ಸರ್ವೇಶಾ ದೇವಿ 
ದೇಶ

ಬ್ಯಾಂಕ್ ಕ್ಯೂನಲ್ಲಿ ಜನಿಸಿದ್ದ ಮಗುವಿಗೆ ಖಜಾಂಚಿ ನಾಥ್ ಎಂದು ನಾಮಕರಣ

ನೋಟ್ ನಿಷೇಧದ ನಂತರ ಹಣ ಡ್ರಾ ಮಾಡಲು ಉತ್ತರ ಪ್ರದೇಶದ ದೆಹಾತ್ ಜಿಲ್ಲೆಯ ಬ್ಯಾಂಕ್‍ ನಲ್ಲಿ ಸರತಿ ಸಾಲಿನಲ್ಲಿ ನಿಂತು ಕಾಯುತ್ತಿದ್ದ...

ಕಾನ್ಪುರ: ನೋಟ್ ನಿಷೇಧದ ನಂತರ ಹಣ ಡ್ರಾ ಮಾಡಲು ಉತ್ತರ ಪ್ರದೇಶದ ದೆಹಾತ್ ಜಿಲ್ಲೆಯ ಬ್ಯಾಂಕ್‍ ನಲ್ಲಿ ಸರತಿ ಸಾಲಿನಲ್ಲಿ ನಿಂತು ಕಾಯುತ್ತಿದ್ದ ವೇಳೆಯೇ ಗರ್ಭಿಣಿಯೊಬ್ಬರು ಗಂಡು ಮಗುವಿಗೆ ಜನ್ಮ ನೀಡಿದ್ದರು. ತಾಯಿ, ಮಗು ಇಬ್ಬರು ಆರೋಗ್ಯವಾಗಿದ್ದು, ಈಗ ಆ ಮಗವಿಗೆ ಖಜಾಂಚಿ(ಕ್ಯಾಷಿಯರ್) ಎಂದು ನಾಮಕರಣ ಮಾಡಲಾಗಿದೆ.
ಕಳೆದ ಶುಕ್ರವಾರ ತಮ್ಮ ಅತ್ತೆಯೊಂದಿಗೆ ಬ್ಯಾಂಕ್‍ಗೆ ಬಂದಿದ್ದ ಸರ್ವೇಶಾ ದೇವಿ ಎಂಬ ಮಹಿಳೆ ಬ್ಯಾಂಕ್ ಆವರಣದಲ್ಲೇ ಗಂಡು ಮಗುವಿಗೆ ಜನ್ಮ ನೀಡಿದ್ದರು. ಬಳಿಕ ಬ್ಯಾಂಕ್ ಬಳಿ ಆ್ಯಂಬುಲೆನ್ಸ್ ಬರಲು ಕಷ್ಟವಾಗಿದ್ದರಿಂದ ಪೊಲೀಸರೇ ಮಹಿಳೆ ಮತ್ತು ಮಗುವನ್ನು ಆಸ್ಪತ್ರೆಗೆ ದಾಖಲಿಸಿದ್ದರು.
ಬ್ಯಾಂಕ್ ನಲ್ಲಿ ಹುಟ್ಟಿ ಬದುಕುಳಿದ ಮಗುವಿಗೆ ನಾವು ಖಜಾಂಚಿ ಎಂದು ನಾಮಕರಣ ಮಾಡಿದ್ದೇವೆ ಎಂದು ಅವರ ಚಿಕ್ಕಪ್ಪ ಅನಿಲ್ ನಾಥ್ ಅವರು ಹೇಳಿದ್ದಾರೆ.
ಸರ್ವೇಶಾಳ ಪತಿ ಈ ವರ್ಷಾರಂಭಕ್ಕೆ ಅಪಘಾತವೊಂದರಲ್ಲಿ ಸಾವಿಗೀಡಾಗಿದ್ದರು. ಹಾಗಾಗಿ ಸರ್ಕಾರದಿಂದ ಸಿಗುವ ಪರಿಹಾರ ಧನವನ್ನು ಪಡೆಯಲು ಆಕೆ ಬ್ಯಾಂಕ್ ‍ಗೆ ಬಂದಿದ್ದಳು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

'ದೊಡ್ಡ ಆಘಾತ': ಅಮೆರಿಕದಲ್ಲಿ ಶೇ.50 ಸುಂಕ ಜಾರಿ, 48.2 ಬಿಲಿಯನ್ ಡಾಲರ್ ಮೌಲ್ಯದ ಭಾರತದ ರಫ್ತಿಗೆ ಹೊಡೆತ

ಜಮ್ಮುವಿನಲ್ಲಿ ಭೀಕರ ಮಳೆಯಿಂದ ಭಾರೀ ಅನಾಹುತ ಸೃಷ್ಟಿ: ವೈಷ್ಣೋದೇವಿ ಮಾರ್ಗದಲ್ಲಿ ಭೂಕುಸಿತ, ಕನಿಷ್ಠ 32 ಮಂದಿ ಸಾವು

Shocking: ಆಸಿಸ್ ಕ್ರಿಕೆಟ್ ದಿಗ್ಗಜ Michael Clarkeಗೆ 'ಚರ್ಮದ ಕ್ಯಾನ್ಸರ್'!

ಭಾರತದ ಮೇಲೆ ಸುಂಕಾಸ್ತ್ರ ಜಾರಿ: ಮತ್ತೆ ಇಂಡೋ-ಪಾಕ್ ಯುದ್ಧ ನಿಲ್ಲಿಸಿದ್ದು ನಾನೇ ಎಂದು ಪುನರುಚ್ಛರಿಸಿದ ಡೊನಾಲ್ಡ್ ಟ್ರಂಪ್

ದೇಶಾದ್ಯಂತ ಗಣೇಶ ಚತುರ್ಥಿ ಸಂಭ್ರಮ: ದೇವಾಲಯಗಳಲ್ಲಿ ವಿಶೇಷ ಪೂಜೆ, ರಾಷ್ಟ್ರಪತಿ, ಪ್ರಧಾನಿ, ಮುಖ್ಯಮಂತ್ರಿಗಳಿಂದ ಶುಭಾಶಯ

SCROLL FOR NEXT