ಯೋಗಗುರು ರಾಮ್ದೇವ್ 
ದೇಶ

ತುಪ್ಪ ತಿಂದರೆ ಚಾಂಪಿಯನ್ ಆಗೋದು ದನದ ಮಾಂಸ ತಿಂದರಲ್ಲಾ: ಬಾಬಾ ರಾಮ್‌ದೇವ್‌

ದನದ ಮಾಂಸ ತಿಂದಿದ್ದರಿಂದ ಒಲಿಂಪಿಕ್ಸ್ ನಲ್ಲಿ ಉಸೇನ್ ಬೋಲ್ಟ್ 9 ಚಿನ್ನದ ಪದಕಗಳನ್ನು ಗೆಲ್ಲಲು ಸಾಧ್ಯವಾಯಿತು ಎಂಬ ದೆಹಲಿ ಬಿಜೆಪಿ ಸಂಸದ ಉದೀತ್ ರಾಜ್...

ನವದೆಹಲಿ: ದನದ ಮಾಂಸ ತಿಂದಿದ್ದರಿಂದ ಒಲಿಂಪಿಕ್ಸ್ ನಲ್ಲಿ ಉಸೇನ್ ಬೋಲ್ಟ್ 9 ಚಿನ್ನದ ಪದಕಗಳನ್ನು ಗೆಲ್ಲಲು ಸಾಧ್ಯವಾಯಿತು ಎಂಬ ದೆಹಲಿ ಬಿಜೆಪಿ ಸಂಸದ ಉದೀತ್ ರಾಜ್ ಅವರ ಹೇಳಿಕೆಗೆ ತಿರುಗೇಟು ನೀಡಿರುವ ಯೋಗಗುರು ಬಾಬಾ ರಾಮ್ ದೇವ್ ಗೋವಿನ ತುಪ್ಪ ತಿಂದರೆ ಚಾಂಪಿಯನ್ ಆಗೋದು ದನದ ಮಾಂಸ ತಿಂದರಲ್ಲಾ ಎಂದು ಹೇಳಿದ್ದಾರೆ. 
ಭಾರತೀಯ ಕ್ರೀಡಾಪಟುಗಳು ದನದ ಮಾಂಸ ತಿನ್ನಲ್ಲು ಯಾವುದೇ ತೊಂದರೆ ಇಲ್ಲ. ಆದರೆ ಒಲಿಂಪಿಕ್ಸ್ ನಲ್ಲಿ ನಮಗೆ ಚಿನ್ನದ ಪದಕಗಳು ಬೇಕಷ್ಟೇ ಎಂದು ಟ್ವೀಟ್ ಮಾಡುವ ಮೂಲಕ ವಿವಾದಕ್ಕೆ ಕಾರಣರಾಗಿದ್ದರು. 
ಆಗಸ್ಟ್ 28ರಂದು ಟ್ವೀಟ್ ಮಾಡಿದ್ದ ರಾಜ್ ಅವರು, ಬಡವನಾಗಿದ್ದ ಉಸೇನ್ ಬೋಲ್ಟ್ ಗೆ ಆತನ ಕೋಚ್ ದನದ ಮಾಂಸ ತಿನ್ನುವಂತೆ ಹೇಳಿದ್ದರು. ಅದನ್ನು ಅನುಸರಿಸಿದ್ದರಿಂದ ಬೋಲ್ಟ್ ಒಲಿಂಪಿಕ್ಸ್ ನಲ್ಲಿ 9 ಚಿನ್ನದ ಪದಕ ಗೆಲ್ಲಲು ಸಾಧ್ಯವಾಗಿತ್ತು ಎಂದು ಟ್ವೀಟಿಸಿದ್ದರು. 
ಭಾರತೀಯ ಕ್ರೀಡಾಪಟುಗಳು ಗೋಮಾಂಸ ಸೇವನೆ ಮಾಡಬಹುದು ಎಂಬ ಉದೀತ್ ರಾಜ್ ಅವರ  ಟ್ವೀಟ್ ಇತರ ಬಿಜೆಪಿ ನಾಯಕರ ಕೆಂಗಣ್ಣಿಗೆ ಗುರಿಯಾಗಿತ್ತು. 
ಪತಾಂಜಲಿ ಹೆಸರಿನಲ್ಲಿ ಬಾಬಾ ರಾಮ್ ದೇವ್ ಅವರು ಶುದ್ಧ ಸಸ್ಯಹಾರಿ ಪದಾರ್ಥಗಳನ್ನು ತಯಾರಿಸಿ ಜಗತ್ತಿನಾದ್ಯಂತ ಮಾರಾಟ ಮಾಡುತ್ತಿದ್ದಾರೆ. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಲಾಲ್ ಬಾಗ್ ಅಭಿವೃದ್ಧಿಗೆ 10 ಕೋಟಿ ರೂ; ಸುರಂಗ ರಸ್ತೆ ಯೋಜನೆಯಿಂದ ಸಸ್ಯೋದ್ಯಾನದ ಮೇಲೆ ಯಾವುದೇ ಎಫೆಕ್ಟ್ ಆಗಲ್ಲ: ಡಿ.ಕೆ ಶಿವಕುಮಾರ್; Video

Aligarh Businessman Murder: ಹಿಂದೂ ಮಹಾಸಭಾ ನಾಯಕಿ ಪೂಜಾ ಶಕುನ್ ಪಾಂಡೆ ಬಂಧನ! ಉದ್ಯಮಿಗೆ ಲೈಂಗಿಕ ಕಿರುಕುಳ ನೀಡಿದ್ರಾ?

ಬೆಳಗಾವಿ ಡಿಸಿಸಿ ಬ್ಯಾಂಕ್ ಚುನಾವಣೆ: ಒಂದಾದ ಜಾರಕಿಹೊಳಿ ಬ್ರದರ್ಸ್‌ಗೆ ಜಾಕ್‌ಪಾಟ್; ರಮೇಶ್ ಕತ್ತಿ ಬಣಕ್ಕೆ ಶಾಕ್!

ನೊಬೆಲ್ ಶಾಂತಿ ಪ್ರಶಸ್ತಿ ಘೋಷಣೆಯಾಗುತ್ತಿದ್ದಂತೆಯೇ Maria Corina Machado ವಿವಾದಕ್ಕೆ ಗುರಿ; ಭುಗಿಲೆದ್ದ ಅಶಾಂತಿ!

ಅಫ್ಘಾನಿಸ್ತಾನ ನಮ್ಮೊಂದಿಗೆ ಗಡಿ ಹಂಚಿಕೊಂಡಿರುವ ನೆರೆ ರಾಷ್ಟ್ರ- S Jaishankar; ಭಾರತದೊಂದಿಗೆ POK ವಿಲೀನದ ಸುಳಿವು; ಚೀನಾಗೂ ಶಾಕ್!

SCROLL FOR NEXT