ರಾಜಮಾತೆ ಪದ್ಮಿನಿ ದೇವಿಯೊಂದಿಗೆ ಪ್ರತಿಭಟನಾಕಾರರು 
ದೇಶ

ಜೆಡಿಎ ವಿರುದ್ಧ ಜೈಪುರ ರಾಜಮನೆತನದಿಂದ ಪ್ರತಿಭಟನೆ

ರಾಜ್ ಮಹಲ್ ಅರಮನೆ ಸಂಬಂಧ ಜೈಪುರ ಅಭಿವೃದ್ಧಿ ಪ್ರಾಧಿಕಾರ(ಜೆಡಿಎ) ವಿರುದ್ಧ ಜೈಪುರ ರಾಜಮನೆತನದ ರಾಜಮಾತೆ ಪದ್ಮಿನಿ ದೇವಿ...

ಜೈಪುರ: ರಾಜ್ ಮಹಲ್ ಅರಮನೆ ಸಂಬಂಧ ಜೈಪುರ ಅಭಿವೃದ್ಧಿ ಪ್ರಾಧಿಕಾರ(ಜೆಡಿಎ) ವಿರುದ್ಧ ಜೈಪುರ ರಾಜಮನೆತನದ ರಾಜಮಾತೆ ಪದ್ಮಿನಿ ದೇವಿ ಅವರು ಸಾವಿರಾರು ಬೆಂಬಲಿಗರೊಂದಿಗೆ ಗುರುವಾರ ಬೀದಿಗಿಳಿದು ಹೋರಾಟ ನಡೆಸುತ್ತಿದ್ದಾರೆ.
ಜೆಡಿಎ ಅಧಿಕಾರಿಗಳು ಅರಮನೆಯ ಮುಖ್ಯ ದ್ವಾರವನ್ನು ಬಂದ್ ಮಾಡುವ ರಾಜಮನೆತನಕ್ಕೆ ಅಗೌರವ ತೋರಿದ್ದಾರೆ ಎಂದು ಪದ್ಮಿನಿ ದೇವಿ ಅವರು ಆರೋಪಿಸಿದ್ದಾರೆ. ಮುಖ್ಯ ದ್ವಾರ ತನ್ನ ಜಾಗದಲ್ಲಿದೆ ಎಂದು ಕಳೆದ ವಾರ ಜೆಡಿಎ ಅದನ್ನು ಬಂದ್ ಮಾಡಿತ್ತು.
ಇಂದು ಜೆಡಿಎ ವಿರುದ್ಧ ಬಲಪ್ರದರ್ಶನಕ್ಕೆ ಮುಂದಾದ ರಾಜಮಾತೆ ನಗರದ ಅರಮನೆಯಿಂದ ತ್ರಿಪೊಲಿಯಾ ಗೇಟ್ ವರೆಗೆ ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಸಿದರು. ಈ ವೇಳೆ ತೆರೆದ ವಾಹನದಿಂದಲೇ ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿದ ಪದ್ಮಿನಿ ದೇವಿ ಅವರು, ಇಂದು ಇಡೀ ಜೈಪೂರ ನಮ್ಮೊಂದಿಗಿದೆ. ರಾಜ್ ಮಹಲ್ ಅರಮನೆಗೆ ಸಂಬಂಧಿಸಿದಂತೆ ಜೆಡಿಎ ಹಸ್ತಕ್ಷೇಪದಿಂದ ನನಗೆ ತುಂಬಾ ನೋವಾಗಿದೆ ಎಂದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ರಾಜ್ಯದಲ್ಲಿ ಮಳೆ ಅಭಾವ: ನಾಲ್ಕು ಕಂದಾಯ ವಿಭಾಗಗಳಲ್ಲಿ ಮೋಡ ಬಿತ್ತನೆ; 27 ಕೋಟಿ ರೂ ವೆಚ್ಚ- ಜಲ ಸಂಪನ್ಮೂಲ ಸಚಿವ ಚಲುವರಾಯಸ್ವಾಮಿ!

ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಪ್ರದೋಶ್ ಮಾಫಿ ಸಾಕ್ಷಿ ಅರ್ಜಿ ಅಂಗೀಕರಿಸಿದ ಕೋರ್ಟ್; 'ದಾಸ'ನಿಗೆ ಬಿಗ್ ಶಾಕ್!

Congress ಶಾಸಕ ಪ್ರದೀಪ್ ಈಶ್ವರ್ ವಿರುದ್ಧ ಜಾಮೀನು ರಹಿತ ಬಂಧನ ವಾರಂಟ್ ಜಾರಿ, ಬಂಧನ ಭೀತಿ!

ಭಾರತದಲ್ಲಿ ಫುಡ್‌ ಕಂಪನಿಗಳ ಲಾಬಿ: ಚಿಪ್ಸ್ ಮತ್ತು ಕೂಲ್ ಡ್ರಿಂಕ್ಸ್ ಮೇಲೆ ‘ರೆಡ್‌ ಅಲರ್ಟ್’ ಪ್ರಸ್ತಾವ ಕೈಬಿಟ್ಟ FSSAI, ಆಗಿದ್ದೇನು?

'ಬ್ರೋ, ನೀವು ಸುಮ್ಮನೆ ಸಮಯ ವ್ಯರ್ಥ ಮಾಡುತ್ತಿದ್ದೀರಿ': ಎರಡನೇ ಟೆಸ್ಟ್ ಪಂದ್ಯದಲ್ಲಿ ಶ್ರೀಲಂಕಾ ನಾಯಕನ ಕಾಲೆಳೆದ ಸರ್ಫರಾಜ್ ಖಾನ್!