ್ನಗಳು ಹಲವು ರೀತಿಯಲ್ಲಿ ನಮ್ಮ ದೈನಂದಿನ ಜೀವನಕ್ಕೆ ಸಹಾಯವಾಗುತ್ತಿದೆ ಎಂದು ಹೇಳಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಅಮೆರಿಕ ನಿಯೋಜಿತ ರಾಯಭಾರಿ ಸೆರ್ಗಿಯೊ ಗೋರ್- ಮೋದಿ, ಜೈಶಂಕರ್ ಭೇಟಿ; Tariff ಒತ್ತಡದ ನಡುವೆ ಭಾರತ-ಅಮೆರಿಕ ಸಂಬಂಧ ಸುಧಾರಣೆಯ ಸೂಚನೆ?

ಅಫ್ಘಾನಿಸ್ತಾನ ನಮ್ಮೊಂದಿಗೆ ಗಡಿ ಹಂಚಿಕೊಂಡಿರುವ ನೆರೆ ರಾಷ್ಟ್ರ- S Jaishankar; ಭಾರತದೊಂದಿಗೆ POK ವಿಲೀನದ ಸುಳಿವು; ಚೀನಾಗೂ ಶಾಕ್!

ಅಬ್ಬಬ್ಬಾ ರೋಮಾಂಚನ: ಅದ್ಭುತ ಸೃಷ್ಟಿಸಿದ ರಿಷಬ್ ಶೆಟ್ಟಿಗೆ ರಾಷ್ಟ್ರಪ್ರಶಸ್ತಿ ಕೊಡಲೇಬೇಕು - ತಮಿಳು ನಿರ್ದೇಶಕ ಅಟ್ಲೀ

Pakistan: ಇಸ್ರೇಲ್ ವಿರೋಧಿ ಪ್ರತಿಭಟನಾ ಜಾಥಾ, ಪೋಲೀಸರ ಗುಂಡೇಟಿಗೆ 11 ಮಂದಿ ಬಲಿ! Video

ಉತ್ತರ ಪ್ರದೇಶಕ್ಕೆ ಭೇಟಿ ನೀಡಿದ ತಾಲಿಬಾನ್ ಸಚಿವನಿಗೆ ಅದ್ಧೂರಿ ಸ್ವಾಗತ, ಸರ್ಕಾರದ ಭದ್ರತೆ; ಯೋಗಿಗೆ ನಾಚಿಕೆಯಾಗಬೇಕು- SP ಸಂಸದ ಶಫೀಕರ್

SCROLL FOR NEXT